<p>‘ಗುಡ್ಡೆ, ಶಿವಮೊಗ್ಗದ ರಪ್ಪ ಅಂಡ್ ರಪ್ಪ ಅವರ ಗದ್ಲ ಎಲ್ಲಿಗೆ ಬಂತಲೆ?’ ದುಬ್ಬೀರ ಕೇಳಿದ.</p><p>‘ಅದಾ... ಎದೆ ಬಗೆದು ತೋರ್ಸೋ ಲೆವೆಲ್ಲಿಗೆ ಬಂದು ನಿಂತೇತಪ. ಮುಂದೆ ಕಿಡ್ನಿ, ಲಿವರ್ ತಂಕ ಹೋಗಬಹುದು’ ಗುಡ್ಡೆ ನಕ್ಕ.</p><p>‘ಲೇಯ್, ಕಿಡ್ನಿ, ಲಿವರ್ ತೋರ್ಸಿದ್ರೆ ಪಕ್ಷನಿಷ್ಠೆ, ವ್ಯಕ್ತಿನಿಷ್ಠೆ ಗೊತ್ತಾಗ್ತತಾ?’</p><p>‘ಸುಮ್ನೆ ಹೇಳಿದೆ ಕಣಲೆ, ಆದ್ರೆ ಯಾರ್ಯಾರ ಎದೆ ಒಳಗೆ ಯಾರ್ಯಾರಿದಾರೆ ಅಂತ ಒಂದ್ ಲೆವೆಲ್ಗೆ ಗೊತ್ತಾಗ್ತಾ ಐತಿ’.</p><p>‘ಅಲ್ಲೋ... ರಪ್ಪ ಅಂಡ್ ರಪ್ಪಗಳು ಜೋಡೆತ್ತು ಅಂತಿದ್ರು. ಅದ್ಯಾಕೆ ಏರಿಗೊಬ್ರು, ನೀರಿಗೊಬ್ರು ಆದ್ರು ಅಂತ’ ತೆಪರೇಸಿ ಕೇಳಿದ.</p><p>‘ರಾಜಕೀಯ ಅಂದ್ರೆ ಅದೇ ಕಣಲೆ, ಪಕ್ಷ, ಸಿದ್ಧಾಂತ ಇವೆಲ್ಲ ಮಾತಿನ ಬದ್ನೇಕಾಯಿ. ಅವರವರ ಹೆಂಡ್ತಿಗೆ, ಮಕ್ಕಳಿಗೆ ಟಿಕೆಟ್ ಸಿಗದಿದ್ರೆ ಎಲ್ಲರೂ ರೆಬೆಲ್ ಸ್ಟಾರ್ಗಳೇ’.</p><p>‘ಹೋಗ್ಲಿ ಬಂಡಾಯದ ರಪ್ಪ ಅವ್ರನ್ನ ರಾಜ್ಯಪಾಲರಾಗಿ ಮಾಡಿ ರಪ್ ಅಂತ ಬಾಯಿ ಮುಚ್ಚಿಸ್ತಾರಾ?’ ಕೊಟ್ರೇಶಿ ಕೊಕ್ಕೆ.</p><p>‘ಇದ್ಕೆ ‘ಬೇರೆ ಪ್ರಶ್ನೆ ಇದ್ರೆ ಕೇಳಣ್ಣ’ ಅಂತ ಕಮಲಾಧ್ಯಕ್ಷರು ಹೇಳಿದ್ರಂತೆ. ನಿಂಗೂ ಅದೇ ಉತ್ತರ’ ಗುಡ್ಡೆ ನಕ್ಕ.</p><p>‘ಪಾಪ, ಬಂಡಾಯದ ರಪ್ಪ ಅವರಿಗೆ ಅನ್ಯಾಯ ಆಗಬಾರ್ದಿತ್ತು...’ ಮಂಜಮ್ಮ ಕನಿಕರ ತೋರಿದಳು.</p><p>‘ನಂ ಸಿಎಂ ತರ ಸ್ಟ್ರಾಂಗ್ ಆಗ್ಬೇಕು ಮಂಜಮ್ಮ, ಆಗ್ಲೇ ಎಲ್ರು ಮಾತು ಕೇಳೋದು...’</p><p>‘ಈ ಪಿಂಕ್ಲಿ ಮಾತೆಲ್ಲ ಬ್ಯಾಡ, ನಾವೂ ಸ್ಟ್ರಾಂಗೇ.. ನಮ್ ರಪ್ಪ ಟಿಕೆಟ್ ತಗಂಡೇ ತಗಾತಾರೆ ನೋಡ್ತಿರು’ ಮಂಜಮ್ಮ ತಿರುಗೇಟು ನೀಡಿದಳು.</p><p>‘ಈಗ ಈ ಟಿಕೆಟ್ ಗಲಾಟೆ ಬಿಡ್ರಪ್ಪ, ಇವತ್ತಿಂದ ವಿಕೆಟ್ ಗಲಾಟೆ ಶುರುವಾಗೇತಿ. ನಮ್ ಆರ್ಸಿಬಿ ಹುಡುಗ್ರು ಈ ಸಲನಾದ್ರು ಕಪ್ ಹೊಡೀತಾರಾ?’ ದುಬ್ಬೀರ ಮಾತು ಬದಲಿಸಿದ.</p><p>‘ಮತ್ತೆ ಬಿಡ್ತಾರಾ? ಇನ್ನೂ ನೂರು ಸಲ ಸೋತ್ರೂ ಕಪ್ ನಮ್ದೇ’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಗುಡ್ಡೆ, ಶಿವಮೊಗ್ಗದ ರಪ್ಪ ಅಂಡ್ ರಪ್ಪ ಅವರ ಗದ್ಲ ಎಲ್ಲಿಗೆ ಬಂತಲೆ?’ ದುಬ್ಬೀರ ಕೇಳಿದ.</p><p>‘ಅದಾ... ಎದೆ ಬಗೆದು ತೋರ್ಸೋ ಲೆವೆಲ್ಲಿಗೆ ಬಂದು ನಿಂತೇತಪ. ಮುಂದೆ ಕಿಡ್ನಿ, ಲಿವರ್ ತಂಕ ಹೋಗಬಹುದು’ ಗುಡ್ಡೆ ನಕ್ಕ.</p><p>‘ಲೇಯ್, ಕಿಡ್ನಿ, ಲಿವರ್ ತೋರ್ಸಿದ್ರೆ ಪಕ್ಷನಿಷ್ಠೆ, ವ್ಯಕ್ತಿನಿಷ್ಠೆ ಗೊತ್ತಾಗ್ತತಾ?’</p><p>‘ಸುಮ್ನೆ ಹೇಳಿದೆ ಕಣಲೆ, ಆದ್ರೆ ಯಾರ್ಯಾರ ಎದೆ ಒಳಗೆ ಯಾರ್ಯಾರಿದಾರೆ ಅಂತ ಒಂದ್ ಲೆವೆಲ್ಗೆ ಗೊತ್ತಾಗ್ತಾ ಐತಿ’.</p><p>‘ಅಲ್ಲೋ... ರಪ್ಪ ಅಂಡ್ ರಪ್ಪಗಳು ಜೋಡೆತ್ತು ಅಂತಿದ್ರು. ಅದ್ಯಾಕೆ ಏರಿಗೊಬ್ರು, ನೀರಿಗೊಬ್ರು ಆದ್ರು ಅಂತ’ ತೆಪರೇಸಿ ಕೇಳಿದ.</p><p>‘ರಾಜಕೀಯ ಅಂದ್ರೆ ಅದೇ ಕಣಲೆ, ಪಕ್ಷ, ಸಿದ್ಧಾಂತ ಇವೆಲ್ಲ ಮಾತಿನ ಬದ್ನೇಕಾಯಿ. ಅವರವರ ಹೆಂಡ್ತಿಗೆ, ಮಕ್ಕಳಿಗೆ ಟಿಕೆಟ್ ಸಿಗದಿದ್ರೆ ಎಲ್ಲರೂ ರೆಬೆಲ್ ಸ್ಟಾರ್ಗಳೇ’.</p><p>‘ಹೋಗ್ಲಿ ಬಂಡಾಯದ ರಪ್ಪ ಅವ್ರನ್ನ ರಾಜ್ಯಪಾಲರಾಗಿ ಮಾಡಿ ರಪ್ ಅಂತ ಬಾಯಿ ಮುಚ್ಚಿಸ್ತಾರಾ?’ ಕೊಟ್ರೇಶಿ ಕೊಕ್ಕೆ.</p><p>‘ಇದ್ಕೆ ‘ಬೇರೆ ಪ್ರಶ್ನೆ ಇದ್ರೆ ಕೇಳಣ್ಣ’ ಅಂತ ಕಮಲಾಧ್ಯಕ್ಷರು ಹೇಳಿದ್ರಂತೆ. ನಿಂಗೂ ಅದೇ ಉತ್ತರ’ ಗುಡ್ಡೆ ನಕ್ಕ.</p><p>‘ಪಾಪ, ಬಂಡಾಯದ ರಪ್ಪ ಅವರಿಗೆ ಅನ್ಯಾಯ ಆಗಬಾರ್ದಿತ್ತು...’ ಮಂಜಮ್ಮ ಕನಿಕರ ತೋರಿದಳು.</p><p>‘ನಂ ಸಿಎಂ ತರ ಸ್ಟ್ರಾಂಗ್ ಆಗ್ಬೇಕು ಮಂಜಮ್ಮ, ಆಗ್ಲೇ ಎಲ್ರು ಮಾತು ಕೇಳೋದು...’</p><p>‘ಈ ಪಿಂಕ್ಲಿ ಮಾತೆಲ್ಲ ಬ್ಯಾಡ, ನಾವೂ ಸ್ಟ್ರಾಂಗೇ.. ನಮ್ ರಪ್ಪ ಟಿಕೆಟ್ ತಗಂಡೇ ತಗಾತಾರೆ ನೋಡ್ತಿರು’ ಮಂಜಮ್ಮ ತಿರುಗೇಟು ನೀಡಿದಳು.</p><p>‘ಈಗ ಈ ಟಿಕೆಟ್ ಗಲಾಟೆ ಬಿಡ್ರಪ್ಪ, ಇವತ್ತಿಂದ ವಿಕೆಟ್ ಗಲಾಟೆ ಶುರುವಾಗೇತಿ. ನಮ್ ಆರ್ಸಿಬಿ ಹುಡುಗ್ರು ಈ ಸಲನಾದ್ರು ಕಪ್ ಹೊಡೀತಾರಾ?’ ದುಬ್ಬೀರ ಮಾತು ಬದಲಿಸಿದ.</p><p>‘ಮತ್ತೆ ಬಿಡ್ತಾರಾ? ಇನ್ನೂ ನೂರು ಸಲ ಸೋತ್ರೂ ಕಪ್ ನಮ್ದೇ’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>