<p>ಇದಾನಸೌದುದ ಹಿಂದುಗಡೆ ಸುಮಾರು ಜನ ಕುಂತು ಮಕದ ಮ್ಯಾಲೆ ಬಟ್ಟೆ ಗುಬುರಾಕ್ಕಂಡು ಗೊಳೋ ಅಂತಿದ್ರು.</p>.<p>‘ಯಾರಣೈ ನೀವೆಲ್ಲಾ, ಯಾಕಿಂಗೆ ಕಣ್ಣಿರಾಕ್ತಿ ದರಿ? ಏನು ನಿಮ್ಮ ಸಂಕಟ?’ ತುರೇಮಣೆ ಕೇಳಿದ್ರು. ‘ನಾವೆಲ್ಲಾ ರಾಜಕೀಯ ಅತ್ಮಹತ್ಯೆ ಮಾಡಿಕ್ಯಂಡು ಅಂತರ ಪಿಸಾಚಿ ಆಗಿರೋರು. ಈಗ ನಮ್ಮ ಕೌಪೀನವೂ ಕಿತ್ತೋಗದೆ!’ ಅಂದ್ರು ಸುಧಾರಕರು.</p>.<p>‘ಕುಮಾರಣ್ಣನ ಸ್ಯಾವುಗೆ ಬುಟ್ಟು ರಾಜಾವುಲಿ ಮುದ್ದೆಗೆ ಬಂದೋ. ಇಲ್ಲೀಗಂಟ ಉಣ್ಣಕಿಕ್ಕದೇ ಈಗ ಸಕ್ಕರೆ ಕೊಟ್ಟವ್ರೆ ಡಯಾಬಿಟೀಸ್ ಇರೋನಿಗೆ!’ ಬೆಂಗಳೂರು ಉಸ್ತುವಾರಿ ಸಿಗದೋರು ಬುಸುಗುಟ್ಟಿದ್ರು.</p>.<p>‘ಆಳ್ತನ ನೋಡಿ ಆಹಾರ ಕೊಟ್ಟಿದ್ರಾ, ಈಗ ಅದ ಕಿತಗಂಡು ಎಣ್ಣೆ ಅಂಗಡಿ ಕೊಟ್ಟವ್ರೆ. ಎಣ್ಣೆ ತಗಂಡು ಬಡವರ ಸೇವೆ ಮಾಡದೆಂಗೆ?’ ಅಂತ ಗಂಗಳ ನೆಕ್ಕಿದ್ರು ಇನ್ನೊಬ್ರು.</p>.<p>‘ನಾವು ಉತ್ತು-ಬಿತ್ತು ಫಸಲು ಬಂದಾಗ ಮೆದೆ ಹಾಕಿ, ಬಗ್ಗಡ ಹೂದು, ಸಾರಿಸಿ ಕಣ ಮಾಡ ಟೇಮಿಗೇ ಹೊಲವ ಬ್ಯಾರೇರಿಗೆ ಖಾತೆ ಮಾಡಬೌದೋ?’ ಅಂದೋರ ಮಕ ಧುಮುಧುಮು ಅಂತಿತ್ತು.</p>.<p>‘ನೋಡ್ರಿ ಸಾ, ಪಾಲಾಕುವಾಗ ನಮ್ಮಂತೋರಿಗೆ ಉಸ್ತುವಾರೀನೂ ಸಿಗನಿಲ್ಲ! ನಾವೂವೆ ಪಕ್ಷಾಂತರಿಗಳಿಗೆ ಸಂಪುಟದೇಲಿ ಮೀಸಲಾತಿ ಬೇಕು ಅಂತ ರೆಸಾರ್ಟಿಗೆ ಪರೇಡ್ ಮಾಡ್ತುದವಿ ಈವತ್ತು’ ಅಂದ್ರು ಇನ್ನೊಬ್ರು ಬೇಜಾರೇಲಿ.</p>.<p>‘ನಾನು ಸಿಎಂ ಮೆಟೀರಿಯಲ್ಲು. ಅಂತಿಂತೋರ ತಾವು ಕೆಲಸ ಮಾಡೋ ಯತ್ನ ಮಾಡಿಲ್ಲ’ ಒಬ್ಬರು ಗುರುಗುಟ್ಟಿದರು. ‘ಸೀನಿಯರ್ ಮಂತ್ರಿಗಳೆಲ್ಲಾ ನಮಗೆ ಜಾಗಬುಡ್ಲಿ!’ ಇನ್ನೊಬ್ರು ಬಾಂಬಾಕಿದ್ರು.</p>.<p>‘ನಿಮ್ಮದು ತೊಳೆಯದ್ರಗೇ ಆಯ್ತಲ್ರೋ! ಎಲ್ಲಾರಿಗೂ ಉಸ್ತುವಾರಿ ಅಂದ್ರೆ ಎಲ್ಲಿಂದ ತರನ್ಲಾ? ಅನುದಾನ ಇಸ್ಕಂಡೋಗ್ರೋ’ ಅಂತ ಕರೀತಿತ್ತು ರಾಜಾವುಲಿ. ನಮ್ಮುನ್ನ ನೋಡಿ ‘ಯಾರಿಗೂ ರವಷ್ಟೂ ಬೇಜಾರಿಲ್ಲ, ಕ್ಯಾಮೆ ಇಲ್ಲುದ್ಕೆ ಅಸಮಾಧಾನ ಅಷ್ಟೀಯೆ!’ ಅಂದ್ರು. ಈ ಲೂಟಿಚಾರ್ಜು ನೋಡಿದ ಯಂಟಪ್ಪಣ್ಣ ‘ತಡೀನಾರೆ ಕನೋ. ಅರ್ಜೆಂಟು’ ಅಂತ ಜಾಗ ಹುಡುಕತೊಡಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇದಾನಸೌದುದ ಹಿಂದುಗಡೆ ಸುಮಾರು ಜನ ಕುಂತು ಮಕದ ಮ್ಯಾಲೆ ಬಟ್ಟೆ ಗುಬುರಾಕ್ಕಂಡು ಗೊಳೋ ಅಂತಿದ್ರು.</p>.<p>‘ಯಾರಣೈ ನೀವೆಲ್ಲಾ, ಯಾಕಿಂಗೆ ಕಣ್ಣಿರಾಕ್ತಿ ದರಿ? ಏನು ನಿಮ್ಮ ಸಂಕಟ?’ ತುರೇಮಣೆ ಕೇಳಿದ್ರು. ‘ನಾವೆಲ್ಲಾ ರಾಜಕೀಯ ಅತ್ಮಹತ್ಯೆ ಮಾಡಿಕ್ಯಂಡು ಅಂತರ ಪಿಸಾಚಿ ಆಗಿರೋರು. ಈಗ ನಮ್ಮ ಕೌಪೀನವೂ ಕಿತ್ತೋಗದೆ!’ ಅಂದ್ರು ಸುಧಾರಕರು.</p>.<p>‘ಕುಮಾರಣ್ಣನ ಸ್ಯಾವುಗೆ ಬುಟ್ಟು ರಾಜಾವುಲಿ ಮುದ್ದೆಗೆ ಬಂದೋ. ಇಲ್ಲೀಗಂಟ ಉಣ್ಣಕಿಕ್ಕದೇ ಈಗ ಸಕ್ಕರೆ ಕೊಟ್ಟವ್ರೆ ಡಯಾಬಿಟೀಸ್ ಇರೋನಿಗೆ!’ ಬೆಂಗಳೂರು ಉಸ್ತುವಾರಿ ಸಿಗದೋರು ಬುಸುಗುಟ್ಟಿದ್ರು.</p>.<p>‘ಆಳ್ತನ ನೋಡಿ ಆಹಾರ ಕೊಟ್ಟಿದ್ರಾ, ಈಗ ಅದ ಕಿತಗಂಡು ಎಣ್ಣೆ ಅಂಗಡಿ ಕೊಟ್ಟವ್ರೆ. ಎಣ್ಣೆ ತಗಂಡು ಬಡವರ ಸೇವೆ ಮಾಡದೆಂಗೆ?’ ಅಂತ ಗಂಗಳ ನೆಕ್ಕಿದ್ರು ಇನ್ನೊಬ್ರು.</p>.<p>‘ನಾವು ಉತ್ತು-ಬಿತ್ತು ಫಸಲು ಬಂದಾಗ ಮೆದೆ ಹಾಕಿ, ಬಗ್ಗಡ ಹೂದು, ಸಾರಿಸಿ ಕಣ ಮಾಡ ಟೇಮಿಗೇ ಹೊಲವ ಬ್ಯಾರೇರಿಗೆ ಖಾತೆ ಮಾಡಬೌದೋ?’ ಅಂದೋರ ಮಕ ಧುಮುಧುಮು ಅಂತಿತ್ತು.</p>.<p>‘ನೋಡ್ರಿ ಸಾ, ಪಾಲಾಕುವಾಗ ನಮ್ಮಂತೋರಿಗೆ ಉಸ್ತುವಾರೀನೂ ಸಿಗನಿಲ್ಲ! ನಾವೂವೆ ಪಕ್ಷಾಂತರಿಗಳಿಗೆ ಸಂಪುಟದೇಲಿ ಮೀಸಲಾತಿ ಬೇಕು ಅಂತ ರೆಸಾರ್ಟಿಗೆ ಪರೇಡ್ ಮಾಡ್ತುದವಿ ಈವತ್ತು’ ಅಂದ್ರು ಇನ್ನೊಬ್ರು ಬೇಜಾರೇಲಿ.</p>.<p>‘ನಾನು ಸಿಎಂ ಮೆಟೀರಿಯಲ್ಲು. ಅಂತಿಂತೋರ ತಾವು ಕೆಲಸ ಮಾಡೋ ಯತ್ನ ಮಾಡಿಲ್ಲ’ ಒಬ್ಬರು ಗುರುಗುಟ್ಟಿದರು. ‘ಸೀನಿಯರ್ ಮಂತ್ರಿಗಳೆಲ್ಲಾ ನಮಗೆ ಜಾಗಬುಡ್ಲಿ!’ ಇನ್ನೊಬ್ರು ಬಾಂಬಾಕಿದ್ರು.</p>.<p>‘ನಿಮ್ಮದು ತೊಳೆಯದ್ರಗೇ ಆಯ್ತಲ್ರೋ! ಎಲ್ಲಾರಿಗೂ ಉಸ್ತುವಾರಿ ಅಂದ್ರೆ ಎಲ್ಲಿಂದ ತರನ್ಲಾ? ಅನುದಾನ ಇಸ್ಕಂಡೋಗ್ರೋ’ ಅಂತ ಕರೀತಿತ್ತು ರಾಜಾವುಲಿ. ನಮ್ಮುನ್ನ ನೋಡಿ ‘ಯಾರಿಗೂ ರವಷ್ಟೂ ಬೇಜಾರಿಲ್ಲ, ಕ್ಯಾಮೆ ಇಲ್ಲುದ್ಕೆ ಅಸಮಾಧಾನ ಅಷ್ಟೀಯೆ!’ ಅಂದ್ರು. ಈ ಲೂಟಿಚಾರ್ಜು ನೋಡಿದ ಯಂಟಪ್ಪಣ್ಣ ‘ತಡೀನಾರೆ ಕನೋ. ಅರ್ಜೆಂಟು’ ಅಂತ ಜಾಗ ಹುಡುಕತೊಡಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>