<p>ಬಾರ್ ಮುಂದುಗಡೆ ಎಂಟ್ಹತ್ತು ಪರಿಚಯಸ್ಥರು ಮುಖವ ಇಳೆಬುಟ್ಕಂದು ನಿಂತಿದ್ದರು. ‘ಇದ್ಯಾಕಿರ್ಲಾ ಏಳೊವೊತ್ಗೇ ಬಂದು ಇಲ್ಲಿ ನಿಂತಿದ್ದರಿ!’ ಅಂತ ಕಿಚಾಯಿಸಿದೆ.</p>.<p>‘ಅಲ್ಲ ಕನಣ್ಣೋ, ಇದೇ ಸುಕ್ರಾರ ಸಿದ್ದರಾಮಣ್ಣ ಬಜೆಟ್ ಓದ್ತದಂತೆ. ನಮ್ಮ ಬೇಡಿಕೆಗಳ ಈ ಸರ್ತಿನಾದ್ರೂ ಪೂರೈಸ್ತರಾ ಹ್ಯಂಗೆ ಕೇಳಮು ಅಂತ ಪ್ಲಾನ್ ಹಾಕ್ಯಂಡುದ್ದವಿ’ ಅಂದರು.</p>.<p>‘ಬಲ್ ನನ್ ಮಕ್ಳು ಕನ್ರಯಾ ನೀವು! ಅದೇನು ನಿಮ್ಮ ಬೇಡಿಕೆ ಅಂತ ಹೇಳ್ರಿ’ <br>ಅಂತಂದೆ.</p>.<p>‘ನಾವೇನೂ ಜಾಸ್ತಿ ಕೇಳ್ತಿಲ್ಲ ಕನಣ್ಣಾ. ಸರ್ಕಾರ ಖರ್ಚಿಗೆ ನಮ್ಮ ದುಡ್ನೇ ಕಾಯ್ಕ ಕೂತಿರತದೆ. ಅದುಕ್ಕೆ ಈ ವರ್ಸದಲ್ಲೇ ಮೂರು ಸಾರಿ ರೇಟು ಏರಿಸ್ಯವರೆ. ನಾವೇನನ್ನಾ ತುಟಿಪಿಟಕ್ ಅಂದ್ವಾ? ಇಲ್ಲ’ ಅಂತ ಸುರು ಹಚ್ಕಂಡರು.</p>.<p>‘ಸರಿ ಕನ್ರಪ್ಪಾ ಮುಂದ್ಕೇಳಿ’ ಅಂದೆ.</p>.<p>‘ಅಣೈ, ರೇಟು ಏರಿಸ್ತಾವ್ರೆ ಹೊರತು ನಮಗೇನೂ ಅನುಕೂಲ ಮಾಡಿಲ್ಲ. ನಾವೇನು ಜಾಸ್ತಿ ಕೇಳಕುಲ್ಲ. ಬರ ಪರಿಹಾರಕ್ಕೆ ದುಡ್ಡು ಕೊಟ್ಟಂಗೆ ನಮಗೂ ದರ ಪರಿಹಾರ ಕೊಡಬಕು ಅಂತ ಕೇಳ್ತುದವಿ’ ಅಂದ್ರು.</p>.<p>‘ಸರಿ ಕನ್ರಪ್ಪಾ, ಆಮೇಲೆ’ ಅಂದೆ ಸುಸ್ತಾಗಿ.</p>.<p>‘ಅಣೈ, ಎಲ್ಲ ಬಾರುಗಳಲ್ಲೂ ನಮ್ಮ ಉಪಯೋಗಕ್ಕೆ ಮಾತ್ರ ಚಾಳೀದಾಸ ಕ್ಯಾಂಟೀನ್ ತೆಗೆದು ಸಸ್ತಾ ರೇಟಲ್ಲಿ ಚಾಕಣ, ಕಬಾಬು ಕೊಡಬೇಕು. ಇನ್ನೇನೂ ಜಾಸ್ತಿ ಇಲ್ಲ ಕನಣ್ಣ. ಸೀನಿಯರ್ ಕುಡುಕರಿಗೆ ನಿರಾಧಾರ್ ಕಾರ್ಡು, ಬಿಲ್ಲಲ್ಲಿ ರಿಯಾಯಿತಿ ಕೊಡಬೇಕು’.</p>.<p>‘ಆಮೇಲೆ ಇನ್ನೇನೇನದೆ ಒಟ್ಟಿಗೆ ಹೇಳಿಬುಡ್ರಿ’ ಅಂದೆ.</p>.<p>‘ನೋಡಣ್ಣ, ಕುತ್ತಿಗೆ ಮಟಾ ಕುಡಿದಮ್ಯಾಲೆ ಮನೆಗೋಗಕ್ಕೆ ದಾರಿ ತಿಳಿಯಕುಲ್ಲ. ಬ್ಯಾರೇರ ಮನೆಗೋಗಿ ಮಕ್ಕುಗಿಸಿಕಳಕ್ಕಿಂತ ಎಲ್ಲ ಬಾರುಗಳಲ್ಲೂ ಅಲ್ಲೇ ಮನಿಕಳಕ್ಕೆ ಡಾರ್ಮಿಟರಿ ಥರಾ ಬಾರ್ಮಿಟರಿ ಓಪನ್ ಮಾಡಿಸಬೇಕು. ಬೇಡಿಕೆ ಈಡೇರದಿದ್ರೆ ಪೀಪಾಯಿ ದಂಗೆ ಆಯ್ತದೆ’.</p>.<p>ಈ ಮಾತು ಕೇಳಿ ನನಗೆ ತಲೆ ತಿರುಗಲಾರಂಭಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾರ್ ಮುಂದುಗಡೆ ಎಂಟ್ಹತ್ತು ಪರಿಚಯಸ್ಥರು ಮುಖವ ಇಳೆಬುಟ್ಕಂದು ನಿಂತಿದ್ದರು. ‘ಇದ್ಯಾಕಿರ್ಲಾ ಏಳೊವೊತ್ಗೇ ಬಂದು ಇಲ್ಲಿ ನಿಂತಿದ್ದರಿ!’ ಅಂತ ಕಿಚಾಯಿಸಿದೆ.</p>.<p>‘ಅಲ್ಲ ಕನಣ್ಣೋ, ಇದೇ ಸುಕ್ರಾರ ಸಿದ್ದರಾಮಣ್ಣ ಬಜೆಟ್ ಓದ್ತದಂತೆ. ನಮ್ಮ ಬೇಡಿಕೆಗಳ ಈ ಸರ್ತಿನಾದ್ರೂ ಪೂರೈಸ್ತರಾ ಹ್ಯಂಗೆ ಕೇಳಮು ಅಂತ ಪ್ಲಾನ್ ಹಾಕ್ಯಂಡುದ್ದವಿ’ ಅಂದರು.</p>.<p>‘ಬಲ್ ನನ್ ಮಕ್ಳು ಕನ್ರಯಾ ನೀವು! ಅದೇನು ನಿಮ್ಮ ಬೇಡಿಕೆ ಅಂತ ಹೇಳ್ರಿ’ <br>ಅಂತಂದೆ.</p>.<p>‘ನಾವೇನೂ ಜಾಸ್ತಿ ಕೇಳ್ತಿಲ್ಲ ಕನಣ್ಣಾ. ಸರ್ಕಾರ ಖರ್ಚಿಗೆ ನಮ್ಮ ದುಡ್ನೇ ಕಾಯ್ಕ ಕೂತಿರತದೆ. ಅದುಕ್ಕೆ ಈ ವರ್ಸದಲ್ಲೇ ಮೂರು ಸಾರಿ ರೇಟು ಏರಿಸ್ಯವರೆ. ನಾವೇನನ್ನಾ ತುಟಿಪಿಟಕ್ ಅಂದ್ವಾ? ಇಲ್ಲ’ ಅಂತ ಸುರು ಹಚ್ಕಂಡರು.</p>.<p>‘ಸರಿ ಕನ್ರಪ್ಪಾ ಮುಂದ್ಕೇಳಿ’ ಅಂದೆ.</p>.<p>‘ಅಣೈ, ರೇಟು ಏರಿಸ್ತಾವ್ರೆ ಹೊರತು ನಮಗೇನೂ ಅನುಕೂಲ ಮಾಡಿಲ್ಲ. ನಾವೇನು ಜಾಸ್ತಿ ಕೇಳಕುಲ್ಲ. ಬರ ಪರಿಹಾರಕ್ಕೆ ದುಡ್ಡು ಕೊಟ್ಟಂಗೆ ನಮಗೂ ದರ ಪರಿಹಾರ ಕೊಡಬಕು ಅಂತ ಕೇಳ್ತುದವಿ’ ಅಂದ್ರು.</p>.<p>‘ಸರಿ ಕನ್ರಪ್ಪಾ, ಆಮೇಲೆ’ ಅಂದೆ ಸುಸ್ತಾಗಿ.</p>.<p>‘ಅಣೈ, ಎಲ್ಲ ಬಾರುಗಳಲ್ಲೂ ನಮ್ಮ ಉಪಯೋಗಕ್ಕೆ ಮಾತ್ರ ಚಾಳೀದಾಸ ಕ್ಯಾಂಟೀನ್ ತೆಗೆದು ಸಸ್ತಾ ರೇಟಲ್ಲಿ ಚಾಕಣ, ಕಬಾಬು ಕೊಡಬೇಕು. ಇನ್ನೇನೂ ಜಾಸ್ತಿ ಇಲ್ಲ ಕನಣ್ಣ. ಸೀನಿಯರ್ ಕುಡುಕರಿಗೆ ನಿರಾಧಾರ್ ಕಾರ್ಡು, ಬಿಲ್ಲಲ್ಲಿ ರಿಯಾಯಿತಿ ಕೊಡಬೇಕು’.</p>.<p>‘ಆಮೇಲೆ ಇನ್ನೇನೇನದೆ ಒಟ್ಟಿಗೆ ಹೇಳಿಬುಡ್ರಿ’ ಅಂದೆ.</p>.<p>‘ನೋಡಣ್ಣ, ಕುತ್ತಿಗೆ ಮಟಾ ಕುಡಿದಮ್ಯಾಲೆ ಮನೆಗೋಗಕ್ಕೆ ದಾರಿ ತಿಳಿಯಕುಲ್ಲ. ಬ್ಯಾರೇರ ಮನೆಗೋಗಿ ಮಕ್ಕುಗಿಸಿಕಳಕ್ಕಿಂತ ಎಲ್ಲ ಬಾರುಗಳಲ್ಲೂ ಅಲ್ಲೇ ಮನಿಕಳಕ್ಕೆ ಡಾರ್ಮಿಟರಿ ಥರಾ ಬಾರ್ಮಿಟರಿ ಓಪನ್ ಮಾಡಿಸಬೇಕು. ಬೇಡಿಕೆ ಈಡೇರದಿದ್ರೆ ಪೀಪಾಯಿ ದಂಗೆ ಆಯ್ತದೆ’.</p>.<p>ಈ ಮಾತು ಕೇಳಿ ನನಗೆ ತಲೆ ತಿರುಗಲಾರಂಭಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>