‘ನಿನ್ತೆಲಿ, ಅವರಿಗಿಂತ ನಮ್ಮ ಟಿ.ವಿ. ರಿಪೋಟ್ರುಗಳು ಎಷ್ಟು ಚೆನ್ನಾಗಿ ಕಡ್ಡಿ ಕೆರೀತಾರೆ ನೋಡಿಲ್ಲಿ, ಕೆಆರ್ಎಸ್ ಡ್ಯಾಮಿನ ಕತೆ ಎಷ್ಟು ರೋಮಾಂಚಕ ಆಗ್ತಾ ಐತೆ. ನಮ್ಮ ರಿಪೋಟ್ರುಗಳು ಕುಮಾರಣ್ಣನತ್ರ ಹೋಗಿ
‘ಎಂ.ಪಿ. ಮೇಡಮ್ಮು ಹಿಂಗಂದ್ರು, ನೀವೇನಂತೀರಾ?’ ಅಂತ ಉಪ್ಪು ಕಾರ ಸೇರ್ಸಿ ಕೇಳ್ತಾರೆ. ಅದಕ್ಕೆ ಕುಮಾರಣ್ಣ ಟವೆಲ್ ಕೊಡವಿ ಏನಾದ್ರು ಅಂದ್ರೆ ಅದನ್ನು ಎಂ.ಪಿ. ಮೇಡಮ್ಮತ್ರ ಹೋಗಿ ‘ಕುಮಾರಣ್ಣ ಟವೆಲ್ ಕೊಡವಿ ಇಂಗಿಂಗೆ ಏನೇನೋ ಬೈದ್ರು, ನೀವೇನ್ ಬೈತೀರಾ?’ ಅಂತ ಕೇಳ್ತಾರೆ. ಇಂಗೆ ಇಬ್ಬರ ನಡುವೆ ಬೆಳಿಗ್ಗೆ ಹಚ್ಚಿದ ಬೆಂಕಿ ಸಾಯಂಕಾಲ ಆಗೋದ್ರೊಳಗೆ ಬಿರುಗಾಳಿ ಆಗೋತರ ಮಾಡಿಬಿಟ್ಟಿರ್ತಾರೆ....’ ದುಬ್ಬೀರ ನಕ್ಕ.