ಉಕ್ಕು ಕಾರ್ಖಾನೆ: ವಿದೇಶಿಯರ ಸಲಹೆ ಇನ್ನು ಮುಂದೆ ಇಲ್ಲ
ನವದೆಹಲಿ, ಮಾರ್ಚ್ 30– ರಾಷ್ಟ್ರದಲ್ಲಿ ನಿರ್ಮಿಸುವ ಉಕ್ಕು ಕಾರ್ಖಾನೆಗಳ ವಿನ್ಯಾಸ ಮತ್ತು ಎಂಜಿನಿಯರಿಂಗ್ ವಿಷಯಗಳಿಗೆ ಪ್ರಧಾನ ಸಲಹೆಗಾರರಾಗಿ ವಿದೇಶಿಯರನ್ನು ಇನ್ನು ಮುಂದೆ ನೇಮಿಸುವುದಿಲ್ಲ ಎಂದು ಉಕ್ಕು ಸ್ಟೇಟ್ ಸಚಿವ ಕೆ.ಸಿ. ಪಂತ್ ಇಂದು ರಾಜ್ಯಸಭೆಗೆ ತಿಳಿಸಿದರು.