<p><strong>ಜಮ್ಮು:</strong> ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನವು, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಇದನ್ನು ವ್ಯಂಗ್ಯ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ‘ಬೆದರಿಕೆ ಹಾಕುವವರು ಅದಕ್ಕೆ ಬದ್ಧರಾಗಿರಬೇಕು, ಭಯಬಿದ್ದು ಅದನ್ನು ಹಿಂಪಡೆಯಬಾರದು’ ಎಂದಿದ್ದಾರೆ. </p><p>ಭಾರತ ವಿರುದ್ಧ ಪಂದ್ಯವಾಡಬಾರದು ಎಂದು ಪಾಕಿಸ್ತಾನವೇ ನಿರ್ಧರಿಸಿತ್ತು. ಇದೀಗ ಅವರ ನಿಲುವನ್ನು ಅವರೇ ಹಿಂಪಡೆದಿದ್ದಾರೆ. ತನ್ನ ನಿಲುವಿಗೆ ಬದ್ಧವಾಗಿರಲು ಸಾಧ್ಯವಿಲ್ಲದವರು, ಬೆದರಿಕೆ ಹಾಕಲೇಬಾರದು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. </p><p>ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾದ ನಂತರ ಅವರು ನಾಟಕ ಮಾಡುವುದನ್ನು ಬಿಟ್ಟು, ಸುಮ್ಮನೆ ಬಂದು ಪಂದ್ಯವಾಡಿ ಹೋಗಬೇಕು. ಪಂದ್ಯದ ವೇಳೆ ಏನಾಗಬೇಕೋ ಅದೇ ಆಗುತ್ತದೆ ಎಂದಿದ್ದಾರೆ. </p><p>ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಚುಟುಕು ವಿಶ್ವಕಪ್ನಲ್ಲಿ ಟೀಂ ಇಂಡಿಯಾ ವಿರುದ್ಧದ ಲೀಗ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಹೇಳಿತ್ತು. ಐಸಿಸಿ ನಡುವಿನ ವರ್ಚುವಲ್ ಸಭೆಯ ನಂತರ, ಪಾಕ್ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. </p><p>ಇದೀಗ ಪಾಕಿಸ್ತಾನವು ಫೆ.15ರಂದು ಟೀಂ ಇಂಡಿಯಾ ವಿರುದ್ಧ ಕೋಲಂಬೊದಲ್ಲಿ ಪಂದ್ಯವಾಡಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು:</strong> ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನವು, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಇದನ್ನು ವ್ಯಂಗ್ಯ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ‘ಬೆದರಿಕೆ ಹಾಕುವವರು ಅದಕ್ಕೆ ಬದ್ಧರಾಗಿರಬೇಕು, ಭಯಬಿದ್ದು ಅದನ್ನು ಹಿಂಪಡೆಯಬಾರದು’ ಎಂದಿದ್ದಾರೆ. </p><p>ಭಾರತ ವಿರುದ್ಧ ಪಂದ್ಯವಾಡಬಾರದು ಎಂದು ಪಾಕಿಸ್ತಾನವೇ ನಿರ್ಧರಿಸಿತ್ತು. ಇದೀಗ ಅವರ ನಿಲುವನ್ನು ಅವರೇ ಹಿಂಪಡೆದಿದ್ದಾರೆ. ತನ್ನ ನಿಲುವಿಗೆ ಬದ್ಧವಾಗಿರಲು ಸಾಧ್ಯವಿಲ್ಲದವರು, ಬೆದರಿಕೆ ಹಾಕಲೇಬಾರದು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. </p><p>ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾದ ನಂತರ ಅವರು ನಾಟಕ ಮಾಡುವುದನ್ನು ಬಿಟ್ಟು, ಸುಮ್ಮನೆ ಬಂದು ಪಂದ್ಯವಾಡಿ ಹೋಗಬೇಕು. ಪಂದ್ಯದ ವೇಳೆ ಏನಾಗಬೇಕೋ ಅದೇ ಆಗುತ್ತದೆ ಎಂದಿದ್ದಾರೆ. </p><p>ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಚುಟುಕು ವಿಶ್ವಕಪ್ನಲ್ಲಿ ಟೀಂ ಇಂಡಿಯಾ ವಿರುದ್ಧದ ಲೀಗ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಹೇಳಿತ್ತು. ಐಸಿಸಿ ನಡುವಿನ ವರ್ಚುವಲ್ ಸಭೆಯ ನಂತರ, ಪಾಕ್ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. </p><p>ಇದೀಗ ಪಾಕಿಸ್ತಾನವು ಫೆ.15ರಂದು ಟೀಂ ಇಂಡಿಯಾ ವಿರುದ್ಧ ಕೋಲಂಬೊದಲ್ಲಿ ಪಂದ್ಯವಾಡಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>