<p>‘ಹಲೋ... ಮಿನಿಸ್ಟ್ರು ಸಾಹೇಬ್ರಿಗೆ ನಮಸ್ಕಾರ. ನಾನ್ಸಾ ತೆಪರೇಸಿ, ನಿಮ್ ಶಿಷ್ಯ...’</p>.<p>‘ಗೊತ್ತಾತು ಹೇಳಪ, ಏನಾದ್ರು ಕೆಲ್ಸ ಇದ್ರಷ್ಟೇ ನೀ ಫೋನ್ ಮಾಡೋದು. ಹೇಳು ಏನ್ಸಮಾಚಾರ?’</p>.<p>‘ಏನಿಲ್ಲ ಸಾ, ಈ ಸಲ ರಾಜ್ಯೋತ್ಸವ ಪ್ರಶಸ್ತಿ ಕೊಡಲ್ವ?’</p>.<p>‘ಯಾಕಪ್ಪ, ನಿಂಗೇನಾದ್ರು ಬೇಕಿತ್ತಾ?’</p>.<p>‘ನೀವೊಳ್ಳೆ, ಅಂಥ ಒಳ್ಳೆ ಕೆಲ್ಸ ನಾನೇನ್ ಮಾಡಿದೀನಿ ಸಾ, ಪೇಪರ್ನಲ್ಲಿ ಕೆಲವ್ರು ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಬ್ಯಾಡ, ಕೊರೊನಾ ಅದು ಇದು ಅಂತ ಹೇಳಿಕೆ ಕೊಟ್ಟಿದ್ರು ಅದ್ಕೆ ಕೇಳಿದೆ’.</p>.<p>‘ಅವರದೆಲ್ಲ ಇರ್ಲಿ, ಈಗ ನೀ ಹೇಳು, ಪ್ರಶಸ್ತಿ ಕೊಡಬೇಕೋ ಬ್ಯಾಡೋ?’</p>.<p>‘ಕೊಡ್ಬೇಕು ಸಾ, ನೀವು ಸರ್ಕಾರದೋರು ಎಂತೆಂಥದ್ಕೋ ಖರ್ಚು ಮಾಡ್ತೀರಂತೆ, ಸಾಹಿತಿಗಳಿಗೆ, ಸಮಾಜ ಸೇವಕರಿಗೆ ಖರ್ಚು ಮಾಡಲ್ಲ ಅಂದ್ರೆ ಹೆಂಗೆ?’</p>.<p>‘ನಿಂದೂ ಪಾಯಿಂಟ್ ಕಣಯ್ಯ, ಒಪ್ಪಿದೆ’.</p>.<p>‘ಮತ್ತಿನ್ನೇನ್ ಸಾ, ಹಿಂದೆ ಪ್ರಶಸ್ತಿ ತಗಂಡಿರೋರೆಲ್ಲ ಈಗ ಪ್ರಶಸ್ತಿ ಕೊಡಬ್ಯಾಡಿ ಅಂದ್ರೆ? ಕೊರೊನಾಕ್ಕೆ ಸಾವಿರಾರು ಕೋಟಿ ಖರ್ಚು ಮಾಡ್ತೀರಿ, ಅಂಥಾದ್ರಲ್ಲಿ ಎರಡು ಕೋಟಿ ಖರ್ಚು ಮಾಡಿ ಪ್ರಶಸ್ತಿ ಕೊಟ್ರೆ ನಿಮ್ ಗಂಟೇನ್ ಹೋಗ್ತತಿ?’</p>.<p>‘ಆತು ಬಿಡಪ, ಟೆನ್ಶನ್ ತಗಾಬೇಡ. ಈಗ ನಿಮ್ ಕಡೆ ಯಾರಿಗೆ ಪ್ರಶಸ್ತಿ ಕೊಡ್ಬೇಕು?’</p>.<p>‘ನಮ್ಮೂರಲ್ಲಿ ಒಬ್ರು ಹಾವಿನ ಡಾಕ್ಟರು ಅದಾರೆ, ಅವರಿಗೆ...’</p>.<p>‘ಏಯ್, ಹಾವು ಹಿಡಿಯೋರಿಗೆಲ್ಲ ಪ್ರಶಸ್ತಿ ಕೊಡೋಕಾಗಲ್ಲ...’</p>.<p>‘ಯಾಕ್ಸಾ? ಅದೂ ಸಮಾಜ ಸೇವೆ ಅಲ್ವ? ಇವ್ರು ಹಾವು ಹಿಡಿಯೋರಲ್ಲ, ಹಾವಿನ ಡಾಕ್ಟ್ರು...’</p>.<p>‘ಅಂದ್ರೆ ? ಹಾವು ಕಡಿದೋರಿಗೆ ಔಷಧಿ ಕೊಡೋರಾ?’</p>.<p>‘ಅಲ್ಲ ಸಾ, ಹಾವಿಗೆ ಜ್ವರ ಬಂದ್ರೆ ಔಷಧಿ ಕೊಡೋರು...!’</p>.<p>ಮಿನಿಸ್ಟರಿಗೆ ಮಾತೇ ಹೊರಡಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಹಲೋ... ಮಿನಿಸ್ಟ್ರು ಸಾಹೇಬ್ರಿಗೆ ನಮಸ್ಕಾರ. ನಾನ್ಸಾ ತೆಪರೇಸಿ, ನಿಮ್ ಶಿಷ್ಯ...’</p>.<p>‘ಗೊತ್ತಾತು ಹೇಳಪ, ಏನಾದ್ರು ಕೆಲ್ಸ ಇದ್ರಷ್ಟೇ ನೀ ಫೋನ್ ಮಾಡೋದು. ಹೇಳು ಏನ್ಸಮಾಚಾರ?’</p>.<p>‘ಏನಿಲ್ಲ ಸಾ, ಈ ಸಲ ರಾಜ್ಯೋತ್ಸವ ಪ್ರಶಸ್ತಿ ಕೊಡಲ್ವ?’</p>.<p>‘ಯಾಕಪ್ಪ, ನಿಂಗೇನಾದ್ರು ಬೇಕಿತ್ತಾ?’</p>.<p>‘ನೀವೊಳ್ಳೆ, ಅಂಥ ಒಳ್ಳೆ ಕೆಲ್ಸ ನಾನೇನ್ ಮಾಡಿದೀನಿ ಸಾ, ಪೇಪರ್ನಲ್ಲಿ ಕೆಲವ್ರು ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಬ್ಯಾಡ, ಕೊರೊನಾ ಅದು ಇದು ಅಂತ ಹೇಳಿಕೆ ಕೊಟ್ಟಿದ್ರು ಅದ್ಕೆ ಕೇಳಿದೆ’.</p>.<p>‘ಅವರದೆಲ್ಲ ಇರ್ಲಿ, ಈಗ ನೀ ಹೇಳು, ಪ್ರಶಸ್ತಿ ಕೊಡಬೇಕೋ ಬ್ಯಾಡೋ?’</p>.<p>‘ಕೊಡ್ಬೇಕು ಸಾ, ನೀವು ಸರ್ಕಾರದೋರು ಎಂತೆಂಥದ್ಕೋ ಖರ್ಚು ಮಾಡ್ತೀರಂತೆ, ಸಾಹಿತಿಗಳಿಗೆ, ಸಮಾಜ ಸೇವಕರಿಗೆ ಖರ್ಚು ಮಾಡಲ್ಲ ಅಂದ್ರೆ ಹೆಂಗೆ?’</p>.<p>‘ನಿಂದೂ ಪಾಯಿಂಟ್ ಕಣಯ್ಯ, ಒಪ್ಪಿದೆ’.</p>.<p>‘ಮತ್ತಿನ್ನೇನ್ ಸಾ, ಹಿಂದೆ ಪ್ರಶಸ್ತಿ ತಗಂಡಿರೋರೆಲ್ಲ ಈಗ ಪ್ರಶಸ್ತಿ ಕೊಡಬ್ಯಾಡಿ ಅಂದ್ರೆ? ಕೊರೊನಾಕ್ಕೆ ಸಾವಿರಾರು ಕೋಟಿ ಖರ್ಚು ಮಾಡ್ತೀರಿ, ಅಂಥಾದ್ರಲ್ಲಿ ಎರಡು ಕೋಟಿ ಖರ್ಚು ಮಾಡಿ ಪ್ರಶಸ್ತಿ ಕೊಟ್ರೆ ನಿಮ್ ಗಂಟೇನ್ ಹೋಗ್ತತಿ?’</p>.<p>‘ಆತು ಬಿಡಪ, ಟೆನ್ಶನ್ ತಗಾಬೇಡ. ಈಗ ನಿಮ್ ಕಡೆ ಯಾರಿಗೆ ಪ್ರಶಸ್ತಿ ಕೊಡ್ಬೇಕು?’</p>.<p>‘ನಮ್ಮೂರಲ್ಲಿ ಒಬ್ರು ಹಾವಿನ ಡಾಕ್ಟರು ಅದಾರೆ, ಅವರಿಗೆ...’</p>.<p>‘ಏಯ್, ಹಾವು ಹಿಡಿಯೋರಿಗೆಲ್ಲ ಪ್ರಶಸ್ತಿ ಕೊಡೋಕಾಗಲ್ಲ...’</p>.<p>‘ಯಾಕ್ಸಾ? ಅದೂ ಸಮಾಜ ಸೇವೆ ಅಲ್ವ? ಇವ್ರು ಹಾವು ಹಿಡಿಯೋರಲ್ಲ, ಹಾವಿನ ಡಾಕ್ಟ್ರು...’</p>.<p>‘ಅಂದ್ರೆ ? ಹಾವು ಕಡಿದೋರಿಗೆ ಔಷಧಿ ಕೊಡೋರಾ?’</p>.<p>‘ಅಲ್ಲ ಸಾ, ಹಾವಿಗೆ ಜ್ವರ ಬಂದ್ರೆ ಔಷಧಿ ಕೊಡೋರು...!’</p>.<p>ಮಿನಿಸ್ಟರಿಗೆ ಮಾತೇ ಹೊರಡಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>