ಏನ್ ನಡೀತಿದೆ ಕರ್ನಾಟಕದಲ್ಲಿ ನೋಡಿಯೇಬಿಡಬೇಕು ಎಂದು ನಿರ್ಧರಿಸಿದ ಯಮ, ಸೀದಾ ಬೆಂಗಳೂರಿನ ಮೆಜೆಸ್ಟಿಕ್ಗೆ ಬಂದಿಳಿದ. ನೋಡುತ್ತಾನೆ, ಬಸ್ಸ್ಟ್ಯಾಂಡಲ್ಲಿ ಬಸ್ಸೂ ಇಲ್ಲ, ಜನರೂ ಇಲ್ಲ. ಅತ್ತ ರೈಲುಗಳೂ ಇಲ್ಲ, ಲಾರಿಗಳೂ ಇಲ್ಲ. ಮತ್ತೆ ಅಪಘಾತಗಳಾಗಲು ಹೇಗೆ ಸಾಧ್ಯ? ಜನರೇ ಇಲ್ಲದಿದ್ದ ಮೇಲೆ ಹೊಡೆದಾಟ, ಕೊಲೆಗಳಾಗಲು ಹೇಗೆ ಸಾಧ್ಯ?