‘ಬೊಡ್ಡಿಹೈದ್ನೆ, ಯಾವನೋ ಪಕ್ಸಾಂತರ ಮಾಡಿದ್ರೆ ಇನ್ನೊಂದು ಪಕ್ಸದೋರು ನಮ್ಮ ಅಂದ, ಚಂದ ನೋಡಿ ಬತ್ತಾವ್ನೆ ಅಂತರೆ. ಇವರ ಸರ್ಕಾರ ಇದ್ದಾಗ ಸುಮ್ಮನಿದ್ದೋರು ಈಗ ಮೇಕೆದಾಟು ಪಾದಯಾತ್ರೆ ಮಾಡ್ಯಾರಂತೆ. ಇದಾನಸಭೆ ಚುನಾವಣೇಲಿ ಆಡಳಿತ ಪಕ್ಸ ಸೋತರೆ ಅದು ಸರ್ಕಾರದ ವಿರುದ್ಧ ಜನರ ಆಕ್ರೋಶ ಅಂತರೆ. ಸೋತ ಪಕ್ಸದೋರು ಅಭ್ಯರ್ಥಿ ಸ್ವಂತ ಶಕ್ತಿ ಮೇಲೆ ಗೆದ್ದವ್ನೆ, ನಮ್ಮ ಅಭ್ಯರ್ಥಿಗೆ ಅಪಪ್ರಚಾರ ಆಯ್ತು ಅನ್ನಲ್ವೇ! ಬಿಜೆಪಿ ಸೋತರೆ ಬೆಲೆ ಇಳಿತದಂತೆ. ಇವರಿದ್ದಾಗ ಈರುಳ್ಳಿ ಬೆಲೆ ಏರಿಕೆಗೆ ಪತರುಗುಟ್ಟೋದ್ರು!’