<p>‘ಲೇ ತೆಪರ, ಏನಲೆ ಇವತ್ತಿನ ಸುದ್ದಿ?’ ಹರಟೆ ಕಟ್ಟೆಯಲ್ಲಿ ದುಬ್ಬೀರ ಚಾ ಕುಡಿಯುತ್ತ ಕೇಳಿದ.</p><p>‘ಇವತ್ತಿಂದಾ? ಒಂದು ಎಣ್ಣೇದು, ಇನ್ನೊಂದು ನೀರಿಂದು... ಯಾವುದು ಬೇಕು?’</p><p>‘ಎರಡೂ ಬೇಕು ಕಣಲೆ, ಎರಡೂ ಮಿಕ್ಸ್ ಆದ್ರೆ ಚಂದ’ ದುಬ್ಬೀರ ಕಣ್ಣು ಮಿಟುಕಿಸಿದ.</p><p>‘ಆಹಾ... ಆಸೆ ನೋಡು. ನಾನೇಳಿದ್ದು ಮದ್ಯದಂಗಡಿ ಜಾಸ್ತಿ ಮಾಡ್ತಿರೋದಕ್ಕೆ ವಿರೋಧದ ಸುದ್ದಿ, ಆಮೇಲೆ ಕಾವೇರಿ ನೀರಿನ ಗಲಾಟೆ ಸುದ್ದಿ’ ತೆಪರೇಸಿ ನಕ್ಕ.</p><p>‘ಗೊತ್ತು ಕಣಲೆ, ಸುಮ್ನೆ ತಮಾಷೆ ಮಾಡಿದೆ’ ಎಂದ ದುಬ್ಬೀರ.</p><p>‘ಅದಿರ್ಲಿ, ಈ ನೀರಿನ ಗಲಾಟೆಗೆ ಎಣ್ಣೆ ಅಂಗಡಿ ಮುಚ್ಸೋದು ಯಾವ ನ್ಯಾಯ?’ ಗುಡ್ಡೆ ಆಕ್ಷೇಪಿಸಿದ.</p><p>ಮಂಜಮ್ಮಗೆ ಸಿಟ್ಟು ಬಂತು. ‘ಆಹಾ... ಎಲ್ರಿಗೂ ಎಣ್ಣೆ ಅಂಗಡಿ ಅಂದ್ರೆ ಎಷ್ಟ್ ಪ್ರೀತಿ ನೋಡು, ಹುಟ್ಟು ಕುಡುಕರು’ ಎಂದಳು.</p><p>‘ಹೌದು ಮತ್ತೆ, ನೀರು ಜಗಳ ಹಚ್ಚುತ್ತೆ, ಎಣ್ಣೆ ಎಲ್ಲರ್ನೂ ಒಂದುಮಾಡುತ್ತೆ ಗೊತ್ತಾ?’ ಗುಡ್ಡೆ ವಾದಿಸಿದ.</p><p>‘ಹೌದೌದು... ಕುಡಿಯೋಕೆ ಮುಂಚೆ ಎಣ್ಣೆ ಎಲ್ಲರ್ನೂ ಒಂದುಮಾಡುತ್ತೆ, ಕುಡಿದ ಮೇಲೆ ಹೊಡೆದಾಟ ಮಾಡ್ಸುತ್ತೆ, ನಂಗೊತ್ತಿಲ್ವಾ?’ ಮಂಜಮ್ಮ ನಕ್ಕಳು.</p><p>‘ಅದೆಲ್ಲ ಬೇಡ, ನೀನು ನೀರಿನ ಬಂದ್ಗೆ ಹೋಟ್ಲು ಮುಚ್ತೀಯಾ?’ ಗುಡ್ಡೆ ಕೇಳಿದ.</p><p>‘ಹು, ಮುಚ್ತೀನಿ’.</p><p>‘ಹಂಗಾದ್ರೆ ಎಣ್ಣೆ ಅಂಗಡಿ ಪರ ನಾವೂ ಬಂದ್ಗೆ ಕರೆ ಕೊಡ್ತೀವಿ, ಅವತ್ತೂ ನಿನ್ ಹೋಟ್ಲು ಮುಚ್ಬೇಕು’.</p><p>‘ಆತು ಬಿಡು, ಮುಚ್ತೀನಿ. ಎಣ್ಣೆ ಅಂಗಡಿ ಊರೂರಿಗಲ್ಲ, ಗಲ್ಲಿಗೊಂದೊಂದು ಕೊಡ್ಲಿ, ಅದ್ರಲ್ಲೂ ನಿನ್ ಮನಿ ಮುಂದೇನೇ ಒಂದು ಅಂಗಡಿ ಆಗ್ಲಿ ಅಂತ ಹಾರೈಸ್ತೀನಿ’.</p><p>‘ನನ್ ಮನಿ ಮುಂದಾ? ಯಾಕೆ?’</p><p>‘ನೀನು ಕುಡಿದು ರಸ್ತೇಲಿ ಬಿದ್ರೆ ನಿನ್ ಕಾಲಿಡಿದು ದರದರ ಎಳೆದು ಪಟ್ ಅಂತ ಅಲ್ಲೇ ನಿನ್ ಮನಿ ಒಳಕ್ಕೆ ಹಾಕಬಹುದಲ್ಲ ಅಂತ’.</p><p>ಮಂಜಮ್ಮನ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಲೇ ತೆಪರ, ಏನಲೆ ಇವತ್ತಿನ ಸುದ್ದಿ?’ ಹರಟೆ ಕಟ್ಟೆಯಲ್ಲಿ ದುಬ್ಬೀರ ಚಾ ಕುಡಿಯುತ್ತ ಕೇಳಿದ.</p><p>‘ಇವತ್ತಿಂದಾ? ಒಂದು ಎಣ್ಣೇದು, ಇನ್ನೊಂದು ನೀರಿಂದು... ಯಾವುದು ಬೇಕು?’</p><p>‘ಎರಡೂ ಬೇಕು ಕಣಲೆ, ಎರಡೂ ಮಿಕ್ಸ್ ಆದ್ರೆ ಚಂದ’ ದುಬ್ಬೀರ ಕಣ್ಣು ಮಿಟುಕಿಸಿದ.</p><p>‘ಆಹಾ... ಆಸೆ ನೋಡು. ನಾನೇಳಿದ್ದು ಮದ್ಯದಂಗಡಿ ಜಾಸ್ತಿ ಮಾಡ್ತಿರೋದಕ್ಕೆ ವಿರೋಧದ ಸುದ್ದಿ, ಆಮೇಲೆ ಕಾವೇರಿ ನೀರಿನ ಗಲಾಟೆ ಸುದ್ದಿ’ ತೆಪರೇಸಿ ನಕ್ಕ.</p><p>‘ಗೊತ್ತು ಕಣಲೆ, ಸುಮ್ನೆ ತಮಾಷೆ ಮಾಡಿದೆ’ ಎಂದ ದುಬ್ಬೀರ.</p><p>‘ಅದಿರ್ಲಿ, ಈ ನೀರಿನ ಗಲಾಟೆಗೆ ಎಣ್ಣೆ ಅಂಗಡಿ ಮುಚ್ಸೋದು ಯಾವ ನ್ಯಾಯ?’ ಗುಡ್ಡೆ ಆಕ್ಷೇಪಿಸಿದ.</p><p>ಮಂಜಮ್ಮಗೆ ಸಿಟ್ಟು ಬಂತು. ‘ಆಹಾ... ಎಲ್ರಿಗೂ ಎಣ್ಣೆ ಅಂಗಡಿ ಅಂದ್ರೆ ಎಷ್ಟ್ ಪ್ರೀತಿ ನೋಡು, ಹುಟ್ಟು ಕುಡುಕರು’ ಎಂದಳು.</p><p>‘ಹೌದು ಮತ್ತೆ, ನೀರು ಜಗಳ ಹಚ್ಚುತ್ತೆ, ಎಣ್ಣೆ ಎಲ್ಲರ್ನೂ ಒಂದುಮಾಡುತ್ತೆ ಗೊತ್ತಾ?’ ಗುಡ್ಡೆ ವಾದಿಸಿದ.</p><p>‘ಹೌದೌದು... ಕುಡಿಯೋಕೆ ಮುಂಚೆ ಎಣ್ಣೆ ಎಲ್ಲರ್ನೂ ಒಂದುಮಾಡುತ್ತೆ, ಕುಡಿದ ಮೇಲೆ ಹೊಡೆದಾಟ ಮಾಡ್ಸುತ್ತೆ, ನಂಗೊತ್ತಿಲ್ವಾ?’ ಮಂಜಮ್ಮ ನಕ್ಕಳು.</p><p>‘ಅದೆಲ್ಲ ಬೇಡ, ನೀನು ನೀರಿನ ಬಂದ್ಗೆ ಹೋಟ್ಲು ಮುಚ್ತೀಯಾ?’ ಗುಡ್ಡೆ ಕೇಳಿದ.</p><p>‘ಹು, ಮುಚ್ತೀನಿ’.</p><p>‘ಹಂಗಾದ್ರೆ ಎಣ್ಣೆ ಅಂಗಡಿ ಪರ ನಾವೂ ಬಂದ್ಗೆ ಕರೆ ಕೊಡ್ತೀವಿ, ಅವತ್ತೂ ನಿನ್ ಹೋಟ್ಲು ಮುಚ್ಬೇಕು’.</p><p>‘ಆತು ಬಿಡು, ಮುಚ್ತೀನಿ. ಎಣ್ಣೆ ಅಂಗಡಿ ಊರೂರಿಗಲ್ಲ, ಗಲ್ಲಿಗೊಂದೊಂದು ಕೊಡ್ಲಿ, ಅದ್ರಲ್ಲೂ ನಿನ್ ಮನಿ ಮುಂದೇನೇ ಒಂದು ಅಂಗಡಿ ಆಗ್ಲಿ ಅಂತ ಹಾರೈಸ್ತೀನಿ’.</p><p>‘ನನ್ ಮನಿ ಮುಂದಾ? ಯಾಕೆ?’</p><p>‘ನೀನು ಕುಡಿದು ರಸ್ತೇಲಿ ಬಿದ್ರೆ ನಿನ್ ಕಾಲಿಡಿದು ದರದರ ಎಳೆದು ಪಟ್ ಅಂತ ಅಲ್ಲೇ ನಿನ್ ಮನಿ ಒಳಕ್ಕೆ ಹಾಕಬಹುದಲ್ಲ ಅಂತ’.</p><p>ಮಂಜಮ್ಮನ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>