‘ಏನ್ ತಪ್ಪಾತು... ಎಲ್ಲಾ ಕಡಿಗಿ ಕರುನಾಡಿನ ಖ್ಯಾತಿ ಹಬ್ಬಿಸ್ಯಾನ’.
‘ಅದ್ ಖ್ಯಾತಿಯಲ್ಲ, ಕುಖ್ಯಾತಿ’ ಎಂದು ತಿದ್ದಿದೆ.
‘ಹ್ಯಾಕ್ ಮಾಡೂ ಚಾಣಾಕ್ಷತನಾನ ಕ್ರೀಡಾ ಪ್ರಶಸ್ತಿಗೆ ಅಥವಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪದ್ಮ ಪ್ರಶಸ್ತಿ, ಹಿಂತಾ ಪ್ರಶಸ್ತಿಗೆ ಪರಿಗಣಿಸಬೇಕು. ಅವಂಗ ಹ್ಯಾಕರ್ ರತ್ನ ಅಂತ ಅಥವಾ ಹ್ಯಾಕರ್ ಪದ್ಮ ಪ್ರಶಸ್ತಿ ಕೊಡಬಕು’ ಬೆಕ್ಕಣ್ಣ ವಾದಿಸಿತು.
‘ಅಷ್ಟರೊಳಗೆ ಪ್ರಶಸ್ತಿ ರೊಕ್ಕ ಇರೂ ಸರ್ಕಾರಿ ಖಾತೆನ ಹ್ಯಾಕ್ ಮಾಡಿ, ಅದನ್ನ ಬಿಟ್ ಕಾಯಿನ್ಗೆ ಮಾರಿಕೊಂಡಿರ್ತಾನ ಅಂವ’ ಎಂದು ನಾನು ನಕ್ಕೆ.