‘ಹೂ! ಯಾಕಂದ್ರೆ ಗಾಳಿಗೆ ಶಾಮಿಯಾನ, ಜಮಖಾನ ಕಿತ್ಕೊಂಡ್ ಹೋಗುತ್ವೆ. ಆದರೂ ಬಿಳಿ ಖಾದಿ ಮೈಗೆ ಅಂಟಿಕೊಂಡು ಜೇಬು, ಹೊಟ್ಟೆ ಎರಡರ ಗಾತ್ರನೂ ತೋರಿಸಿಬಿಡುತ್ತೆ’.
‘ಆದ್ರೂ ಅವರು ಆಶ್ವಾಸನೆಗಳ ಗಾಳಿಪಟ ಹಾರಿಸೋದನ್ನ ಮಾತ್ರ ಬಿಡಲ್ಲ ಬಿಡಿ’.
‘ಸಮಾವೇಶಗಳನ್ನ ಮಾಡಲ್ಲವಲ್ಲ, ಹಾಗಾಗಿ ಅತೃಪ್ತರಿಗೆ ಗುಂಡು, ಬಾಡೂಟ ಸಿಗದೆ ಬಂಡಾಯದ ಬಾವುಟ ಹಾರುಸ್ತಾರೆ’.
‘ಒಟ್ನಲ್ಲಿ ಈ ಆಷಾಢದ ಗಾಳಿ ಯಾರ್ಯಾರನ್ ಎಲ್ಲೆಲ್ಲಿಗೆ ಎತ್ ಎಸೆಯುತ್ತೋ! ಹುಶಾರಾಗಿರ್ಬೇಕು ಅಲ್ವಾ?’
‘ಹುಶಾರಾಗಿರ್ಬೇಕು ನಿಜ, ಹಾಗಂತ ಹೆದರ್ಕೋಬಾರದು. ಗಾಳಿ ಬಂದಾಗ ತೂರಿಕೋ ಅಂತ ಗಾದೆನೇ ಇದ್ಯಲ್ಲ. ಈಗ ನೋಡು ಉದ್ಧವ್ ಜೊತೆ ಇದ್ದೋರೆಲ್ಲ ಶಿಂಧೆ ಜೊತೆ ತೂರ್ಕೊಂಡ್ರು. ಅದೇ ತರ ಒವೈಸಿ ಪಕ್ಷದ ನಾಲ್ಕು ಜನ ಎಂಎಲ್ಎಗಳುಲಾಲೂ ಅವರ ಆರ್ಜೆಡಿಗೆ ತೂರ್ಕೊಂಡ್ ಬಿಟ್ರಲ್ಲ’.
‘ನಮ್ಮಲ್ಲೂ ಕೆಲವರು ತೆನೆ ಪಕ್ಷದೋರು ಅಲ್ಲಿ ಇಲ್ಲಿ ತೂರ್ಕೊಳೋಕೆ ತುದಿಗಾಲಲ್ಲಿ ನಿಂತಿದಾರಂತೆ’.
‘ಗಾಳಿಗೆ ಜೊಳ್ಳೆಲ್ಲಾ ತೂರಿ ಗಟ್ಟಿಕಾಳುಗಳು ಮಾತ್ರ ಉಳ್ಕಳುತ್ವೆ ಅಂತ ಆಷಾಢ(ಭೂತಿ) ನಾಯಕರ ಸಮರ್ಥನೆ ಇದ್ದೇ ಇರುತ್ತೆ...’.
‘ಈ ರಾಜಕೀಯದ ಪುಂಗಿ ಊದಿದ್ದು ಸಾಕು. ಮದುವೆ, ಮುಂಜಿ ಏನೂ ಇಲ್ಲ, ಚಿನ್ನದ ರೇಟ್ ಕಮ್ಮಿಯಾಗಿದೆಯಂತೆ, ಇದೇ ಛಾನ್ಸು! ನಡೀರಿ ಒಂದಿಷ್ಟು ಒಡವೆ ತಗೊಂಡು ಬರೋಣ’.
‘ಕರ್ಮ! ಮದುವೆಯಾದ ಹೆಂಗಸರು ಆಷಾಢದಲ್ಲಿ ಪ್ರತಿವರ್ಷ ತವರಿಗೆ ಹೋಗ್ಬೇಕು ಅಂತ ಯಾಕ್ ಸಂಪ್ರದಾಯ ಮಾಡಲಿಲ್ಲವೋ’ ಎಂದು ತಲೆ ಚಚ್ಚಿಕೊಂಡ ಪರ್ಮೇಶಿ.