‘ನಿಮ್ಮದು ತೊಳೆಯದ್ರಗೇ ಆಯ್ತಲ್ರೋ! ಎಲ್ಲಾರಿಗೂ ಉಸ್ತುವಾರಿ ಅಂದ್ರೆ ಎಲ್ಲಿಂದ ತರನ್ಲಾ? ಅನುದಾನ ಇಸ್ಕಂಡೋಗ್ರೋ’ ಅಂತ ಕರೀತಿತ್ತು ರಾಜಾವುಲಿ. ನಮ್ಮುನ್ನ ನೋಡಿ ‘ಯಾರಿಗೂ ರವಷ್ಟೂ ಬೇಜಾರಿಲ್ಲ, ಕ್ಯಾಮೆ ಇಲ್ಲುದ್ಕೆ ಅಸಮಾಧಾನ ಅಷ್ಟೀಯೆ!’ ಅಂದ್ರು. ಈ ಲೂಟಿಚಾರ್ಜು ನೋಡಿದ ಯಂಟಪ್ಪಣ್ಣ ‘ತಡೀನಾರೆ ಕನೋ. ಅರ್ಜೆಂಟು’ ಅಂತ ಜಾಗ ಹುಡುಕತೊಡಗಿದ್ದರು.