‘ಸೀನಿಯರ್ ಪ್ಲೇಯರ್ಸ್ ವಿರುದ್ಧ ಮಾತಾಡಿದ್ದೇ ಬೇಗ್ರ ಈ ಸ್ಥಿತಿಗೆ ಕಾರಣವಂತೆ?’ ವಿಜಿ ಕೇಳ್ದ. ‘ಜ್ಯುವೆಲರಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೂ ಕಾರಣ ಇರಬಹುದು ಅನ್ನೋ ಗುಸುಗುಸು ಇದೆ’ ಎಂದ ಮುದ್ದಣ್ಣ ಮುಂದುವರಿದು ಕೇಳ್ದ, ‘ಅದ್ಸರಿ, ಮೊನ್ನೆ ಸಂಸತ್ತಿನಲ್ಲಿ ಇಂಡಿಯಾ–ಪಾಕಿಸ್ತಾನ ಮ್ಯಾಚ್ ಏನಾದ್ರೂ ನಡೀತಿತ್ತಾ...?ಒಬ್ರು ‘ಜೈ ಶ್ರೀರಾಮ್’ ಅಂದ್ರೆ, ಮತ್ತೊಬ್ಬರು ‘ಅಲ್ಲಾಹು ಅಕ್ಬರ್’ ಅಂತಾ ಕೂಗ್ತಿದ್ರು... ಮತ್ಯಾರೋ ವಂದೇ ಮಾತರಂ ಅಂತಾ ನಾನ್ಯಾಕೆ ಕೂಗ್ಲಿ ಅಂತಿದ್ರಲ್ಲ... ಅದಕ್ಕೆ ಕೇಳ್ದೆ’.