ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಹೊರತೆಗೆದು ಚಿನ್ನಾಭರಣಕ್ಕೆ ಹುಡುಕಾಟ

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನಂಜನಗೂಡು: ನಗರದ ಸ್ಮಶಾನದಲ್ಲಿ ಹೂತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಶ್ರೀಕಂಠಪ್ರಸಾದ್‌ ಎಂಬುವವರ (53) ಶವವನ್ನು ಹೊರತೆಗೆದ ದುಷ್ಕರ್ಮಿಗಳು ಚಿನ್ನಾಭರಣಕ್ಕೆ ತಡಕಾಡಿದ್ದಾರೆ.

ಶ್ರೀಕಂಠಪುರಿ ಬಡಾವಣೆಯ ನಿವಾಸಿಯಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದರು. ಪರುಶುರಾಮ ದೇಗುಲ ಸಮೀಪದ ಒಕ್ಕಲಿಗರ ಸ್ಮಶಾನದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಸಲಾಗಿತ್ತು. ಗುಂಡಿ ತೆಗೆಯುವ ಕಾರ್ಮಿಕರು ಶನಿವಾರ ಸ್ಮಶಾನಕ್ಕೆ ತೆರಳಿದಾಗ ಶವ ಹೊರತೆಗೆದದ್ದು ಗೊತ್ತಾಗಿದೆ.

‘ಎದೆಯವರೆಗೆ ಮಣ್ಣು ತೆಗೆದು ಕೊರಳಡಿ ಕೈಹಾಕಿ ಪರಿಶೀಲಿಸಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಅಂತ್ಯಕ್ರಿಯೆಗೂ ಮುನ್ನ ಮೃತದೇಹದ ಮೇಲೆ ಚಿನ್ನಾಭರಣ ಹಾಕಿದ್ದೆವು. ಆಭರಣ ಸಹಿತ ಹೂತಿರಬಹುದು ಎಂಬ ಶಂಕೆಯ ಮೇರೆಗೆ ಈ ಕೃತ್ಯ ಎಸಗಿರಬಹುದು’ ಎಂದು ಮೃತರ ಸಹೋದರ ಮಾದಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.

ಒಕ್ಕಲಗೇರಿಯ ಯಜಮಾನರೊಂದಿಗೆ ಸ್ಮಶಾನಕ್ಕೆ ತೆರಳಿದ ಕುಟುಂಬಸ್ಥರು ಮತ್ತೆ ಮಣ್ಣುಮುಚ್ಚಿದರು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೃತರ ಹೆಬ್ಬಟ್ಟಿನ ಗುರುತು ಪಡೆಯುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT