<p><strong>ಮುಖ್ಯಮಂತ್ರಿಗಳು ಒಪ್ಪದೆ ಪಾಟಸ್ಕರ್ ಸೂತ್ರದ ಅನ್ವಯವಿಲ್ಲ<br />ನವದೆಹಲಿ, ಏ. 2– </strong>ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಒಪ್ಪದ ಹೊರತು, ಮೈಸೂರು– ಮಹಾರಾಷ್ಟ್ರ ರಾಜ್ಯಗಳ ನಡುವಣ ಗಡಿ ವಿವಾದದ ಇತ್ಯರ್ಥಕ್ಕೆ ಪಾಟಸ್ಕರ್ ಸೂತ್ರವನ್ನು ಅನ್ವಯ ಮಾಡುವುದಕ್ಕೆ ಆಗುವುದಿಲ್ಲವೆಂದು ಕೇಂದ್ರ ಗೃಹ ಖಾತೆ ಸ್ಟೇಟ್ ಸಚಿವ<br />ಶ್ರೀ ವಿದ್ಯಾಚರಣ್ ಶುಕ್ಲಾ ಅವರು ಇಂದು ಲೋಕಸಭೆಯಲ್ಲಿ ಹೇಳಿದರು.</p>.<p><strong>ಕೋಲಾರ ಜಿಲ್ಲೆಯಲ್ಲಿ 3 ವರ್ಷ ಕಂದಾಯ ಮಾಫಿ: ಶೀಘ್ರವೇ ಆಜ್ಞೆ<br />ಬೆಂಗಳೂರು, ಏ. 2–</strong> ಕೋಲಾರ ಜಿಲ್ಲೆಯಲ್ಲಿ 1965ರಿಂದ 3 ವರ್ಷಗಳ ಕಾಲ ಕಂದಾಯವನ್ನು ಮಾಫಿ ಮಾಡಬೇಕೆಂದು ಜಿಲ್ಲಾಧಿಕಾರಿ ಶಿಫಾರಸು ಮಾಡಿರುವ ಪತ್ರ ಸರ್ಕಾರಕ್ಕೆ ತಲುಪಿದೆಯೆಂದು, ಇದನ್ನು ಸರ್ಕಾರ ಒಪ್ಪಿದ್ದು ಇಷ್ಟರಲ್ಲೇ ಸರ್ಕಾರಿ ಆಜ್ಞೆ ಹೊರಡಿಸಲಾಗುವುದೆಂದು ರೆವಿನ್ಯೂ ಸಚಿವ ಶ್ರೀ ಎಚ್.ವಿ.ಕೌಜಲಗಿ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.</p>.<p>ಕಳೆದ 3 ವರ್ಷಗಳಿಂದಲೂ ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗದೆ ಬೆಳೆ ಹಾಳಾಗಿರುವುದರಿಂದ ರೈತರು ಯಾವ ವಿಧವಾದ ತೆರಿಗೆಯನ್ನೂ ಕೊಡುವ ಪರಿಸ್ಥಿತಿಯಲ್ಲಿ ಇಲ್ಲವೆಂಬ ಕಾರಣದಿಂದ ಕಂದಾಯವನ್ನು ಮಾಫಿ ಮಾಡಬೇಕೆಂದು ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆಂದು ಸಚಿವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಖ್ಯಮಂತ್ರಿಗಳು ಒಪ್ಪದೆ ಪಾಟಸ್ಕರ್ ಸೂತ್ರದ ಅನ್ವಯವಿಲ್ಲ<br />ನವದೆಹಲಿ, ಏ. 2– </strong>ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಒಪ್ಪದ ಹೊರತು, ಮೈಸೂರು– ಮಹಾರಾಷ್ಟ್ರ ರಾಜ್ಯಗಳ ನಡುವಣ ಗಡಿ ವಿವಾದದ ಇತ್ಯರ್ಥಕ್ಕೆ ಪಾಟಸ್ಕರ್ ಸೂತ್ರವನ್ನು ಅನ್ವಯ ಮಾಡುವುದಕ್ಕೆ ಆಗುವುದಿಲ್ಲವೆಂದು ಕೇಂದ್ರ ಗೃಹ ಖಾತೆ ಸ್ಟೇಟ್ ಸಚಿವ<br />ಶ್ರೀ ವಿದ್ಯಾಚರಣ್ ಶುಕ್ಲಾ ಅವರು ಇಂದು ಲೋಕಸಭೆಯಲ್ಲಿ ಹೇಳಿದರು.</p>.<p><strong>ಕೋಲಾರ ಜಿಲ್ಲೆಯಲ್ಲಿ 3 ವರ್ಷ ಕಂದಾಯ ಮಾಫಿ: ಶೀಘ್ರವೇ ಆಜ್ಞೆ<br />ಬೆಂಗಳೂರು, ಏ. 2–</strong> ಕೋಲಾರ ಜಿಲ್ಲೆಯಲ್ಲಿ 1965ರಿಂದ 3 ವರ್ಷಗಳ ಕಾಲ ಕಂದಾಯವನ್ನು ಮಾಫಿ ಮಾಡಬೇಕೆಂದು ಜಿಲ್ಲಾಧಿಕಾರಿ ಶಿಫಾರಸು ಮಾಡಿರುವ ಪತ್ರ ಸರ್ಕಾರಕ್ಕೆ ತಲುಪಿದೆಯೆಂದು, ಇದನ್ನು ಸರ್ಕಾರ ಒಪ್ಪಿದ್ದು ಇಷ್ಟರಲ್ಲೇ ಸರ್ಕಾರಿ ಆಜ್ಞೆ ಹೊರಡಿಸಲಾಗುವುದೆಂದು ರೆವಿನ್ಯೂ ಸಚಿವ ಶ್ರೀ ಎಚ್.ವಿ.ಕೌಜಲಗಿ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.</p>.<p>ಕಳೆದ 3 ವರ್ಷಗಳಿಂದಲೂ ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗದೆ ಬೆಳೆ ಹಾಳಾಗಿರುವುದರಿಂದ ರೈತರು ಯಾವ ವಿಧವಾದ ತೆರಿಗೆಯನ್ನೂ ಕೊಡುವ ಪರಿಸ್ಥಿತಿಯಲ್ಲಿ ಇಲ್ಲವೆಂಬ ಕಾರಣದಿಂದ ಕಂದಾಯವನ್ನು ಮಾಫಿ ಮಾಡಬೇಕೆಂದು ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆಂದು ಸಚಿವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>