‘ಎಲ್ಲ ಸೇರಿ ಅಂದಾಜು ಹದಿನೈದು ಸಾವಿರ ಕೋಟಿ ರೂಪಾಯಿಯಾದರೂ ಖರ್ಚು ಹೌದಿಲ್ಲೋ... ಉಪಯೋಗನೇ ಇಲ್ಲ. ಯಾವ ಸರ್ಕಾರ ಗೆಲ್ಲಬಕು, ಯಾರು ಮುಖ್ಯಮಂತ್ರಿಯಾಗಬೇಕು, ಯಾರಿಗೆ ಯಾವ ಖಾತೆ, ಯಾರು ಯಾವ ನಿಗಮ, ಮಂಡಲಿಗೆ ಅಧ್ಯಕ್ಷರಾಗಬೇಕು ಅಂತ ನಿರ್ಧಾರ ಮಾಡೋದು ಮಠಗಳು ಹೌದಿಲ್ಲೋ. ಇಷ್ಟೆಲ್ಲ ಖರ್ಚು ಮಾಡಿ ಚುನಾವಣೆ ನಡೆಸೂ ಬದಲಿಗೆ ಮಠದ ಸ್ವಾಮಿಗಳು ಮಾತ್ರ ವೋಟ್ ಮಾಡಿ, ಅವರೊಳಗೆ ತೀರ್ಮಾನಿಸಿ ಮುಖ್ಯಮಂತ್ರಿ ಆಯ್ಕೆ ಮಾಡಿದ್ರಾತು. ಚುನಾವಣೆ ಖರ್ಚು ಉಳಿತೈತಿ, ಆಪರೇಶನ್ ಕಮಲದ ರೊಕ್ಕನೂ ಉಳಿತೈತಿ, ಹೀಂಗ ಉಳಿದಿದ್ದ ರೊಕ್ಕನ ಮತ್ತ ಮಠಕ್ಕೆ ಹಂಚಿಬಿಟ್ರಾತು. ನಾ ಚುನಾವಣೆ ಬಗ್ಗೆ ಅಧ್ಯಯನ ಮಾಡಿ ರಾಷ್ಟ್ರಪತಿಗೆ ಸಲ್ಲಿಸೂ ವರದಿ ವಳಗ ಇದೇ ಪ್ರಪೋಸಲ್ ಇಟ್ಟೀನಿ’ ಬೆಕ್ಕಣ್ಣ ವಿವರಿಸುತ್ತಲೇ ಇತ್ತು!