<p><strong>ಮುರಾರಜಿ ನಿಷ್ಕ್ರಮಣ ಖಚಿತ: ಇಂದಿರಾ ಜತೆ ಎಸ್ಸೆನ್ ಚರ್ಚೆ ವಿಫಲ<br />ನವದೆಹಲಿ, ಜುಲೈ 18–</strong> ಶ್ರೀ ಮುರಾರಜಿ ದೇಸಾಯಿಯವರು ಕೇಂದ್ರ ಸಂಪುಟದಿಂದನಿಷ್ಕ್ರಮಿಸುವುದು ಇಂದು ರಾತ್ರಿ ಖಚಿತವಾಯಿತು.</p>.<p>ಅರ್ಥ ಖಾತೆಯನ್ನು ಶ್ರೀ ದೇಸಾಯಿಯವರಿಗೆ ಹಿಂತಿರುಗಿಸುವುದಿಲ್ಲವೆಂಬ ತಮ್ಮ ನಿರ್ಧಾರಕ್ಕೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ದೃಢವಾಗಿ ಅಂಟಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟು ಇಂದು ರಾತ್ರಿ ಉಲ್ಬಣಗೊಂಡಿತು.</p>.<p><strong>ರಾಜ್ಯದಾದ್ಯಂತ ಮಾರುಕಟ್ಟೆ ಸಮಿತಿಗಳ ರದ್ದು: ಸುಗ್ರೀವಾಜ್ಞೆ</strong><br /><strong>ಬೆಂಗಳೂರು, ಜುಲೈ 18–</strong> ರಾಜ್ಯದಾದ್ಯಂತ ಇರುವ ಮಾರುಕಟ್ಟೆ ಸಮಿತಿಗಳು, ಅವುಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಅಧಿಕಾರವನ್ನು ರದ್ದುಗೊಳಿಸಿ ಮೈಸೂರು ಸರ್ಕಾರ ಇಂದು ಸುಗ್ರೀವಾಜ್ಞೆ ಹೊರಡಿಸಿದೆ.</p>.<p>ಈ ಆಜ್ಞೆಯ ಪ್ರಕಾರ, ರಾಜ್ಯದ ಸುಮಾರು ಎಂಬತ್ತೈದು ಮಾರುಕಟ್ಟೆ ಸಮಿತಿ ಗಳ ಕಾರ್ಯನಿರ್ವಹಣೆಯನ್ನು ಸರಕಾರಿ ಆಡಳಿತಾಧಿಕಾರಿಗಳು ವಹಿಸಿಕೊಳ್ಳುವರು.</p>.<p><strong>ನಿಶ್ಚಯಿಸಿದ್ದಕ್ಕಿಂತ 4 ಗಂಟೆ ಮುಂಚೆ ಚಂದ್ರನಲ್ಲಿ ಮಾನವ</strong><br /><strong>ಹೂಸ್ಟನ್, ಜುಲೈ 18–</strong> ನಾಳೆ ರಾತ್ರಿ, ನಿಶ್ಚಯಿಸಿದ ಕಾಲಕ್ಕಿಂತ ಮೂರು ನಿಮಿಷ ಮುಂಚಿತವಾಗಿ ಗಗನಯಾತ್ರಿಗಳು ಚಂದ್ರನ ಮೇಲೆ ನಡೆಯುವರು ಎಂದು ಗಗನಯಾತ್ರೆ ನಿಯಂತ್ರಣ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುರಾರಜಿ ನಿಷ್ಕ್ರಮಣ ಖಚಿತ: ಇಂದಿರಾ ಜತೆ ಎಸ್ಸೆನ್ ಚರ್ಚೆ ವಿಫಲ<br />ನವದೆಹಲಿ, ಜುಲೈ 18–</strong> ಶ್ರೀ ಮುರಾರಜಿ ದೇಸಾಯಿಯವರು ಕೇಂದ್ರ ಸಂಪುಟದಿಂದನಿಷ್ಕ್ರಮಿಸುವುದು ಇಂದು ರಾತ್ರಿ ಖಚಿತವಾಯಿತು.</p>.<p>ಅರ್ಥ ಖಾತೆಯನ್ನು ಶ್ರೀ ದೇಸಾಯಿಯವರಿಗೆ ಹಿಂತಿರುಗಿಸುವುದಿಲ್ಲವೆಂಬ ತಮ್ಮ ನಿರ್ಧಾರಕ್ಕೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ದೃಢವಾಗಿ ಅಂಟಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟು ಇಂದು ರಾತ್ರಿ ಉಲ್ಬಣಗೊಂಡಿತು.</p>.<p><strong>ರಾಜ್ಯದಾದ್ಯಂತ ಮಾರುಕಟ್ಟೆ ಸಮಿತಿಗಳ ರದ್ದು: ಸುಗ್ರೀವಾಜ್ಞೆ</strong><br /><strong>ಬೆಂಗಳೂರು, ಜುಲೈ 18–</strong> ರಾಜ್ಯದಾದ್ಯಂತ ಇರುವ ಮಾರುಕಟ್ಟೆ ಸಮಿತಿಗಳು, ಅವುಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಅಧಿಕಾರವನ್ನು ರದ್ದುಗೊಳಿಸಿ ಮೈಸೂರು ಸರ್ಕಾರ ಇಂದು ಸುಗ್ರೀವಾಜ್ಞೆ ಹೊರಡಿಸಿದೆ.</p>.<p>ಈ ಆಜ್ಞೆಯ ಪ್ರಕಾರ, ರಾಜ್ಯದ ಸುಮಾರು ಎಂಬತ್ತೈದು ಮಾರುಕಟ್ಟೆ ಸಮಿತಿ ಗಳ ಕಾರ್ಯನಿರ್ವಹಣೆಯನ್ನು ಸರಕಾರಿ ಆಡಳಿತಾಧಿಕಾರಿಗಳು ವಹಿಸಿಕೊಳ್ಳುವರು.</p>.<p><strong>ನಿಶ್ಚಯಿಸಿದ್ದಕ್ಕಿಂತ 4 ಗಂಟೆ ಮುಂಚೆ ಚಂದ್ರನಲ್ಲಿ ಮಾನವ</strong><br /><strong>ಹೂಸ್ಟನ್, ಜುಲೈ 18–</strong> ನಾಳೆ ರಾತ್ರಿ, ನಿಶ್ಚಯಿಸಿದ ಕಾಲಕ್ಕಿಂತ ಮೂರು ನಿಮಿಷ ಮುಂಚಿತವಾಗಿ ಗಗನಯಾತ್ರಿಗಳು ಚಂದ್ರನ ಮೇಲೆ ನಡೆಯುವರು ಎಂದು ಗಗನಯಾತ್ರೆ ನಿಯಂತ್ರಣ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>