<p>‘ಸಾ, ಮನ್ನೆ ದೇವರಗುಡ್ಡದ ಗೊರವಯ್ಯ ವ್ಯಾಧಿ ಬೂದಿ ಆದೀತಲೇ ಪರಾಕ್ ಅಂತ ಭವಿಷ್ಯ ಹೇಳ್ಯದೆ. ಸದ್ಯ ಮಾರೀ ಸೋಂಕು ಕೊರೊನಾ ಬೂದಿ ಆದ್ರೆ ಸಾಕಾಗ್ಯದೆಕಣ್ರಿ ಸಾ’ ಎಂದೆ.</p>.<p>‘ಅಲ್ಲ ಕನೋ, ಮೈಗೆ ಬರೋ ವ್ಯಾಧಿ ಬೂದಿ ಆಗಬೌದು, ಆದ್ರೆ ಬುದ್ಧಿಗೆ ಬಂದಿರಾ ವ್ಯಾಧಿ ಬೂದಿ ಆಗದು ಕಷ್ಟ!’ ಅಂದ್ರು ತುರೇಮಣೆ.</p>.<p>‘ಅದ್ಯಾವುದು ಸಾ ಬುದ್ಧಿಗೆ ಬಂದಿರಾ ವ್ಯಾಧಿ? ಯಾರಿಗೆ ಬಂದದೆ?’ ಅಂತ ಆಶ್ಚರ್ಯದಲ್ಲಿ ಕೇಳಿದೆ.</p>.<p>‘ದಿನಾ ಪೇಪರ್ ಓದಕುಲ್ಲವಲಾ! ಈ ಉಪಚುನಾವಣೇಲಿ ಪಿತೃಪಕ್ಸ, ಮಾತೃಪಕ್ಸ, ಪ್ಲವರ್ ಪಕ್ಸಗಳ ತುಂಡರಸರು ತಲಾತಟಿಗೆ ಲಡ್ಡುಲಸೆ ಅಂತ ಗೊಳ್ಳೆನರ ಕಿತ್ತೋಗಗಂಟಾ ಬೈಕ್ಯಂಡು ತಮ್ಮ ತಮ್ಮ ಕೊಳಕೆಲ್ಲಾ ಜನಗಳ ಮುಂದುಕ್ಕೆ ತಂದು ಸುರೀತಾವ್ರೆ!’</p>.<p>‘ರಾಜಕೀಯ ರಾಜಕಾಲುವೆ ಆಗೋಗ್ಯದೆ! ಇವುರೆಲ್ಲಾ ಡೌನ್ಲೋಡ್ ಮಾಡಿದ ಕೊಳಕಿನ ದುರ್ವಾಸನೆ ತಡೆಯಕಾಯ್ತಿಲ್ಲ ಸಾ’.</p>.<p>‘ಇದು ಮಲರಂಜನೆ ಕನೋ. ಪೆಟ್ರೋಲ್- ಡೀಸೆಲ್ ರೇಟೇರಿಸ್ಯರಂತೆ, ಲಸಿಕೆ ಸಿಕ್ಕಿದೋರಿಗೆ ಸೀರುಂಡೆ ಅಂತ ಪುಕಾರಾಗ್ಯದೆ. ಎತ್ತಿಲ್ಲದೋರಿಗೆ ಕ್ವಾಣನೇ ಸಂಜೀವ ಅಂದಂಗೆ, ಇವರು ನಮ್ಮ ನಾಯಕರು ಅಂತ ಇನ್ನೂ ಓಲೈಸಬೇಕಾಗಿರದು ನಮ್ಮ ದುರಾದೃಷ್ಟಕಪ್ಪ. ಕಾಲಭೈರವ ಅದ್ಯಾವಾಗ ಒಳ್ಳೆ ಬುದ್ಧಿ ಕೊಟ್ಟಾನೋ ಕಾಣೆ!’</p>.<p>‘ಮಂತೆ ಅಷ್ಟಿಲ್ಲದೇ ಸರೀಪ್ ಸಾಯೇಬ್ರು ‘ಸೋರುತಿವುದು ಮನೆಯ ಮಾಳಿಗೆ ಅಜ್ಞಾನದಿಂದ’ ಅಂತ ಪದ ಹಾಡಿಲ್ಲವೇ?’ ಅಂದೆ ನಾನು. ಟೀ ಕುಡೀತಾ ಕುಂತುದ್ದ ವಸಂತ ಮುಲುಕಾಡತೊಡಗಿದ.</p>.<p>‘ಇದ್ಯಾಕ್ಲಾ ಸೊಳ್ಳೆಮನಲೀ ಡ್ರಗ್ ಸಿಂಗಲೀಕರ ಥರಾ ಕುಂತಕಡೇನೇ ಕೊಸೀತಿದ್ದಯ್?’ ಅಂತ ಕೇಳಿದೆ. ಅವ ಮೆಲ್ಲಗೆ ಹತ್ತಿರ ಬಂದು ಕೇಳಿದ-‘ಅಲ್ಲ ಕನೋ, ನಮ್ಮ ಸ್ನೇಯಿತ್ರು ಬಡಾ ಮಕಾನ್ ಸರಿಪ್ ಸಾಯೇಬ್ರು ಪದ ಯಾವಾಗ ಬರೆಯಕ್ಕೆ ಸುರು ಮಾಡಿದ್ರು ಸೋರುತಿವುದು ಮನೆಯ ಮಾಳಿಗೆ ಅಂತ’ ಅಂದ. ಆವನ ಅಜ್ಞಾನದ ಮಾತುಗಳಿಗೆ ಮೂಗಂಡುಗ ಸಿಟ್ಟು ಬಂದೋಯ್ತು!</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಸಾ, ಮನ್ನೆ ದೇವರಗುಡ್ಡದ ಗೊರವಯ್ಯ ವ್ಯಾಧಿ ಬೂದಿ ಆದೀತಲೇ ಪರಾಕ್ ಅಂತ ಭವಿಷ್ಯ ಹೇಳ್ಯದೆ. ಸದ್ಯ ಮಾರೀ ಸೋಂಕು ಕೊರೊನಾ ಬೂದಿ ಆದ್ರೆ ಸಾಕಾಗ್ಯದೆಕಣ್ರಿ ಸಾ’ ಎಂದೆ.</p>.<p>‘ಅಲ್ಲ ಕನೋ, ಮೈಗೆ ಬರೋ ವ್ಯಾಧಿ ಬೂದಿ ಆಗಬೌದು, ಆದ್ರೆ ಬುದ್ಧಿಗೆ ಬಂದಿರಾ ವ್ಯಾಧಿ ಬೂದಿ ಆಗದು ಕಷ್ಟ!’ ಅಂದ್ರು ತುರೇಮಣೆ.</p>.<p>‘ಅದ್ಯಾವುದು ಸಾ ಬುದ್ಧಿಗೆ ಬಂದಿರಾ ವ್ಯಾಧಿ? ಯಾರಿಗೆ ಬಂದದೆ?’ ಅಂತ ಆಶ್ಚರ್ಯದಲ್ಲಿ ಕೇಳಿದೆ.</p>.<p>‘ದಿನಾ ಪೇಪರ್ ಓದಕುಲ್ಲವಲಾ! ಈ ಉಪಚುನಾವಣೇಲಿ ಪಿತೃಪಕ್ಸ, ಮಾತೃಪಕ್ಸ, ಪ್ಲವರ್ ಪಕ್ಸಗಳ ತುಂಡರಸರು ತಲಾತಟಿಗೆ ಲಡ್ಡುಲಸೆ ಅಂತ ಗೊಳ್ಳೆನರ ಕಿತ್ತೋಗಗಂಟಾ ಬೈಕ್ಯಂಡು ತಮ್ಮ ತಮ್ಮ ಕೊಳಕೆಲ್ಲಾ ಜನಗಳ ಮುಂದುಕ್ಕೆ ತಂದು ಸುರೀತಾವ್ರೆ!’</p>.<p>‘ರಾಜಕೀಯ ರಾಜಕಾಲುವೆ ಆಗೋಗ್ಯದೆ! ಇವುರೆಲ್ಲಾ ಡೌನ್ಲೋಡ್ ಮಾಡಿದ ಕೊಳಕಿನ ದುರ್ವಾಸನೆ ತಡೆಯಕಾಯ್ತಿಲ್ಲ ಸಾ’.</p>.<p>‘ಇದು ಮಲರಂಜನೆ ಕನೋ. ಪೆಟ್ರೋಲ್- ಡೀಸೆಲ್ ರೇಟೇರಿಸ್ಯರಂತೆ, ಲಸಿಕೆ ಸಿಕ್ಕಿದೋರಿಗೆ ಸೀರುಂಡೆ ಅಂತ ಪುಕಾರಾಗ್ಯದೆ. ಎತ್ತಿಲ್ಲದೋರಿಗೆ ಕ್ವಾಣನೇ ಸಂಜೀವ ಅಂದಂಗೆ, ಇವರು ನಮ್ಮ ನಾಯಕರು ಅಂತ ಇನ್ನೂ ಓಲೈಸಬೇಕಾಗಿರದು ನಮ್ಮ ದುರಾದೃಷ್ಟಕಪ್ಪ. ಕಾಲಭೈರವ ಅದ್ಯಾವಾಗ ಒಳ್ಳೆ ಬುದ್ಧಿ ಕೊಟ್ಟಾನೋ ಕಾಣೆ!’</p>.<p>‘ಮಂತೆ ಅಷ್ಟಿಲ್ಲದೇ ಸರೀಪ್ ಸಾಯೇಬ್ರು ‘ಸೋರುತಿವುದು ಮನೆಯ ಮಾಳಿಗೆ ಅಜ್ಞಾನದಿಂದ’ ಅಂತ ಪದ ಹಾಡಿಲ್ಲವೇ?’ ಅಂದೆ ನಾನು. ಟೀ ಕುಡೀತಾ ಕುಂತುದ್ದ ವಸಂತ ಮುಲುಕಾಡತೊಡಗಿದ.</p>.<p>‘ಇದ್ಯಾಕ್ಲಾ ಸೊಳ್ಳೆಮನಲೀ ಡ್ರಗ್ ಸಿಂಗಲೀಕರ ಥರಾ ಕುಂತಕಡೇನೇ ಕೊಸೀತಿದ್ದಯ್?’ ಅಂತ ಕೇಳಿದೆ. ಅವ ಮೆಲ್ಲಗೆ ಹತ್ತಿರ ಬಂದು ಕೇಳಿದ-‘ಅಲ್ಲ ಕನೋ, ನಮ್ಮ ಸ್ನೇಯಿತ್ರು ಬಡಾ ಮಕಾನ್ ಸರಿಪ್ ಸಾಯೇಬ್ರು ಪದ ಯಾವಾಗ ಬರೆಯಕ್ಕೆ ಸುರು ಮಾಡಿದ್ರು ಸೋರುತಿವುದು ಮನೆಯ ಮಾಳಿಗೆ ಅಂತ’ ಅಂದ. ಆವನ ಅಜ್ಞಾನದ ಮಾತುಗಳಿಗೆ ಮೂಗಂಡುಗ ಸಿಟ್ಟು ಬಂದೋಯ್ತು!</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>