‘ಪಿಣರಾಯಿ ಪುಟ್ಟು, ಡಿಎಂಕೆ ಇಡ್ಲಿ-ಸಾಂಬಾರ್, ದೀದಿ ರಸಗುಲ್ಲಾ ತಿಂದು ಸುಸ್ತಾಗಿರ ಚಕ್ರವರ್ತಿಗಳು ಮನದ ಮಾತಿಗೆ ನೋಟ್ಸ್ ಮಾಡಿಕ್ಯತಾವ್ರೆ ತಡೀರಿ!’ ಅಂದ್ರು ಕಮಲದೋರು. ರಾಜ್ಯ ನಾಯಕರು ‘ತಡ್ರಿ ಮಸ್ಕಿ ಮಿಸ್ಸಾಗ್ಯದೆ, ಕೊರೊನಾ ತಲೆದಸಿ ಕೂತದೆ. ಬಾಲಗ್ರಹವಂತೆ! ದೃಷ್ಟಿ ನಿವಾರಣೆಗೆ ಅನ್ನ, ಮೆಣಸಿನಕಾಯಿ, ಉಪ್ಪು ನಿವಾಳಿಸಿ ಮೂರುದಾರೀಲಿ ಚೆಲ್ಲಿ ಅಂತ ಮಾರ್ಗಸೂಚಿ ಬಂದದೆ’ ಅಂದ್ಕಂಡು ಬಿಜಿಯಾಗಿದ್ದರು.