ಕ್ಷಾಮ ಪ್ರದೇಶಕ್ಕೆ ಸಮೃದ್ಧಿ: ಆಲಮಟ್ಟಿ ಜಲಾಶಯ ಯೋಜನೆಗೆ ಶಂಕುಸ್ಥಾಪನೆ
ಬಿಜಾಪುರ, ಏ. 28– ಬಿಜಾಪುರ, ಬಿದರೆ, ಕಲ್ಬುರ್ಗಿ, ರಾಯಚೂರು ಜಿಲ್ಲೆಗಳ ಕ್ಷಾಮ ಪ್ರದೇಶಗಳನ್ನು ಸಮೃದ್ಧಿಯ ಬೀಡಾಗಿ ಪರಿವರ್ತಿಸಲಿರುವ ಆಲಮಟ್ಟಿ ಜಲಾಶಯ ಯೋಜನೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ನೆರವೇರಿಸಿದರು. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ ಈ ಅಣೆಕಟ್ಟು ರಾಜ್ಯದ ನೀರಾವರಿ ಯೋಜನೆಗಳಲ್ಲಿ ಅತಿ ದೊಡ್ಡದು.