<p>‘ಲೇ ತೆಪರ, ನಿನ್ನಿ ಹೊಸ ಸಂಸತ್ ಭವನ ಉದ್ಘಾಟನಿ ಆತಲ್ಲ, ಸ್ಪೀಕರ್ ಕುರ್ಚಿ ಪಕ್ಕ ರಾಜದಂಡ ಅಂತ ಅದೇನೋ ಇಟ್ರಲ್ಲ, ಏನಲೆ ಅದು?’ ಗುಡ್ಡೆ ಕೇಳಿದ.</p>.<p>‘ಅದಾ? ಸೆಂಗೋಲ್ ಅಂತ. ರಾಜದಂಡ, ನ್ಯಾಯದಂಡ ಅಂತಾನೂ ಕರೀತಾರೆ. ಅಧಿಕಾರ ಹಸ್ತಾಂತರ ಮಾಡೋವಾಗ ಕೊಡ್ತಾರಂತಪ...’ ತೆಪರೇಸಿ ವಿವರಿಸಿದ.</p>.<p>‘ಮತ್ತೆ ಅದನ್ಯಾಕೆ ಸ್ಪೀಕರ್ ಕುರ್ಚಿ ಪಕ್ಕ ಇಟ್ರು?’</p>.<p>‘ಸ್ಪೀಕರ್ ಕುರ್ಚಿ ಅಂದ್ರೆ ನ್ಯಾಯಪೀಠ ಇದ್ದಂಗೆ. ರಾಜದಂಡ ಪಕ್ಕದಾಗೇ ಇದ್ರೆ ಎಲ್ರಿಗೂ ನ್ಯಾಯ ಸಿಗ್ತತಿ, ಯಾರ್ಗೂ ಅನ್ಯಾಯ ಆಗಲ್ಲ ಅಂತ ಇಟ್ಟಿರಬೋದು...’</p>.<p>‘ಅದಕ್ಕೆ ಅಷ್ಟ್ ಪವರ್ ಐತಾ?’ ಕೊಟ್ರೇಶಿ ಕೊಕ್ಕೆ.</p>.<p>‘ಮತ್ತೆ? ಏನಂತ ತಿಳಿದಿದಿ? ಬೆಂಕಿ ಇದ್ದಂಗೆ. ದೇವರ ಕೈಯಾಗೂ ಅಂಥದು ಐತಿ ಅಂತ ಮೊನ್ನಿ ಯಾರೋ ವಾಟ್ಸಪ್ನಾಗೆ ಹಾಕಿದ್ರಪ...’</p>.<p>‘ಹೌದಾ? ಹಂಗಿದ್ರೆ ಅಂಥ ರಾಜದಂಡಗಳನ್ನ ಎಲ್ಲ ಕೋರ್ಟು, ಪೊಲೀಸ್ ಸ್ಟೇಷನ್ ಒಳಗೂ ಒಂದೊಂದು ಇಟ್ರೆ ಒಳ್ಳೇದಲ್ವ? ಎಲ್ರಿಗೂ ನ್ಯಾಯ ಕೊಡುಸ್ಬೋದು...’</p>.<p>‘ನಿನ್ತೆಲಿ, ಅವು ಹಂಗೆ ಎಲ್ಲ ಕಡಿ ಸಿಗಲ್ಲ, ದೇವರ ಕೈಯಾಗಿರೋದು ಅಂದ್ರೆ ಏನಂತ ತಿಳಿದಿದಿ?’ ತೆಪರೇಸಿ ರೇಗಿದ.</p>.<p>‘ನೀನೊಬ್ಬ, ಅಂಥ ರಾಜದಂಡ ನಮ್ ದುಬ್ಬೀರನ ಮನ್ಯಾಗೂ ಐತಿ ಗೊತ್ತಾ?’ ಕೊಟ್ರೇಶಿ ನಕ್ಕ.</p>.<p>‘ಹೌದಾ? ದೇವರ ಫೋಟೊದಾಗ?’</p>.<p>‘ಅಲ್ಲ...’</p>.<p>‘ಮತ್ತೆ ನಿಜವಾಗ್ಲುನಾ? ಚಿನ್ನದ್ದಾ?’</p>.<p>‘ಅಲ್ಲ ಮರದ್ದು, ಹಳೇ ಕಾಲದ್ದು... ದುಬ್ಬೀರ ಮದುವಿ ಆದಾಗ ಮನಿ ಅಧಿಕಾರ ಹಸ್ತಾಂತರ ಆತಲ್ಲ, ಅವಾಗಿಂದ ಅವನ ಹೆಂಡ್ತಿ ಕೈಯಾಗೈತಿ. ಅದನ್ನ ಕಂಡ್ರೆ ದುಬ್ಬೀರಂಗೆ ಈಗ್ಲೂ ಭಯ, ಭಕ್ತಿ... ಬೇಕಿದ್ರೆ ಕೇಳಿ ನೋಡು...’</p>.<p>‘ಹೌದಾ? ಅದೆಂಥದಲೆ ಅದು...?’ ತೆಪರೇಸಿಗೆ ಅರ್ಥವಾಗಲಿಲ್ಲ.</p>.<p>‘ಅರ್ಥ ಆಗ್ಲಿಲ್ವಾ? ಲಟ್ಟಣಗಿ ಕಣಲೆ... ರಾಜದಂಡ ಅಲ್ಲ, ರಾಣಿದಂಡ...’</p>.<p>ಕೊಟ್ರೇಶಿ ಕೀಟಲೆಗೆ ‘ಥೂ ನಿನ್ನ’ ಎಂದ ದುಬ್ಬೀರನಿಗೂ ನಗು ತಡೆಯಲಾಗಲಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಲೇ ತೆಪರ, ನಿನ್ನಿ ಹೊಸ ಸಂಸತ್ ಭವನ ಉದ್ಘಾಟನಿ ಆತಲ್ಲ, ಸ್ಪೀಕರ್ ಕುರ್ಚಿ ಪಕ್ಕ ರಾಜದಂಡ ಅಂತ ಅದೇನೋ ಇಟ್ರಲ್ಲ, ಏನಲೆ ಅದು?’ ಗುಡ್ಡೆ ಕೇಳಿದ.</p>.<p>‘ಅದಾ? ಸೆಂಗೋಲ್ ಅಂತ. ರಾಜದಂಡ, ನ್ಯಾಯದಂಡ ಅಂತಾನೂ ಕರೀತಾರೆ. ಅಧಿಕಾರ ಹಸ್ತಾಂತರ ಮಾಡೋವಾಗ ಕೊಡ್ತಾರಂತಪ...’ ತೆಪರೇಸಿ ವಿವರಿಸಿದ.</p>.<p>‘ಮತ್ತೆ ಅದನ್ಯಾಕೆ ಸ್ಪೀಕರ್ ಕುರ್ಚಿ ಪಕ್ಕ ಇಟ್ರು?’</p>.<p>‘ಸ್ಪೀಕರ್ ಕುರ್ಚಿ ಅಂದ್ರೆ ನ್ಯಾಯಪೀಠ ಇದ್ದಂಗೆ. ರಾಜದಂಡ ಪಕ್ಕದಾಗೇ ಇದ್ರೆ ಎಲ್ರಿಗೂ ನ್ಯಾಯ ಸಿಗ್ತತಿ, ಯಾರ್ಗೂ ಅನ್ಯಾಯ ಆಗಲ್ಲ ಅಂತ ಇಟ್ಟಿರಬೋದು...’</p>.<p>‘ಅದಕ್ಕೆ ಅಷ್ಟ್ ಪವರ್ ಐತಾ?’ ಕೊಟ್ರೇಶಿ ಕೊಕ್ಕೆ.</p>.<p>‘ಮತ್ತೆ? ಏನಂತ ತಿಳಿದಿದಿ? ಬೆಂಕಿ ಇದ್ದಂಗೆ. ದೇವರ ಕೈಯಾಗೂ ಅಂಥದು ಐತಿ ಅಂತ ಮೊನ್ನಿ ಯಾರೋ ವಾಟ್ಸಪ್ನಾಗೆ ಹಾಕಿದ್ರಪ...’</p>.<p>‘ಹೌದಾ? ಹಂಗಿದ್ರೆ ಅಂಥ ರಾಜದಂಡಗಳನ್ನ ಎಲ್ಲ ಕೋರ್ಟು, ಪೊಲೀಸ್ ಸ್ಟೇಷನ್ ಒಳಗೂ ಒಂದೊಂದು ಇಟ್ರೆ ಒಳ್ಳೇದಲ್ವ? ಎಲ್ರಿಗೂ ನ್ಯಾಯ ಕೊಡುಸ್ಬೋದು...’</p>.<p>‘ನಿನ್ತೆಲಿ, ಅವು ಹಂಗೆ ಎಲ್ಲ ಕಡಿ ಸಿಗಲ್ಲ, ದೇವರ ಕೈಯಾಗಿರೋದು ಅಂದ್ರೆ ಏನಂತ ತಿಳಿದಿದಿ?’ ತೆಪರೇಸಿ ರೇಗಿದ.</p>.<p>‘ನೀನೊಬ್ಬ, ಅಂಥ ರಾಜದಂಡ ನಮ್ ದುಬ್ಬೀರನ ಮನ್ಯಾಗೂ ಐತಿ ಗೊತ್ತಾ?’ ಕೊಟ್ರೇಶಿ ನಕ್ಕ.</p>.<p>‘ಹೌದಾ? ದೇವರ ಫೋಟೊದಾಗ?’</p>.<p>‘ಅಲ್ಲ...’</p>.<p>‘ಮತ್ತೆ ನಿಜವಾಗ್ಲುನಾ? ಚಿನ್ನದ್ದಾ?’</p>.<p>‘ಅಲ್ಲ ಮರದ್ದು, ಹಳೇ ಕಾಲದ್ದು... ದುಬ್ಬೀರ ಮದುವಿ ಆದಾಗ ಮನಿ ಅಧಿಕಾರ ಹಸ್ತಾಂತರ ಆತಲ್ಲ, ಅವಾಗಿಂದ ಅವನ ಹೆಂಡ್ತಿ ಕೈಯಾಗೈತಿ. ಅದನ್ನ ಕಂಡ್ರೆ ದುಬ್ಬೀರಂಗೆ ಈಗ್ಲೂ ಭಯ, ಭಕ್ತಿ... ಬೇಕಿದ್ರೆ ಕೇಳಿ ನೋಡು...’</p>.<p>‘ಹೌದಾ? ಅದೆಂಥದಲೆ ಅದು...?’ ತೆಪರೇಸಿಗೆ ಅರ್ಥವಾಗಲಿಲ್ಲ.</p>.<p>‘ಅರ್ಥ ಆಗ್ಲಿಲ್ವಾ? ಲಟ್ಟಣಗಿ ಕಣಲೆ... ರಾಜದಂಡ ಅಲ್ಲ, ರಾಣಿದಂಡ...’</p>.<p>ಕೊಟ್ರೇಶಿ ಕೀಟಲೆಗೆ ‘ಥೂ ನಿನ್ನ’ ಎಂದ ದುಬ್ಬೀರನಿಗೂ ನಗು ತಡೆಯಲಾಗಲಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>