<p><strong>ಮೈಸೂರು ಉಪಚುನಾವಣೆ ಪರಾಭವ: ಸಂಸ್ಥಾ ಕಾಂಗ್ರೆಸ್ ಎಂ.ಪಿ.ಗಳ ಕಳವಳ</strong></p>.<p><strong>ನವದೆಹಲಿ, ಮೇ 6–</strong> ಮೈಸೂರು ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರಾಭವಕ್ಕೆ ಕಾರಣ ಕುರಿತು ವಿವರ ತನಿಖೆ ನಡೆಸುವಂತೆ ಸಂಸ್ಥಾ ಕಾಂಗ್ರೆಸ್ ಸಂಸದೀಯ ಪಕ್ಷವು ಇಂದು ಕಾರ್ಯಕಾರಿ ಸಮಿತಿಯನ್ನು ಕೋರಿದೆ.</p>.<p>ಮೇ 23ರಂದು ಕಾರ್ಯಕಾರಿ ಸಮಿತಿಯು ಇಲ್ಲಿ ಸಭೆ ಸೇರಲಿರುವುದರಿಂದ ತನಿಖೆ ನಡೆಸಲು ಸಣ್ಣ ಸಮಿತಿಯೊಂದನ್ನು ರಚಿಸುವಂತೆ ಅಧ್ಯಕ್ಷ ಎಸ್. ನಿಜಲಿಂಗಪ್ಪನವರನ್ನು ಪ್ರಾರ್ಥಿಸುವ ಸಂಭವವಿದೆ. ಸಮಿತಿಯ ವರದಿಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪರಿಶೀಲಿಸಬಹುದು.</p>.<p><strong>ವಿದೇಶಿ ಹಣದ ಪ್ರಭಾವ ತಪ್ಪಿಸಲು ಶೀಘ್ರವೇ ಶಾಸನ</strong></p>.<p><strong>ನವದೆಹಲಿ, ಮೇ 6–</strong> ಭಾರತದಲ್ಲಿ ವಿದೇಶಿ ಹಣದ ಪ್ರಭಾವ ನಿರೋಧಿಸಲು ಮಸೂದೆಯೊಂದನ್ನು ಮಂಡಿಸಲು ಕೇಂದ್ರ ಸರ್ಕಾರ ಯೋಚಿಸಿದೆ.</p>.<p>ರಾಜಕೀಯ ಪಕ್ಷಗಳು ವಿದೇಶಿ ಹಣ ಪಡೆಯುವುದರ ಸಂಪೂರ್ಣ ನಿಷೇಧ ಮತ್ತು ಶಾಸಕರೂ ವಿದೇಶಿ ಹಣ ಪಡೆಯುವುದರ ಸಂಪೂರ್ಣ ಬಹಿಷ್ಕಾರ ಕೇಂದ್ರವು ತರಲಿರುವ ಮಸೂದೆಯ ಎರಡು ಮುಖ್ಯ ಅಂಶಗಳಾಗಿರುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು ಉಪಚುನಾವಣೆ ಪರಾಭವ: ಸಂಸ್ಥಾ ಕಾಂಗ್ರೆಸ್ ಎಂ.ಪಿ.ಗಳ ಕಳವಳ</strong></p>.<p><strong>ನವದೆಹಲಿ, ಮೇ 6–</strong> ಮೈಸೂರು ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರಾಭವಕ್ಕೆ ಕಾರಣ ಕುರಿತು ವಿವರ ತನಿಖೆ ನಡೆಸುವಂತೆ ಸಂಸ್ಥಾ ಕಾಂಗ್ರೆಸ್ ಸಂಸದೀಯ ಪಕ್ಷವು ಇಂದು ಕಾರ್ಯಕಾರಿ ಸಮಿತಿಯನ್ನು ಕೋರಿದೆ.</p>.<p>ಮೇ 23ರಂದು ಕಾರ್ಯಕಾರಿ ಸಮಿತಿಯು ಇಲ್ಲಿ ಸಭೆ ಸೇರಲಿರುವುದರಿಂದ ತನಿಖೆ ನಡೆಸಲು ಸಣ್ಣ ಸಮಿತಿಯೊಂದನ್ನು ರಚಿಸುವಂತೆ ಅಧ್ಯಕ್ಷ ಎಸ್. ನಿಜಲಿಂಗಪ್ಪನವರನ್ನು ಪ್ರಾರ್ಥಿಸುವ ಸಂಭವವಿದೆ. ಸಮಿತಿಯ ವರದಿಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪರಿಶೀಲಿಸಬಹುದು.</p>.<p><strong>ವಿದೇಶಿ ಹಣದ ಪ್ರಭಾವ ತಪ್ಪಿಸಲು ಶೀಘ್ರವೇ ಶಾಸನ</strong></p>.<p><strong>ನವದೆಹಲಿ, ಮೇ 6–</strong> ಭಾರತದಲ್ಲಿ ವಿದೇಶಿ ಹಣದ ಪ್ರಭಾವ ನಿರೋಧಿಸಲು ಮಸೂದೆಯೊಂದನ್ನು ಮಂಡಿಸಲು ಕೇಂದ್ರ ಸರ್ಕಾರ ಯೋಚಿಸಿದೆ.</p>.<p>ರಾಜಕೀಯ ಪಕ್ಷಗಳು ವಿದೇಶಿ ಹಣ ಪಡೆಯುವುದರ ಸಂಪೂರ್ಣ ನಿಷೇಧ ಮತ್ತು ಶಾಸಕರೂ ವಿದೇಶಿ ಹಣ ಪಡೆಯುವುದರ ಸಂಪೂರ್ಣ ಬಹಿಷ್ಕಾರ ಕೇಂದ್ರವು ತರಲಿರುವ ಮಸೂದೆಯ ಎರಡು ಮುಖ್ಯ ಅಂಶಗಳಾಗಿರುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>