<p>‘ಏನ್ರುಲ, ಪಿತೃಪಕ್ಷ ಎಲ್ಲ ಮುಗೀತಾ? ಬಾಡು ಬಳ್ಳೆ ಸಮಾರಾದ್ನೆ ಇವತ್ತಿಗು ಐತೆ ಅನ್ನಿ...’ ಹರಟೆಕಟ್ಟೆಯಲ್ಲಿ ದುಬ್ಬೀರ ಹೊಗೆಸೊಪ್ಪಿಗೆ ಸುಣ್ಣ ತಿಕ್ಕುತ್ತ ಕೇಳಿದ.</p>.<p>‘ಅಲ್ಲ ಅದಿರ್ಲಿ, ನೀನೇನು ಇವತ್ತು ಎಲೆಯಡಕೆ ಹೊಗೆಸೊಪ್ಪು ಮೋಜು ಮಾಡ್ತ ಕುಂತಿದಿ?’ ಗುಡ್ಡೆ ನಗಾಡಿದ.</p>.<p>‘ನಿನ್ನೆ ಪಿತೃಪಕ್ಷುಕೆ ಅಪ್ಪನ ಎಡೆಗೆ ಬೀಡಿ ಬೆಂಕಿಪಟ್ಣ, ಹೊಗೆಸೊಪ್ಪು ಮಡಗಿದ್ವಲ್ಲಲೆ, ವೇಸ್ಟ್ ಆಗಬಾರ್ದು ಅಂತ ಹಾಕ್ಕಂತಿದೀನಿ’.</p>.<p>‘ಓ... ನಿಮ್ಮಪ್ಪುಂಗೆ ಹೊಗೆಸೊಪ್ಪು ಚಟ ಇತ್ತು ಅನ್ನು. ಭಂಗಿ ಸೇದೋ ಚಟ ಇದ್ದಿದ್ರೆ?’</p>.<p>‘ಅದ್ನೂ ಮಡಗಬೇಕಾಗ್ತಿತ್ತು. ನಮ್ಮ ಹಿರೀಕ್ರು ಏನೇನು ಇಷ್ಟಪಡ್ತಿದ್ರು ಅದ್ನೆಲ್ಲ ಮಡಗಿ ಧೂಪ ಹಾಕಿದ್ರೆ ಅವರ ಆತ್ಮುಕ್ಕೆ ಶಾಂತಿ ಸಿಗುತ್ತಂತೆ’.</p>.<p>‘ಹೌದಾ? ಅದ್ಸರಿ, ಈ ಪಿತೃಪಕ್ಷವ ಮಾಲಯ ಅಮಾಸೆ ದಿಸವೇ ಯಾಕಿಟ್ರು?’ ತೆಪರೇಸಿ ಪ್ರಶ್ನೆ.</p>.<p>‘ಅವತ್ತು ಸ್ವರ್ಗದ ಬಾಗಿಲು ತೆಗೀತದಂತೆ ಕಣ್ರಲೆ, ನಮ್ಮ ಹಿರೀಕ್ರೆಲ್ಲ ಹೊರಿಕೆ ಬಂದು, ನಾವು ಎಡೆ ಇಕ್ಕಿದೀವೋ ಇಲ್ವೊ ನೋಡ್ತಾರಂತೆ’ ದುಬ್ಬೀರ ವಿವರಿಸಿದ.</p>.<p>‘ಓ ಹಂಗೋ... ಸರಿ, ಎಡೆಗೆ ನೀನೇನ್ ಮಡಗಿದ್ಲಾ ಸಣ್ಣೀರ?’ ಗುಡ್ಡೆ ಕೇಳಿದ.</p>.<p>‘ನಾನು ಅವ್ವುಂಗೆ ಎಲೆಯಡಕೆ ಕಡ್ಡಿಪುಡಿ, ಅಪ್ಪುಂಗೆ ಫುಲ್ ಬಾಟಲು ಎಣ್ಣೆ ಮಡಗಿದ್ದೆ’ ಸಣ್ಣೀರನಿಗೆ ಹೇಳೋಕೆ ಮುಜುಗರ.</p>.<p>‘ಅಲ್ಲ ಕಣ್ಲೆ, ನಿಮ್ಮಪ್ಪುಂಗೆ ಕುಡಿಯೋ ಚಟ ಇರಲಿಲ್ಲ. ಆದ್ರೂ ಎಣ್ಣೆ ಯಾಕೆ ಮಡಗಿದ್ದೆ, ಅದೂ ಫುಲ್ ಬಾಟ್ಲು?’ ಗುಡ್ಡೆ ಕೀಟಲೆ ಮಾಡಿದ.</p>.<p>‘ಯಾಕೇಂದ್ರೆ? ಸತ್ತಿರೋರಿಗೆ ಮಾತ್ರ ಸ್ವರ್ಗದ ಬಾಗಿಲು ತೆಗೆದ್ರೆ ಸಾಕೆ? ಬದುಕಿರೋ ನಮಗೂ ತೆಗೀಬೇಕಲ್ಲಪ್ಪ, ಅದ್ಕೇ ಇದು... ಕ್ವಾಟ್ರು, ಹಾಫು, ಫುಲ್ಲು... ಎಷ್ಟೆಷ್ಟ್ ತಗತೀರೋ ಅಷ್ಟಷ್ಟು ಬಾಗಿಲು ತೆಗೀತಾ ಹೋಗ್ತದೆ...!’ ತೆಪರೇಸಿ ತಮಾಸೆಗೆ ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಏನ್ರುಲ, ಪಿತೃಪಕ್ಷ ಎಲ್ಲ ಮುಗೀತಾ? ಬಾಡು ಬಳ್ಳೆ ಸಮಾರಾದ್ನೆ ಇವತ್ತಿಗು ಐತೆ ಅನ್ನಿ...’ ಹರಟೆಕಟ್ಟೆಯಲ್ಲಿ ದುಬ್ಬೀರ ಹೊಗೆಸೊಪ್ಪಿಗೆ ಸುಣ್ಣ ತಿಕ್ಕುತ್ತ ಕೇಳಿದ.</p>.<p>‘ಅಲ್ಲ ಅದಿರ್ಲಿ, ನೀನೇನು ಇವತ್ತು ಎಲೆಯಡಕೆ ಹೊಗೆಸೊಪ್ಪು ಮೋಜು ಮಾಡ್ತ ಕುಂತಿದಿ?’ ಗುಡ್ಡೆ ನಗಾಡಿದ.</p>.<p>‘ನಿನ್ನೆ ಪಿತೃಪಕ್ಷುಕೆ ಅಪ್ಪನ ಎಡೆಗೆ ಬೀಡಿ ಬೆಂಕಿಪಟ್ಣ, ಹೊಗೆಸೊಪ್ಪು ಮಡಗಿದ್ವಲ್ಲಲೆ, ವೇಸ್ಟ್ ಆಗಬಾರ್ದು ಅಂತ ಹಾಕ್ಕಂತಿದೀನಿ’.</p>.<p>‘ಓ... ನಿಮ್ಮಪ್ಪುಂಗೆ ಹೊಗೆಸೊಪ್ಪು ಚಟ ಇತ್ತು ಅನ್ನು. ಭಂಗಿ ಸೇದೋ ಚಟ ಇದ್ದಿದ್ರೆ?’</p>.<p>‘ಅದ್ನೂ ಮಡಗಬೇಕಾಗ್ತಿತ್ತು. ನಮ್ಮ ಹಿರೀಕ್ರು ಏನೇನು ಇಷ್ಟಪಡ್ತಿದ್ರು ಅದ್ನೆಲ್ಲ ಮಡಗಿ ಧೂಪ ಹಾಕಿದ್ರೆ ಅವರ ಆತ್ಮುಕ್ಕೆ ಶಾಂತಿ ಸಿಗುತ್ತಂತೆ’.</p>.<p>‘ಹೌದಾ? ಅದ್ಸರಿ, ಈ ಪಿತೃಪಕ್ಷವ ಮಾಲಯ ಅಮಾಸೆ ದಿಸವೇ ಯಾಕಿಟ್ರು?’ ತೆಪರೇಸಿ ಪ್ರಶ್ನೆ.</p>.<p>‘ಅವತ್ತು ಸ್ವರ್ಗದ ಬಾಗಿಲು ತೆಗೀತದಂತೆ ಕಣ್ರಲೆ, ನಮ್ಮ ಹಿರೀಕ್ರೆಲ್ಲ ಹೊರಿಕೆ ಬಂದು, ನಾವು ಎಡೆ ಇಕ್ಕಿದೀವೋ ಇಲ್ವೊ ನೋಡ್ತಾರಂತೆ’ ದುಬ್ಬೀರ ವಿವರಿಸಿದ.</p>.<p>‘ಓ ಹಂಗೋ... ಸರಿ, ಎಡೆಗೆ ನೀನೇನ್ ಮಡಗಿದ್ಲಾ ಸಣ್ಣೀರ?’ ಗುಡ್ಡೆ ಕೇಳಿದ.</p>.<p>‘ನಾನು ಅವ್ವುಂಗೆ ಎಲೆಯಡಕೆ ಕಡ್ಡಿಪುಡಿ, ಅಪ್ಪುಂಗೆ ಫುಲ್ ಬಾಟಲು ಎಣ್ಣೆ ಮಡಗಿದ್ದೆ’ ಸಣ್ಣೀರನಿಗೆ ಹೇಳೋಕೆ ಮುಜುಗರ.</p>.<p>‘ಅಲ್ಲ ಕಣ್ಲೆ, ನಿಮ್ಮಪ್ಪುಂಗೆ ಕುಡಿಯೋ ಚಟ ಇರಲಿಲ್ಲ. ಆದ್ರೂ ಎಣ್ಣೆ ಯಾಕೆ ಮಡಗಿದ್ದೆ, ಅದೂ ಫುಲ್ ಬಾಟ್ಲು?’ ಗುಡ್ಡೆ ಕೀಟಲೆ ಮಾಡಿದ.</p>.<p>‘ಯಾಕೇಂದ್ರೆ? ಸತ್ತಿರೋರಿಗೆ ಮಾತ್ರ ಸ್ವರ್ಗದ ಬಾಗಿಲು ತೆಗೆದ್ರೆ ಸಾಕೆ? ಬದುಕಿರೋ ನಮಗೂ ತೆಗೀಬೇಕಲ್ಲಪ್ಪ, ಅದ್ಕೇ ಇದು... ಕ್ವಾಟ್ರು, ಹಾಫು, ಫುಲ್ಲು... ಎಷ್ಟೆಷ್ಟ್ ತಗತೀರೋ ಅಷ್ಟಷ್ಟು ಬಾಗಿಲು ತೆಗೀತಾ ಹೋಗ್ತದೆ...!’ ತೆಪರೇಸಿ ತಮಾಸೆಗೆ ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>