ಕಾಸರಗೋಡು ಬಗ್ಗೆ ಎಸ್ಎನ್ಗೆ ಆಸಕ್ತಿ ಇಲ್ಲ?: ಕೇರಳ ಪತ್ರಿಕಾ ವರದಿಗಳ ಬಗ್ಗೆ ಕಳವಳ
ಕಾಸರಗೋಡು, ಜೂನ್ 4– ಕಾಸರಗೋಡನ್ನು ಮೈಸೂರಿಗೆ ಸೇರಿಸಬೇಕೆಂಬ ಕೇಳಿಕೆ ಬಗ್ಗೆ ತಮಗೆ ಆಸಕ್ತಿಯಿಲ್ಲವೆಂದು ಭಾರತ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪ ಮತ್ತು ಮೈಸೂರು ಪ್ರದೇಶ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಡಾ. ನಾಗಪ್ಪ ಆಳ್ವ ಅವರು ತಿಳಿಸಿದರೆಂದು ಕೇರಳದ ಸಂಸತ್ ಸದಸ್ಯ ಶ್ರೀ ಹಮೀದ್ ಆಲಿ ಶೆಮ್ನಾಡ್ ಅವರು ಹೇಳಿದ್ದಾರೆ.