<p>ಮಂತ್ರಿ ಪದವಿ ಸಿಗದೆ ಹತಾಶರಾಗಿದ್ದ ಶಾಸಕರು ಚೀರಾಡಿ, ಹಾರಾಡಿ ಟಿ.ವಿ ಚಾನೆಲ್ಗಳ ಟಿಆರ್ಪಿ, ಪಕ್ಷದ ನಾಯಕರ ಬಿ.ಪಿ ಏರಿಸಿ, ತಾವೂ ಏರಿಸಿಕೊಂಡಿದ್ದರು.</p>.<p>ನೊಂದ ಶಾಸಕರಿಗೆ ಸಾಂತ್ವನ ಹೇಳಲು ಅಭಿಮಾನಿ ಕಾರ್ಯಕರ್ತರು ಹಾರ-ತುರಾಯಿ ಹಿಡಿದು ಬಂದರು.</p>.<p>‘ಹಾರ ಹಾಕಿ ಅಭಿನಂದಿಸೋ ಸಂದರ್ಭನೇನ್ರೀ ಇದು?’ ಶಾಸಕರು ಸಿಟ್ಟಿಗೆದ್ದರು.</p>.<p>‘ಮಕ್ಕಳಿರುವ ಮನೆಗೆ, ನಾಯಕರ ಮನೆಗೆ ಬರಿಗೈಲಿ ಹೋಗಬಾರದು ಅಂತ ಹಾರ ತಂದೆವು’ ಅಂದರು.</p>.<p>‘ಹೆಣ ನೋಡಲು ಹೋಗುವವರೂ ಹಾರ ತಗೊಂಡು ಹೋಗ್ತಾರೆ...’ ಶಾಸಕರು ಕೋಪದಿಂದ ಗೊಣಗಿಕೊಂಡರು.</p>.<p>‘ನಿಮಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ನೋವಾಗಿದೆ ಸಾರ್’ ಕಣ್ಣು ಒರೆಸಿಕೊಂಡರು.</p>.<p>‘ಯೋಗ್ಯತೆ ಇದ್ದರೂ ಯೋಗ ಇರಬೇಕು...’ ನೊಂದುಕೊಂಡರು.</p>.<p>‘ಇನ್ಮೇಲಾದ್ರೂ ಯೋಗಾಭ್ಯಾಸ ಮಾಡಿ ಸಾರ್’.</p>.<p>‘ಆ ಯೋಗ ಅಲ್ವಲೇ, ಹಣೆಬರಹ ನೆಟ್ಟಗಿರಬೇಕು...’</p>.<p>‘ಮಂತ್ರಿ ಮಾಡಿ ಅಂತ ನಾವೆಲ್ಲಾ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡ್ತೀವಿ ಸಾರ್’ ಒಬ್ಬ ವೀರಾವೇಶ ಪ್ರದರ್ಶಿಸಿದ.</p>.<p>‘ಬೇಡ, ಅತೃಪ್ತ ಆಪ್ತ ಶಾಸಕರೆಲ್ಲಾ ಡೆಲ್ಲಿಗೆ ಹೋಗಿ, ನಾಯಕತ್ವ ಬದಲಾವಣೆಗೆ ಹೋರಾಟ ಮಾಡ್ತೀವಿ’ ಅಂದ್ರು ಶಾಸಕರು.</p>.<p>ಅಷ್ಟರಲ್ಲಿ ಪಿ.ಎ ಫೋನ್ ತಂದು, ‘ಸಾರ್ ವರಿಷ್ಠರ ಆಫೀಸ್ನಿಂದ ಫೋನು, ಮಂತ್ರಿ ಮಾಡಲಿಲ್ಲ ಅಂತ ನಾಯಕರನ್ನು ಬಾಯಿಗೆ ಬಂದಂತೆ ಬೈಯೋದನ್ನು ನಿಲ್ಲಿಸದಿದ್ದರೆ ಮುಂದಿನ ಚುನಾವಣೆಗೆ ಟಿಕೆಟ್ ಕೊಡಲ್ವಂತೆ’ ಎಂದು ಕಿವಿಯಲ್ಲಿ ಹೇಳಿದ. ಫೋನ್ನಲ್ಲಿ ಮಾತನಾಡಿದ ಶಾಸಕರು ಮಂಕಾದರು.</p>.<p>‘ಜನಸೇವೆಗೆ ಮಂತ್ರಿ ಆಗಬೇಕೆಂದೇನೂ ಇಲ್ಲ. ಪಕ್ಷ ನನಗೆ ತಾಯಿ ಇದ್ದಂತೆ, ಸಿ.ಎಂ ತಂದೆ ಇದ್ದಂತೆ. ಪಕ್ಷದ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಪಕ್ಷದ ಕೆಲ್ಸ ಮಾಡ್ತೀನಿ, ನೀವು ಹೋಗ್ರಲಾ...’ ಎಂದು ಎಲ್ಲರನ್ನೂ ಕಳಿಸಿದ ಶಾಸಕರು ದುಃಖ ನುಂಗಿ ನೀರು ಕುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂತ್ರಿ ಪದವಿ ಸಿಗದೆ ಹತಾಶರಾಗಿದ್ದ ಶಾಸಕರು ಚೀರಾಡಿ, ಹಾರಾಡಿ ಟಿ.ವಿ ಚಾನೆಲ್ಗಳ ಟಿಆರ್ಪಿ, ಪಕ್ಷದ ನಾಯಕರ ಬಿ.ಪಿ ಏರಿಸಿ, ತಾವೂ ಏರಿಸಿಕೊಂಡಿದ್ದರು.</p>.<p>ನೊಂದ ಶಾಸಕರಿಗೆ ಸಾಂತ್ವನ ಹೇಳಲು ಅಭಿಮಾನಿ ಕಾರ್ಯಕರ್ತರು ಹಾರ-ತುರಾಯಿ ಹಿಡಿದು ಬಂದರು.</p>.<p>‘ಹಾರ ಹಾಕಿ ಅಭಿನಂದಿಸೋ ಸಂದರ್ಭನೇನ್ರೀ ಇದು?’ ಶಾಸಕರು ಸಿಟ್ಟಿಗೆದ್ದರು.</p>.<p>‘ಮಕ್ಕಳಿರುವ ಮನೆಗೆ, ನಾಯಕರ ಮನೆಗೆ ಬರಿಗೈಲಿ ಹೋಗಬಾರದು ಅಂತ ಹಾರ ತಂದೆವು’ ಅಂದರು.</p>.<p>‘ಹೆಣ ನೋಡಲು ಹೋಗುವವರೂ ಹಾರ ತಗೊಂಡು ಹೋಗ್ತಾರೆ...’ ಶಾಸಕರು ಕೋಪದಿಂದ ಗೊಣಗಿಕೊಂಡರು.</p>.<p>‘ನಿಮಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ನೋವಾಗಿದೆ ಸಾರ್’ ಕಣ್ಣು ಒರೆಸಿಕೊಂಡರು.</p>.<p>‘ಯೋಗ್ಯತೆ ಇದ್ದರೂ ಯೋಗ ಇರಬೇಕು...’ ನೊಂದುಕೊಂಡರು.</p>.<p>‘ಇನ್ಮೇಲಾದ್ರೂ ಯೋಗಾಭ್ಯಾಸ ಮಾಡಿ ಸಾರ್’.</p>.<p>‘ಆ ಯೋಗ ಅಲ್ವಲೇ, ಹಣೆಬರಹ ನೆಟ್ಟಗಿರಬೇಕು...’</p>.<p>‘ಮಂತ್ರಿ ಮಾಡಿ ಅಂತ ನಾವೆಲ್ಲಾ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡ್ತೀವಿ ಸಾರ್’ ಒಬ್ಬ ವೀರಾವೇಶ ಪ್ರದರ್ಶಿಸಿದ.</p>.<p>‘ಬೇಡ, ಅತೃಪ್ತ ಆಪ್ತ ಶಾಸಕರೆಲ್ಲಾ ಡೆಲ್ಲಿಗೆ ಹೋಗಿ, ನಾಯಕತ್ವ ಬದಲಾವಣೆಗೆ ಹೋರಾಟ ಮಾಡ್ತೀವಿ’ ಅಂದ್ರು ಶಾಸಕರು.</p>.<p>ಅಷ್ಟರಲ್ಲಿ ಪಿ.ಎ ಫೋನ್ ತಂದು, ‘ಸಾರ್ ವರಿಷ್ಠರ ಆಫೀಸ್ನಿಂದ ಫೋನು, ಮಂತ್ರಿ ಮಾಡಲಿಲ್ಲ ಅಂತ ನಾಯಕರನ್ನು ಬಾಯಿಗೆ ಬಂದಂತೆ ಬೈಯೋದನ್ನು ನಿಲ್ಲಿಸದಿದ್ದರೆ ಮುಂದಿನ ಚುನಾವಣೆಗೆ ಟಿಕೆಟ್ ಕೊಡಲ್ವಂತೆ’ ಎಂದು ಕಿವಿಯಲ್ಲಿ ಹೇಳಿದ. ಫೋನ್ನಲ್ಲಿ ಮಾತನಾಡಿದ ಶಾಸಕರು ಮಂಕಾದರು.</p>.<p>‘ಜನಸೇವೆಗೆ ಮಂತ್ರಿ ಆಗಬೇಕೆಂದೇನೂ ಇಲ್ಲ. ಪಕ್ಷ ನನಗೆ ತಾಯಿ ಇದ್ದಂತೆ, ಸಿ.ಎಂ ತಂದೆ ಇದ್ದಂತೆ. ಪಕ್ಷದ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಪಕ್ಷದ ಕೆಲ್ಸ ಮಾಡ್ತೀನಿ, ನೀವು ಹೋಗ್ರಲಾ...’ ಎಂದು ಎಲ್ಲರನ್ನೂ ಕಳಿಸಿದ ಶಾಸಕರು ದುಃಖ ನುಂಗಿ ನೀರು ಕುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>