<p>ಪುರಾಣ ಕಾಲದಿಂದ ಅಂತರಿಕ್ಷದಲ್ಲಿದ್ದು ಬೇಸತ್ತಿದ್ದ ತ್ರಿಶಂಕುವಿಗೆ ಆ ಆಗಂತುಕರನ್ನು ಕಂಡು ಖುಷಿಯಾಗಿತ್ತು. ಆಸ್ಥೆಯಿಂದ ವಿಚಾರಿಸಿದ- ‘ನೀವೆಲ್ಲಾ ಯಾರು? ಎಲ್ಲಿಂದ ಬರ್ತಿದೀರಿ?’</p>.<p>‘ನಾವೆಲ್ಲಾ ನಿಮ್ಮ ಅಭಿಮಾನಿಗಳು. ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ದೇಶದವರು. ಮೂರು ಕುಟುಂಬಗಳಿಂದ ಬಂದಿದೀವಿ?’ ಎಂದರವರು.</p>.<p>‘ಗೊತ್ತಾಯ್ತು, ರೆಸಾರ್ಟ್ ರಾಜಕಾರಣ ಮಾಡಿ ರಾಷ್ಟ್ರದಾದ್ಯಂತ ಸುದ್ದಿ ಮಾಡಿದ ರಾಜ್ಯದವರಲ್ವೆ! ಸಾಂದರ್ಭಿಕ ಶಿಶುವಿನ ಅಧಿಕಾರ ಅಂತ್ಯಗೊಳಿಸಿ, ಜಗದೇಕವೀರನ ಪಟ್ಟಾಭಿಷೇಕಕ್ಕೆ ಕಾರಣರಾದ ಅತೃಪ್ತರು ನೀವಲ್ವೆ?’</p>.<p>‘ಅದೆಲ್ಲ ಸುಳ್ಳು, ಸಾಂದರ್ಭಿಕ ಶಿಶುವಿನ ಕುಟುಂಬದಿಂದ ಆದ ಸಮಸ್ಯೆ ಇದು. ನಾವು ಅತೃಪ್ತರಲ್ಲ. ಜನಸೇವೆಗಾಗಿ ಅನ್ಯಾಯದ ವಿರುದ್ಧ ದನಿ ಎತ್ತಿದ ಬಂಡಾಯಗಾರರು. ನಾನು ‘ಹಳ್ಳಿ ಹಕ್ಕಿಯ ಹಾಡು’ ಪುಸ್ತಕ ಬರೆದಿದೀನಿ. ಈಗ ಇನ್ನೊಂದು ಪುಸ್ತಕ ಬರೇಯೋಣಾಂತಿದೀನಿ’ ಎಂದರೊಬ್ಬರು. ಅದಕ್ಕೆ ಇಬ್ಬರು ದನಿಗೂಡಿಸಿದರು.</p>.<p>‘ನಿಮ್ಮ ಪರಿಚಯ? ಏಕೆ ಕುಂಟ್ತಿದೀರಿ?’</p>.<p>‘ನಾನು ಬಸತಿ ಭೈರವಪ್ಪ. ನಾವು 13 ಜನ ಸೋದರರು ಬಂದಿದೀವಿ. ಬಹುಸಂಖ್ಯಾತವಾಗಿದ್ದ ನಮ್ಮ ಕುಟುಂಬಕ್ಕೆ, ಮೇಲಿನ ಒತ್ತಡದಿಂದ, ಅಲ್ಪಸಂಖ್ಯಾತರಿಗೆ ಅಧಿಕಾರ ಕೊಟ್ಟರೂ ತೀವ್ರ ಅವಮಾನ ಆಗಿದ್ರಿಂದ ಈ ಪರಿಸ್ಥಿತಿ ಉಂಟಾಗಿದೆ. ಸುಪ್ರೀಂ ಕೋರ್ಟ್ ಕೊಟ್ಟಿದ್ದ ಗಡುವಿನೊಳಗೆ ನಿಧಾನಸೌಧಕ್ಕೆ ಜೋರಾಗಿ ಓಡಿದಾಗ ನನ್ನ ಕಾಲು ಉಳುಕಿತು?’ ಎಂದರು ಇನ್ನೊಬ್ಬರು.</p>.<p>ಕೊನೆಗೆ ಉಳಿದ ವ್ಯಕ್ತಿ ಹೇಳಿತು– ‘ನನ್ನ ಹೆಸರು ಆಯಾರಾಮ್, ಸ್ವತಂತ್ರನಾಗಿದ್ದ ನನ್ನನ್ನು, ಅಧಿಕಾರಕ್ಕಾಗಿ ಏಣಿಯಾಗಿ ಬಳಸಿಕೊಂಡು ಆನಂತರ ಕಾಲಿನಿಂದ ಒದ್ದರು.’</p>.<p>‘ಮನೆ ಯಜಮಾನರು ನಮ್ಮ ಅಹವಾಲು ಕೇಳದೆ ಮನೆಯಿಂದ ಹೊರಹಾಕಿದರು. ನಮ್ಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಕೋರ್ಟ್ ತೀರ್ಪು ಏನಾಗುತ್ತೋ, ಅಲ್ಲೀವರೆಗೂ ನೀವೇ ನಮ್ಮ ಆಶ್ರಯದಾತರು. ಆವರೆಗೆ ನಾವು ಕ್ಷೇತ್ರಗಳಿಗೆ ಹೋಗುವಂತಿಲ್ಲ!’ ಎಂದರು ಎಲ್ಲರೂ ತಗ್ಗಿದ ದನಿಯಲ್ಲಿ.</p>.<p>‘ನಾವೆಲ್ಲಾ ಸಮಾನ ದುಃಖಿಗಳು, ಚಿಂತಿಸಬೇಡಿ ಬನ್ನಿ’ ಎಂದ ತ್ರಿಶಂಕು, ಅವರನ್ನು ತೆರೆದ ಬಾಹುಗಳಿಂದ ಸ್ವಾಗತಿಸಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪುರಾಣ ಕಾಲದಿಂದ ಅಂತರಿಕ್ಷದಲ್ಲಿದ್ದು ಬೇಸತ್ತಿದ್ದ ತ್ರಿಶಂಕುವಿಗೆ ಆ ಆಗಂತುಕರನ್ನು ಕಂಡು ಖುಷಿಯಾಗಿತ್ತು. ಆಸ್ಥೆಯಿಂದ ವಿಚಾರಿಸಿದ- ‘ನೀವೆಲ್ಲಾ ಯಾರು? ಎಲ್ಲಿಂದ ಬರ್ತಿದೀರಿ?’</p>.<p>‘ನಾವೆಲ್ಲಾ ನಿಮ್ಮ ಅಭಿಮಾನಿಗಳು. ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ದೇಶದವರು. ಮೂರು ಕುಟುಂಬಗಳಿಂದ ಬಂದಿದೀವಿ?’ ಎಂದರವರು.</p>.<p>‘ಗೊತ್ತಾಯ್ತು, ರೆಸಾರ್ಟ್ ರಾಜಕಾರಣ ಮಾಡಿ ರಾಷ್ಟ್ರದಾದ್ಯಂತ ಸುದ್ದಿ ಮಾಡಿದ ರಾಜ್ಯದವರಲ್ವೆ! ಸಾಂದರ್ಭಿಕ ಶಿಶುವಿನ ಅಧಿಕಾರ ಅಂತ್ಯಗೊಳಿಸಿ, ಜಗದೇಕವೀರನ ಪಟ್ಟಾಭಿಷೇಕಕ್ಕೆ ಕಾರಣರಾದ ಅತೃಪ್ತರು ನೀವಲ್ವೆ?’</p>.<p>‘ಅದೆಲ್ಲ ಸುಳ್ಳು, ಸಾಂದರ್ಭಿಕ ಶಿಶುವಿನ ಕುಟುಂಬದಿಂದ ಆದ ಸಮಸ್ಯೆ ಇದು. ನಾವು ಅತೃಪ್ತರಲ್ಲ. ಜನಸೇವೆಗಾಗಿ ಅನ್ಯಾಯದ ವಿರುದ್ಧ ದನಿ ಎತ್ತಿದ ಬಂಡಾಯಗಾರರು. ನಾನು ‘ಹಳ್ಳಿ ಹಕ್ಕಿಯ ಹಾಡು’ ಪುಸ್ತಕ ಬರೆದಿದೀನಿ. ಈಗ ಇನ್ನೊಂದು ಪುಸ್ತಕ ಬರೇಯೋಣಾಂತಿದೀನಿ’ ಎಂದರೊಬ್ಬರು. ಅದಕ್ಕೆ ಇಬ್ಬರು ದನಿಗೂಡಿಸಿದರು.</p>.<p>‘ನಿಮ್ಮ ಪರಿಚಯ? ಏಕೆ ಕುಂಟ್ತಿದೀರಿ?’</p>.<p>‘ನಾನು ಬಸತಿ ಭೈರವಪ್ಪ. ನಾವು 13 ಜನ ಸೋದರರು ಬಂದಿದೀವಿ. ಬಹುಸಂಖ್ಯಾತವಾಗಿದ್ದ ನಮ್ಮ ಕುಟುಂಬಕ್ಕೆ, ಮೇಲಿನ ಒತ್ತಡದಿಂದ, ಅಲ್ಪಸಂಖ್ಯಾತರಿಗೆ ಅಧಿಕಾರ ಕೊಟ್ಟರೂ ತೀವ್ರ ಅವಮಾನ ಆಗಿದ್ರಿಂದ ಈ ಪರಿಸ್ಥಿತಿ ಉಂಟಾಗಿದೆ. ಸುಪ್ರೀಂ ಕೋರ್ಟ್ ಕೊಟ್ಟಿದ್ದ ಗಡುವಿನೊಳಗೆ ನಿಧಾನಸೌಧಕ್ಕೆ ಜೋರಾಗಿ ಓಡಿದಾಗ ನನ್ನ ಕಾಲು ಉಳುಕಿತು?’ ಎಂದರು ಇನ್ನೊಬ್ಬರು.</p>.<p>ಕೊನೆಗೆ ಉಳಿದ ವ್ಯಕ್ತಿ ಹೇಳಿತು– ‘ನನ್ನ ಹೆಸರು ಆಯಾರಾಮ್, ಸ್ವತಂತ್ರನಾಗಿದ್ದ ನನ್ನನ್ನು, ಅಧಿಕಾರಕ್ಕಾಗಿ ಏಣಿಯಾಗಿ ಬಳಸಿಕೊಂಡು ಆನಂತರ ಕಾಲಿನಿಂದ ಒದ್ದರು.’</p>.<p>‘ಮನೆ ಯಜಮಾನರು ನಮ್ಮ ಅಹವಾಲು ಕೇಳದೆ ಮನೆಯಿಂದ ಹೊರಹಾಕಿದರು. ನಮ್ಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಕೋರ್ಟ್ ತೀರ್ಪು ಏನಾಗುತ್ತೋ, ಅಲ್ಲೀವರೆಗೂ ನೀವೇ ನಮ್ಮ ಆಶ್ರಯದಾತರು. ಆವರೆಗೆ ನಾವು ಕ್ಷೇತ್ರಗಳಿಗೆ ಹೋಗುವಂತಿಲ್ಲ!’ ಎಂದರು ಎಲ್ಲರೂ ತಗ್ಗಿದ ದನಿಯಲ್ಲಿ.</p>.<p>‘ನಾವೆಲ್ಲಾ ಸಮಾನ ದುಃಖಿಗಳು, ಚಿಂತಿಸಬೇಡಿ ಬನ್ನಿ’ ಎಂದ ತ್ರಿಶಂಕು, ಅವರನ್ನು ತೆರೆದ ಬಾಹುಗಳಿಂದ ಸ್ವಾಗತಿಸಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>