ಸಂಕ್ರಾಂತಿ ಪುರುಷನು ಈ ಚುನಾವಣಾ ವರ್ಷದಲ್ಲಿ ಭೂತವಿಜಯ, ಪ್ರಜಾನಿಧಿ ಮತ್ತು ಪಂಚ್ ರತ್ನ ಎಂಬ ಹೆಸರಿನಲ್ಲಿ ಮತದಾರರ ಬಕರ ರಾಶಿಗೆ ಪ್ರವೇಶಿಸುವನು. ಆತನು ಕೇಸರಿ ರುಮಾಲು ಧರಿಸಿ, ಹಸ್ತ ಪ್ರದರ್ಶನ ಮಾಡುತ್ತಾ, ತೆನೆಯನ್ನು ಹೊತ್ತು ದಕ್ಷಿಣ ದಿಕ್ಕಿಗೆ ಪ್ರಯಾಣ ಬೆಳೆಸುವನು. ಆತನ ಪ್ರಭಾವದಿಂದ ರಾಜ್ಯದಲ್ಲಿ ಪ್ರಧಾನ ಪಕ್ಷಗಳಲ್ಲಿ ವೇಷದ್ರೋಹಿಗಳ ಸಂಖ್ಯೆ ಉಲ್ಬಣಿಸಿ ಒಳಜಗಳ, ಕಚ್ಚಾಟ, ಹುಚ್ಚಾಟ, ಬೈಸರ್ಗಿಕ ಪ್ರಕೋಪಗಳು ಹೆಚ್ಚುವುವು. ತ್ರಿಪಕ್ಷಗಳು ನಿರುದ್ಯೋಗ ಭೀತಿಯ ನಿವಾರಣೆಗಾಗಿ ಮತ್ತು ಅಧಿಕಾರ ಪ್ರಾಪ್ತಿಗಾಗಿ ಜನತಾ ಜನಾರ್ದನನ ಭಜನೆ ಮಾಡುವುದು ಸೂಕ್ತವು.