ಬಸಣ್ಣನು ಕೊರೋನಾ, ಓಮಿಕ್ರಾನ್, ಡೆಲ್ಟಾ ಭೇತಾಳಗಳನ್ನು ಬಲಿ ಹಾಕಲು ಸಕ್ರಮಾದಿತ್ಯನಂತೆ ಮರ ಹತ್ತಿಳಿಯುತ್ತಾ ಮಂಡಿ ನೋವಿಂದ ಬಸವಳಿದಿದ್ದನು. ಬಸಣ್ಣನ ನೋಡುತ್ತಲೇ ವೈರಸ್ಸುಗಳು ಪಣ್ಣಂತ ನೆಗೆದು ಪರಾರಿಯಾಗುತ್ತಿದ್ದವು. ‘ರಾಜಾವುಲಿ ಕಾಲದಲ್ಲಿ ತಂದ ಆಕ್ಸಿಜನ್, ಬೆಡ್, ವೆಂಟಿಲೇಟರ್ ಒಂದ್ನೂ ಕಾಣೆ! ಯಾರು ಹೊತ್ಕೋದ್ರೋ?! ತಜ್ಞರು ಕೊರೋನಾ ಭೇತಾಳವು ವ್ಯಾಲೆಂಟೈನ್ ದಿನದಗಂಟಾ ಇದ್ದು ಹೋಯ್ತದೆ ಎಂದು ಭವಿಷ್ಯ ಹೇಳವ್ರೆ, ಅಲ್ಲೀಗಂಟಾ ಏನು ಮಾಡದು? ಬ್ರಿಟನ್ನಲ್ಲಿ ಎಲ್ಲ ಓಪನ್ ಬುಟ್ಟವ್ರಂತೆ. ಫೋನು ಮಾಡಿ ಯಂಗೆ, ಯಾಥರ ಅಂತ ತಿಳ್ಕಬಕು!’ ಎಂದು ಚರ್ಚರಿತಗೊಂಡನು.