<p>‘ಮಂಜಮ್ಮ, ತಿಂಡಿ ಏನೈತೆ?’ ಗುಡ್ಡೆ ಕೇಳಿದ.</p>.<p>‘ತಿಂಡಿನಾ? ಸ್ಪೆಷಲ್ಲು... ಭಾರತ್ ಅಕ್ಕಿ ಇಡ್ಲಿ, ಭಾರತ್ ದೋಸೆ, ಭಾರತ್ ಚಿತ್ರಾನ್ನ...’ ಮಂಜಮ್ಮನ ಮುಖದಲ್ಲಿ ಖುಷಿ.</p>.<p>‘ಯಾಕೆ ಇಂಡಿಯಾ ಇಡ್ಲಿ, ದೋಸೆ ಇಲ್ವಾ?’</p>.<p>‘ಅದ್ನ ನೀವು ಬೇರೆ ದೇಶ ಕೇಳ್ತಿದೀರಲ್ಲ, ಅಲ್ಲಿ ತಿನ್ಕಳಿ...’</p>.<p>ಗುಡ್ಡೆಗೆ ಸಿಟ್ಟು ಬಂತು. ‘ಮಂಜಮ್ಮ ನೆಟ್ಟಗೆ ಮಾತಾಡು, ನಾವೆಲ್ಲಿ ಬೇರೆ ದೇಶ ಕೇಳಿದ್ವಿ? ನಮ್ ತೆರಿಗೆ ರೊಕ್ಕ ನಮಿಗೆ ಕೊಡದಿದ್ಕೆ ಹಂಗಂದ್ವಿ. ಈಗ ಅಪ್ಪ ಆಸ್ತಿ ಕೊಡದಿದ್ರೆ ಮಗ ಬೇರೆ ಮನಿ ಮಾಡ್ತೀನಿ ಅನ್ನಲ್ವ, ಹಂಗೆ’ ಎಂದ.</p>.<p>‘ಏನೇ ಆಗ್ಲಿ, ದೇಶ ಒಡೆಯೋ ಮಾತಾಡೋದು ತಪ್ಪು. ಹೋಗ್ಲಿ, ಭಾರತ್ ಹಲ್ವಾ ಏನರೆ ಮಾಡಿದೀಯ ಮಂಜಮ್ಮ?’ ಕೊಟ್ರೇಶಿ ತಿಪ್ಪೆ ಸಾರಿಸಿದ.</p>.<p>‘ಹಲ್ವಾ ಹೋದ್ಸಲಾನೇ ಕೊಟ್ರಲ್ಲೋ ಕೊಟ್ರಾ. ನಮ್ ಭದ್ರಾ ಮೇಲ್ದಂಡೆಗೆ 5,300 ಕೋಟಿ ಅಂತ ನಿರ್ಮಲಕ್ಕ ಹೇಳಿ ವರ್ಷಾತು, ನಯಾಪೈಸೆ ಬರ್ಲಿಲ್ಲ’ ಗುಡ್ಡೆ ನಕ್ಕ.</p>.<p>‘ಮತ್ತೆ ನಮ್ ಸರ್ಕಾರ ಬರುತ್ತೆ, ಕೊಡ್ತಾರೆ ತಗಾ, ನೀನು ನನ್ ಉದ್ರಿ ಬಾಕಿನೇ ವರ್ಷದಿಂದ ತೀರ್ಸಿಲ್ಲ, ಇನ್ನು ಕೋಟಿಗಟ್ಲೆ ರೊಕ್ಕ ಪಟ್ ಅಂತ ಬಂದ್ಬಿಡುತ್ತಾ?’ ಮಂಜಮ್ಮ ವಾದಿಸಿದಳು.</p>.<p>‘ಬಿಡು ಮಂಜಮ್ಮ, ಈಗ ಈ ಭಾರತ್ ಅಕ್ಕಿ ಹೆಂಗೈತೆ? ಹುಳ ಗಿಳ ಆಗಿಲ್ಲ ತಾನೆ?’ ದುಬ್ಬೀರ ಮಾತು ಬದಲಿಸಿದ.</p>.<p>‘ನಮ್ ಸಿದ್ರಾಮಣ್ಣ ಜಾಸ್ತಿ ದುಡ್ಡಿಗೆ ಅಕ್ಕಿ ಕೇಳಿದಾಗ ಕೊಡ್ಲಿಲ್ಲ, ಈಗ ಗೋಡನ್ನಲ್ಲಿ ಮುಗ್ಗಲು ಹಿಡಿದಿರ್ಬೇಕು, ಅದ್ಕೆ ಕಮ್ಮಿ ರೇಟಿಗೆ ಕೊಡ್ತದಾರೆ’ ಗುಡ್ಡೆ ಪಟ್ಟು ಬಿಡಲಿಲ್ಲ.</p>.<p>‘ಲೇ ಗುಡ್ಡೆ, ದೇಶದ ಬಗ್ಗೆ ಮಾತಾಡಿದ್ರೆ ಸುಮ್ನಿರಲ್ಲ ನೋಡು’ ಮಂಜಮ್ಮ ರಾಂಗಾದಳು.</p>.<p>‘ಅಲೆ ಇವ್ನ, ನಾನೆಲ್ಲಿ ದೇಶದ ಬಗ್ಗೆ ಮಾತಾಡಿದೆ?’</p>.<p>‘ಮತ್ತೆ? ಈ ಅಕ್ಕಿ ಯಾವುದು? ಭಾರತ್ ಅಕ್ಕಿ. ಅದ್ರಲ್ಲಿ ದೇಶ ಇಲ್ವಾ?’</p>.<p>ಗುಡ್ಡೆ ಪಿಟಿಕ್ಕನ್ನಲಿಲ್ಲ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಮಂಜಮ್ಮ, ತಿಂಡಿ ಏನೈತೆ?’ ಗುಡ್ಡೆ ಕೇಳಿದ.</p>.<p>‘ತಿಂಡಿನಾ? ಸ್ಪೆಷಲ್ಲು... ಭಾರತ್ ಅಕ್ಕಿ ಇಡ್ಲಿ, ಭಾರತ್ ದೋಸೆ, ಭಾರತ್ ಚಿತ್ರಾನ್ನ...’ ಮಂಜಮ್ಮನ ಮುಖದಲ್ಲಿ ಖುಷಿ.</p>.<p>‘ಯಾಕೆ ಇಂಡಿಯಾ ಇಡ್ಲಿ, ದೋಸೆ ಇಲ್ವಾ?’</p>.<p>‘ಅದ್ನ ನೀವು ಬೇರೆ ದೇಶ ಕೇಳ್ತಿದೀರಲ್ಲ, ಅಲ್ಲಿ ತಿನ್ಕಳಿ...’</p>.<p>ಗುಡ್ಡೆಗೆ ಸಿಟ್ಟು ಬಂತು. ‘ಮಂಜಮ್ಮ ನೆಟ್ಟಗೆ ಮಾತಾಡು, ನಾವೆಲ್ಲಿ ಬೇರೆ ದೇಶ ಕೇಳಿದ್ವಿ? ನಮ್ ತೆರಿಗೆ ರೊಕ್ಕ ನಮಿಗೆ ಕೊಡದಿದ್ಕೆ ಹಂಗಂದ್ವಿ. ಈಗ ಅಪ್ಪ ಆಸ್ತಿ ಕೊಡದಿದ್ರೆ ಮಗ ಬೇರೆ ಮನಿ ಮಾಡ್ತೀನಿ ಅನ್ನಲ್ವ, ಹಂಗೆ’ ಎಂದ.</p>.<p>‘ಏನೇ ಆಗ್ಲಿ, ದೇಶ ಒಡೆಯೋ ಮಾತಾಡೋದು ತಪ್ಪು. ಹೋಗ್ಲಿ, ಭಾರತ್ ಹಲ್ವಾ ಏನರೆ ಮಾಡಿದೀಯ ಮಂಜಮ್ಮ?’ ಕೊಟ್ರೇಶಿ ತಿಪ್ಪೆ ಸಾರಿಸಿದ.</p>.<p>‘ಹಲ್ವಾ ಹೋದ್ಸಲಾನೇ ಕೊಟ್ರಲ್ಲೋ ಕೊಟ್ರಾ. ನಮ್ ಭದ್ರಾ ಮೇಲ್ದಂಡೆಗೆ 5,300 ಕೋಟಿ ಅಂತ ನಿರ್ಮಲಕ್ಕ ಹೇಳಿ ವರ್ಷಾತು, ನಯಾಪೈಸೆ ಬರ್ಲಿಲ್ಲ’ ಗುಡ್ಡೆ ನಕ್ಕ.</p>.<p>‘ಮತ್ತೆ ನಮ್ ಸರ್ಕಾರ ಬರುತ್ತೆ, ಕೊಡ್ತಾರೆ ತಗಾ, ನೀನು ನನ್ ಉದ್ರಿ ಬಾಕಿನೇ ವರ್ಷದಿಂದ ತೀರ್ಸಿಲ್ಲ, ಇನ್ನು ಕೋಟಿಗಟ್ಲೆ ರೊಕ್ಕ ಪಟ್ ಅಂತ ಬಂದ್ಬಿಡುತ್ತಾ?’ ಮಂಜಮ್ಮ ವಾದಿಸಿದಳು.</p>.<p>‘ಬಿಡು ಮಂಜಮ್ಮ, ಈಗ ಈ ಭಾರತ್ ಅಕ್ಕಿ ಹೆಂಗೈತೆ? ಹುಳ ಗಿಳ ಆಗಿಲ್ಲ ತಾನೆ?’ ದುಬ್ಬೀರ ಮಾತು ಬದಲಿಸಿದ.</p>.<p>‘ನಮ್ ಸಿದ್ರಾಮಣ್ಣ ಜಾಸ್ತಿ ದುಡ್ಡಿಗೆ ಅಕ್ಕಿ ಕೇಳಿದಾಗ ಕೊಡ್ಲಿಲ್ಲ, ಈಗ ಗೋಡನ್ನಲ್ಲಿ ಮುಗ್ಗಲು ಹಿಡಿದಿರ್ಬೇಕು, ಅದ್ಕೆ ಕಮ್ಮಿ ರೇಟಿಗೆ ಕೊಡ್ತದಾರೆ’ ಗುಡ್ಡೆ ಪಟ್ಟು ಬಿಡಲಿಲ್ಲ.</p>.<p>‘ಲೇ ಗುಡ್ಡೆ, ದೇಶದ ಬಗ್ಗೆ ಮಾತಾಡಿದ್ರೆ ಸುಮ್ನಿರಲ್ಲ ನೋಡು’ ಮಂಜಮ್ಮ ರಾಂಗಾದಳು.</p>.<p>‘ಅಲೆ ಇವ್ನ, ನಾನೆಲ್ಲಿ ದೇಶದ ಬಗ್ಗೆ ಮಾತಾಡಿದೆ?’</p>.<p>‘ಮತ್ತೆ? ಈ ಅಕ್ಕಿ ಯಾವುದು? ಭಾರತ್ ಅಕ್ಕಿ. ಅದ್ರಲ್ಲಿ ದೇಶ ಇಲ್ವಾ?’</p>.<p>ಗುಡ್ಡೆ ಪಿಟಿಕ್ಕನ್ನಲಿಲ್ಲ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>