ನಾನು ಫಜೀತಿಗೆ ಬಿದ್ದೆ. ಇಬ್ಬರೂ ಎಂದು ಉತ್ತರ ಹೇಳುವಂತಿಲ್ಲ. ‘ಬಿಹಾರಿಬಾಬು ಬಿದ್ದೇ ಭಾಳ ವರ್ಸಾತು. ಕುಮಾರಣ್ಣನಿಗೆ ರಾಗಿ ತೆನಿ, ಕಮಲದ ಹೂ ಎರಡೂ ಹಿಡ್ಕಂಡು ಯಾವ ಬಾವಿಗೆ ಬೀಳಬಕು ಅಂತ ಗೊಂದಲ. ಅಸಲು ನಿನ್ ಪ್ರಶ್ನಿನೇ ತಪ್ಪೈತಿ, ಈ ಇಬ್ಬರೇ ಅಲ್ಲ. ಕರುನಾಡಿನ ಹದಿನೇಳು ಶಾಸಕರು, ಬ್ಯಾರೆ ರಾಜ್ಯಗೋಳ ಶಾಸಕರು, ಹೀಂಗ ಬಾವಿಗೆ ಬಿದ್ದೋರು ಭಾಳ ಮಂದಿ ಅದಾರ’ ಎಂದೆ.