‘ಮೋದಿಗೂ ದೀದಿಗೂ ರಾಜತಂತ್ರದ ಬಡಾಯಿ ಪರೀಕ್ಷೆ ನಡೀತಾ ಅದೆ! ರಾಜಾವುಲಿ ಇನ್ನೊಂದ್ಸಾರಿ ಸಿಎಂ ಪರೀಕ್ಷೆ ಕಟ್ಟಿ ಪಾಸು ಮಾಡಬೇಕು ಅಂತ ಸಿಎಂ ಪದವಿ ಪರೀಕ್ಷಾ ಮಂಡಲಿ ಹೇಳ್ಯದಂತೆ. ಮರಿರಾಜಾವುಲಿ ‘ನಂಗೂ ಏಜಾಗ್ಯದೆ, ಅದ್ಯಕ್ಸರ ಪರೀಕ್ಷೆ ಬರೀತೀನಿ’ ಅಂತ ಅರ್ಜಿ ವಗಾಯ್ಸಿರದು ನೋಡಿದ ಕಟೀಲಣ್ಣ ‘ಸೀಟು ಖಾಲಿ ಇಜ್ಜಿ ಮಾರಾಯ! ಆ ಜೋಕ್ಲಿಗೆ ಯಂತ ಗೊತ್ತಾಪುಂಡು!’ ಅಂತ ನಷ್ಟೋತ್ತರ ಹಾಡ್ತಾವ್ರಂತೆ! ಡಿಕೆ, ಹುಲಿಯಾ, ಕುಮಾರಣ್ಣ ಸಿಎಂ ಎಂಟ್ರೆನ್ಸ್ ಟೆಸ್ಟೇಲಿ ಪಸ್ಟು ಬರಬೇಕು ಅಂತ ಕಾಪಿಚೀಟಿ ಬರಕಂದು ಕೂತವ್ರೆ. ಯತ್ನಾಳಣ್ಣ ಬಿಜೆಪಿ ಹಾಲ್ಟಿಕೇಟೆ ಹರಿದಾಕಿ ಕೂತದೆ! ಅಡಗೂರು ಇಸ್ವಣ್ಣ ‘ನನಗೇನು ಏಜ್ಬಾರಾಗಿಲ್ಲ, ಗಾಂಧಿ ಪಾಸ್ ಮಾಡಿ ಮಂತ್ರಿ ಮಾಡಿ’ ಅಂತ ಮುಲುಕ್ತಾ ಅದೆ!’ ಅಂದ್ರು.