‘ಎಲೈ ಬೇತಾಳವೇ, ರಾಜಕಾರಣಿಗಳು ಪದವಿ ಕನಸಲ್ಲಿ ಹಬ್ಬಿಸಿದ ಧರ್ಮದ ಕಿಚ್ಚು, ಏರಿಯಾ ರೊಚ್ಚು ಜನರನ್ನು ಸುಡುತ್ತಿದ್ದರೆ, ಅವಕಾಶವಾದಿಗಳು ಅದರ ಬೆಂಕಿಯಲ್ಲಿ ತಮಟೆ ಕಾಯಿಸಿಕೊಳ್ಳುತ್ತಿದ್ದಾರೆ. ಅಂದು ಸತ್ಯಕ್ಕಾಗಿ ಹುಲಿ ಪ್ರಾಣ ಕಳಕೊಂಡಿತ್ತು, ಇಂದು ಸತ್ಯದ ಅವನತಿ ನೋಡಲಾಗದೆ ಪುಣ್ಯಕೋಟಿಗಳೇ ಪ್ರಾಣ ಕಳೆದುಕೊಳ್ಳುತ್ತಿವೆ. ಜನ ಕೈಯ್ಯಲ್ಲಿ ಕೆರ ಹಿಡಿದು ಬೀದಿಗೆ ಬಂದು ಭಯಸ್ಕರ ಶಿಕ್ಷಣ ಶುರು ಮಾಡಿದರೆ ಮಾತ್ರ ನ್ಯಾಯ, ನೀತಿ, ಧರ್ಮ ಉಳಿಯಲು ಸಾಧ್ಯ’ ಅಂದ ವಿಕ್ರಮಾದಿತ್ಯ.