<p>ಕಣ್ಣಲ್ಲಿ ನೀರು ತುಂಬಿಕೊಂಡು ಹರಟೆಕಟ್ಟೆಗೆ ಬಂದ ತೆಪರೇಸಿ. ಎಲ್ಲರಿಗೂ ಆತಂಕ. ‘ಏನಾಯ್ತೋ? ಯಾಕೆ ಕಣ್ಣಲ್ಲಿ ನೀರು?’ ಗುಡ್ಡೆ ಕೇಳಿದ. ತೆಪರೇಸಿ ಮಾತಾಡಲಿಲ್ಲ.</p>.<p>‘ಯಾರಾದ್ರು ಬೈದ್ರೇನೋ, ಹೊಡೆದ್ರೇನೋ?’ ದುಬ್ಬೀರ ವಿಚಾರಿಸಿದ. ‘ಏಯ್, ನಮ್ ತೆಪರೇಸಿ ಮುಟ್ಟೋನು ಯಾವನದಾನ್ಲೆ? ಅವ್ನು ಪರ್ಸಿ ಪೈಕಿ ಪೈಲ್ವಾನ ಇದ್ದಂಗೆ’ ಕೊಟ್ರೇಶಿ ದುಬ್ಬೀರನ ಮಾತಿಗೆ ಆಕ್ಷೇಪಿಸಿದ.</p>.<p>ಗುಡ್ಡೆಗೆ ಸಿಟ್ಟು ಬಂತು ‘ಲೇಯ್ ತೆಪರ, ಹುಲಿಯಾ ತರ ಕಣ್ಣೀರು ತರಿಸಬಾರ್ದು, ಕುಮಾರಣ್ಣನ ತರ ಕಣ್ಣೀರು ಹಾಕಬಾರ್ದು, ರಾಜಾಹುಲಿ ತರ ಕಣ್ಣೀರು ಒರೆಸಬೇಕು ಕಣಲೆ’ ಅಂದ.</p>.<p>‘ಓ... ಇದು ನಮ್ಮ ಕಟೀಲ್ ಸಾಹೇಬ್ರ ಮಾತು. ಕಾಪಿ ಹೊಡೀಬೇಡ ಮಗನೆ, ಸ್ವಂತ ಮಾತಾಡು’ ದುಬ್ಬೀರ ನಕ್ಕ.</p>.<p>‘ನಮ್ಮ ರಾಜಕಾರಣಿಗಳಿಗೆ ಈ ಕಣ್ಣೀರು ಹಾಕೋದು ಒಂದು ಚಾಳಿ ಆಗೇತಪ. ಈಟೀಟುಕು ಅಳ್ತಾರೆ, ಯಾಕಂಗೆ?’</p>.<p>‘ಯಾಕೇಂದ್ರೆ? ಅದು ಅವರಿಷ್ಟ’ ಗುಡ್ಡೆ ಕಿಸಕ್ಕೆಂದ.</p>.<p>‘ಏಯ್, ಅವರಿಷ್ಟ ಅಂದ್ರೆ ಮನೇಲಿ ಕುತ್ಕಂಡು ಅಳಬೇಕು. ಟಿ.ವಿ.ಯೋರ ಮುಂದೆ ಯಾಕೆ ಅಳಬೇಕು? ಮೊದ್ಲೇ ಟಿ.ವಿ.ಯೋರು ಈ ರಾಜಕಾರಣಿ ಯಾಕೆ ಅತ್ತ, ಎಷ್ಟ್ ಅತ್ತ, ಯಾರನ್ನ ನೆನೆಸ್ಕಂಡು ಅತ್ತ, ಆ ರಹಸ್ಯ ನಾವು ಬಯಲು ಮಾಡ್ತೀವಿ ಅಂತ ಕುಯ್ತಾರೆ ಅದ್ಕೆ ಹೇಳಿದೆ’.</p>.<p>‘ಹೋಗ್ಲಿ ಬಿಡ್ರಲೆ, ಅವ್ರು ಒಂದ್ಸಲ ಅತ್ತು ಅಧಿಕಾರಕ್ಕೆ ಬರ್ತಾರೆ, ನಾವು ಒಂದ್ಸಲ ವೋಟ್ ಹಾಕಿ ಐದು ವರ್ಷ ಅಳ್ತೀವಿ. ಈಗ ನಮ್ಮ ತೆಪರೇಸಿ ಯಾಕೆ ಅತ್ತ ಅದನ್ನ ಕೇಳ್ರಿ’ ದುಬ್ಬೀರ ಟ್ರ್ಯಾಕಿಗೆ ಬಂದ.</p>.<p>‘ಅದನ್ನ ನಾನೇ ಹೇಳ್ತೀನಿ ಬಿಡ್ರಪ’ ಎಂದ ತೆಪರೇಸಿ, ‘ಮನೇಲಿ ಪಮ್ಮಿಗೆ ಪಕೋಡ ಮಾಡು ಅಂದೆ. ಈರುಳ್ಳಿ ಹೆಚ್ಚಿ ಕೊಡಿ ಅಂದ್ಲು. ಹೆಚ್ಚುವಾಗ ಕಣ್ಣೀರು ಬಂತಪ. ಅಷ್ಟಕ್ಕೇ ಎಷ್ಟೆಲ್ಲ ಮಾತಾಡ್ತೀರಲೆ’ ಎಂದ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಣ್ಣಲ್ಲಿ ನೀರು ತುಂಬಿಕೊಂಡು ಹರಟೆಕಟ್ಟೆಗೆ ಬಂದ ತೆಪರೇಸಿ. ಎಲ್ಲರಿಗೂ ಆತಂಕ. ‘ಏನಾಯ್ತೋ? ಯಾಕೆ ಕಣ್ಣಲ್ಲಿ ನೀರು?’ ಗುಡ್ಡೆ ಕೇಳಿದ. ತೆಪರೇಸಿ ಮಾತಾಡಲಿಲ್ಲ.</p>.<p>‘ಯಾರಾದ್ರು ಬೈದ್ರೇನೋ, ಹೊಡೆದ್ರೇನೋ?’ ದುಬ್ಬೀರ ವಿಚಾರಿಸಿದ. ‘ಏಯ್, ನಮ್ ತೆಪರೇಸಿ ಮುಟ್ಟೋನು ಯಾವನದಾನ್ಲೆ? ಅವ್ನು ಪರ್ಸಿ ಪೈಕಿ ಪೈಲ್ವಾನ ಇದ್ದಂಗೆ’ ಕೊಟ್ರೇಶಿ ದುಬ್ಬೀರನ ಮಾತಿಗೆ ಆಕ್ಷೇಪಿಸಿದ.</p>.<p>ಗುಡ್ಡೆಗೆ ಸಿಟ್ಟು ಬಂತು ‘ಲೇಯ್ ತೆಪರ, ಹುಲಿಯಾ ತರ ಕಣ್ಣೀರು ತರಿಸಬಾರ್ದು, ಕುಮಾರಣ್ಣನ ತರ ಕಣ್ಣೀರು ಹಾಕಬಾರ್ದು, ರಾಜಾಹುಲಿ ತರ ಕಣ್ಣೀರು ಒರೆಸಬೇಕು ಕಣಲೆ’ ಅಂದ.</p>.<p>‘ಓ... ಇದು ನಮ್ಮ ಕಟೀಲ್ ಸಾಹೇಬ್ರ ಮಾತು. ಕಾಪಿ ಹೊಡೀಬೇಡ ಮಗನೆ, ಸ್ವಂತ ಮಾತಾಡು’ ದುಬ್ಬೀರ ನಕ್ಕ.</p>.<p>‘ನಮ್ಮ ರಾಜಕಾರಣಿಗಳಿಗೆ ಈ ಕಣ್ಣೀರು ಹಾಕೋದು ಒಂದು ಚಾಳಿ ಆಗೇತಪ. ಈಟೀಟುಕು ಅಳ್ತಾರೆ, ಯಾಕಂಗೆ?’</p>.<p>‘ಯಾಕೇಂದ್ರೆ? ಅದು ಅವರಿಷ್ಟ’ ಗುಡ್ಡೆ ಕಿಸಕ್ಕೆಂದ.</p>.<p>‘ಏಯ್, ಅವರಿಷ್ಟ ಅಂದ್ರೆ ಮನೇಲಿ ಕುತ್ಕಂಡು ಅಳಬೇಕು. ಟಿ.ವಿ.ಯೋರ ಮುಂದೆ ಯಾಕೆ ಅಳಬೇಕು? ಮೊದ್ಲೇ ಟಿ.ವಿ.ಯೋರು ಈ ರಾಜಕಾರಣಿ ಯಾಕೆ ಅತ್ತ, ಎಷ್ಟ್ ಅತ್ತ, ಯಾರನ್ನ ನೆನೆಸ್ಕಂಡು ಅತ್ತ, ಆ ರಹಸ್ಯ ನಾವು ಬಯಲು ಮಾಡ್ತೀವಿ ಅಂತ ಕುಯ್ತಾರೆ ಅದ್ಕೆ ಹೇಳಿದೆ’.</p>.<p>‘ಹೋಗ್ಲಿ ಬಿಡ್ರಲೆ, ಅವ್ರು ಒಂದ್ಸಲ ಅತ್ತು ಅಧಿಕಾರಕ್ಕೆ ಬರ್ತಾರೆ, ನಾವು ಒಂದ್ಸಲ ವೋಟ್ ಹಾಕಿ ಐದು ವರ್ಷ ಅಳ್ತೀವಿ. ಈಗ ನಮ್ಮ ತೆಪರೇಸಿ ಯಾಕೆ ಅತ್ತ ಅದನ್ನ ಕೇಳ್ರಿ’ ದುಬ್ಬೀರ ಟ್ರ್ಯಾಕಿಗೆ ಬಂದ.</p>.<p>‘ಅದನ್ನ ನಾನೇ ಹೇಳ್ತೀನಿ ಬಿಡ್ರಪ’ ಎಂದ ತೆಪರೇಸಿ, ‘ಮನೇಲಿ ಪಮ್ಮಿಗೆ ಪಕೋಡ ಮಾಡು ಅಂದೆ. ಈರುಳ್ಳಿ ಹೆಚ್ಚಿ ಕೊಡಿ ಅಂದ್ಲು. ಹೆಚ್ಚುವಾಗ ಕಣ್ಣೀರು ಬಂತಪ. ಅಷ್ಟಕ್ಕೇ ಎಷ್ಟೆಲ್ಲ ಮಾತಾಡ್ತೀರಲೆ’ ಎಂದ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>