<p><strong>ಕ್ಷಾಮ ಪ್ರದೇಶಕ್ಕೆ ಸಮೃದ್ಧಿ: ಆಲಮಟ್ಟಿ ಜಲಾಶಯ ಯೋಜನೆಗೆ ಶಂಕುಸ್ಥಾಪನೆ</strong><br /><strong>ಬಿಜಾಪುರ, ಏ. 28–</strong> ಬಿಜಾಪುರ, ಬಿದರೆ, ಕಲ್ಬುರ್ಗಿ, ರಾಯಚೂರು ಜಿಲ್ಲೆಗಳ ಕ್ಷಾಮ ಪ್ರದೇಶಗಳನ್ನು ಸಮೃದ್ಧಿಯ ಬೀಡಾಗಿ ಪರಿವರ್ತಿಸಲಿರುವ ಆಲಮಟ್ಟಿ ಜಲಾಶಯ ಯೋಜನೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ನೆರವೇರಿಸಿದರು. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ ಈ ಅಣೆಕಟ್ಟು ರಾಜ್ಯದ ನೀರಾವರಿ ಯೋಜನೆಗಳಲ್ಲಿ ಅತಿ ದೊಡ್ಡದು.</p>.<p>ಹಲವು ಕಾರಣಗಳಿಂದಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದರಲ್ಲಿ ನಿಧಾನವಾಯಿತೆಂದ ಮುಖ್ಯಮಂತ್ರಿ, ಯೋಜನೆ ಕೆಲಸವನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲವೆಂದರು. ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದ್ದಕ್ಕಾಗಿ ಅವರು ಸಂತೋಷ ವ್ಯಕ್ತಪಡಿಸಿ, ಈ ಯೋಜನೆಯಿಂದ ನಿರ್ವಸತಿಗರಾಗಿರುವ ಜನರಿಗೆ ಶೀಘ್ರವಾಗಿ ಪುನರ್ವಸತಿ ಕಲ್ಪಿಸಲಾಗುವುದೆಂದರು.</p>.<p><strong>ಕೈಬರಹ– ಉಕ್ತಲೇಖನ ಪಠ್ಯಕ್ರಮ ಮತ್ತೆ ಜಾರಿಗೆ?</strong><br /><strong>ಬೆಂಗಳೂರು, ಏ. 28–</strong> ವಿದ್ಯಾರ್ಥಿಗಳ ಕೈಬರಹ ಉತ್ತಮಗೊಳ್ಳುವಂತಾಗಲು ಹಾಗೂ ಚೊಕ್ಕ ಭಾಷೆ ಬರೆಯುವಂತಾಗಲು ಪ್ರಾಥಮಿಕ ಶಾಲೆಗಳಲ್ಲಿ ಕಾಪಿ ಬರೆಸುವ ಹಾಗೂ ಉಕ್ತ ಲೇಖನ ತರಗತಿಗಳನ್ನು ಕಡ್ಡಾಯ ಮಾಡುವ ಸಂಭವವಿದೆ.</p>.<p>ಇಂದು ಶಿಕ್ಷಣ ಸಚಿವ ಶ್ರೀ ಶಂಕರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಶಿಕ್ಷಣ ಸಲಹಾ ಮಂಡಳಿ ಈ ಎರಡು ವಿಷಯಗಳಿಗೆ ಹೆಚ್ಚು ಗಮನ ಕೊಡಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಖಾಸಗಿ ಶಿಕ್ಷಣ ಸಂಸ್ಥೆಗಳು ಮಿತಿಮೀರಿ ನಾನಾ ರೂಪದ ಶುಲ್ಕಗಳನ್ನು ವಸೂಲು ಮಾಡುತ್ತಿವೆ ಎಂದಿರುವ ಸಾರ್ವಜನಿಕ ದೂರನ್ನು ಇಂದು ನಡೆದ ಮಂಡಳಿಯ ಸಭೆ ಪರಿಶೀಲಿಸಿತು.</p>.<p><strong>ಚೀನೀ ಉಪಗ್ರಹ ಕುರಿತು ಕಳವಳ</strong><br /><strong>ನವದೆಹಲಿ, ಏ. 28–</strong> ಹತ್ತು ವರ್ಷಗಳ ಅವಧಿಯ ಚೌಕಟ್ಟಿನಲ್ಲಿ ತಯಾರಿಸುತ್ತಿರುವ ತನ್ನ ಅಂತರಿಕ್ಷ ಕಾರ್ಯಕ್ರಮವನ್ನು ಸರ್ಕಾರವು ಚೀನೀಯರು ಪಥಕ್ಕೆ ಉಪಗ್ರಹವೊಂದನ್ನು ಹಾರಿಸಿ ಬಿಟ್ಟಿರುವುದರ ಬೆಳಕಿನಲ್ಲಿ ಪುನರ್ವಿಮರ್ಶಿಸ ಬೇಕಾಗಿದೆ ಎಂದು ರಕ್ಷಣಾ ಸಚಿವ ಶ್ರೀ ಸ್ವರಣ್ಸಿಂಗ್ ಲೋಕಸಭೆಗೆ ತಿಳಿಸಿದರು.</p>.<p>ಈ ಉಪಗ್ರಹದಿಂದ ಭಾರತದ ಭದ್ರತೆ ಮೇಲಾಗುವ ಪರಿಣಾಮದ ಕುರಿತು ತರಲಾಗಿದ್ದ ಗಮನಸೆಳೆಯುವ ಸೂಚನೆ ಮೇಲೆ ಅವರು ಈ ಹೇಳಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ಷಾಮ ಪ್ರದೇಶಕ್ಕೆ ಸಮೃದ್ಧಿ: ಆಲಮಟ್ಟಿ ಜಲಾಶಯ ಯೋಜನೆಗೆ ಶಂಕುಸ್ಥಾಪನೆ</strong><br /><strong>ಬಿಜಾಪುರ, ಏ. 28–</strong> ಬಿಜಾಪುರ, ಬಿದರೆ, ಕಲ್ಬುರ್ಗಿ, ರಾಯಚೂರು ಜಿಲ್ಲೆಗಳ ಕ್ಷಾಮ ಪ್ರದೇಶಗಳನ್ನು ಸಮೃದ್ಧಿಯ ಬೀಡಾಗಿ ಪರಿವರ್ತಿಸಲಿರುವ ಆಲಮಟ್ಟಿ ಜಲಾಶಯ ಯೋಜನೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ನೆರವೇರಿಸಿದರು. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ ಈ ಅಣೆಕಟ್ಟು ರಾಜ್ಯದ ನೀರಾವರಿ ಯೋಜನೆಗಳಲ್ಲಿ ಅತಿ ದೊಡ್ಡದು.</p>.<p>ಹಲವು ಕಾರಣಗಳಿಂದಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದರಲ್ಲಿ ನಿಧಾನವಾಯಿತೆಂದ ಮುಖ್ಯಮಂತ್ರಿ, ಯೋಜನೆ ಕೆಲಸವನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲವೆಂದರು. ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದ್ದಕ್ಕಾಗಿ ಅವರು ಸಂತೋಷ ವ್ಯಕ್ತಪಡಿಸಿ, ಈ ಯೋಜನೆಯಿಂದ ನಿರ್ವಸತಿಗರಾಗಿರುವ ಜನರಿಗೆ ಶೀಘ್ರವಾಗಿ ಪುನರ್ವಸತಿ ಕಲ್ಪಿಸಲಾಗುವುದೆಂದರು.</p>.<p><strong>ಕೈಬರಹ– ಉಕ್ತಲೇಖನ ಪಠ್ಯಕ್ರಮ ಮತ್ತೆ ಜಾರಿಗೆ?</strong><br /><strong>ಬೆಂಗಳೂರು, ಏ. 28–</strong> ವಿದ್ಯಾರ್ಥಿಗಳ ಕೈಬರಹ ಉತ್ತಮಗೊಳ್ಳುವಂತಾಗಲು ಹಾಗೂ ಚೊಕ್ಕ ಭಾಷೆ ಬರೆಯುವಂತಾಗಲು ಪ್ರಾಥಮಿಕ ಶಾಲೆಗಳಲ್ಲಿ ಕಾಪಿ ಬರೆಸುವ ಹಾಗೂ ಉಕ್ತ ಲೇಖನ ತರಗತಿಗಳನ್ನು ಕಡ್ಡಾಯ ಮಾಡುವ ಸಂಭವವಿದೆ.</p>.<p>ಇಂದು ಶಿಕ್ಷಣ ಸಚಿವ ಶ್ರೀ ಶಂಕರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಶಿಕ್ಷಣ ಸಲಹಾ ಮಂಡಳಿ ಈ ಎರಡು ವಿಷಯಗಳಿಗೆ ಹೆಚ್ಚು ಗಮನ ಕೊಡಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಖಾಸಗಿ ಶಿಕ್ಷಣ ಸಂಸ್ಥೆಗಳು ಮಿತಿಮೀರಿ ನಾನಾ ರೂಪದ ಶುಲ್ಕಗಳನ್ನು ವಸೂಲು ಮಾಡುತ್ತಿವೆ ಎಂದಿರುವ ಸಾರ್ವಜನಿಕ ದೂರನ್ನು ಇಂದು ನಡೆದ ಮಂಡಳಿಯ ಸಭೆ ಪರಿಶೀಲಿಸಿತು.</p>.<p><strong>ಚೀನೀ ಉಪಗ್ರಹ ಕುರಿತು ಕಳವಳ</strong><br /><strong>ನವದೆಹಲಿ, ಏ. 28–</strong> ಹತ್ತು ವರ್ಷಗಳ ಅವಧಿಯ ಚೌಕಟ್ಟಿನಲ್ಲಿ ತಯಾರಿಸುತ್ತಿರುವ ತನ್ನ ಅಂತರಿಕ್ಷ ಕಾರ್ಯಕ್ರಮವನ್ನು ಸರ್ಕಾರವು ಚೀನೀಯರು ಪಥಕ್ಕೆ ಉಪಗ್ರಹವೊಂದನ್ನು ಹಾರಿಸಿ ಬಿಟ್ಟಿರುವುದರ ಬೆಳಕಿನಲ್ಲಿ ಪುನರ್ವಿಮರ್ಶಿಸ ಬೇಕಾಗಿದೆ ಎಂದು ರಕ್ಷಣಾ ಸಚಿವ ಶ್ರೀ ಸ್ವರಣ್ಸಿಂಗ್ ಲೋಕಸಭೆಗೆ ತಿಳಿಸಿದರು.</p>.<p>ಈ ಉಪಗ್ರಹದಿಂದ ಭಾರತದ ಭದ್ರತೆ ಮೇಲಾಗುವ ಪರಿಣಾಮದ ಕುರಿತು ತರಲಾಗಿದ್ದ ಗಮನಸೆಳೆಯುವ ಸೂಚನೆ ಮೇಲೆ ಅವರು ಈ ಹೇಳಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>