ಆಗಸ್ಟ್ ತಿಂಗಳಿನಲ್ಲಿ ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆಯಾದ ಕೆಲ ದಿನಗಳಲ್ಲಿ ಶ್ರೀಮತಿ ಕೃಷ್ಣವೇಣಿ ಎಂಬುವರು ನಿಧನರಾದ ಸಂಬಂಧದಲ್ಲಿ, ಕಾಫಿ ಬೋರ್ಡಿನಲ್ಲಿ ಗುಮಾಸ್ತರಾಗಿರುವ ಅವರ ಪತಿ ಆರು ಪುಟಗಳ ಸುದೀರ್ಘ ಮನವಿಯನ್ನು ತಮಗೆ ಮತ್ತಿತರರಿಗೆ ಒಪ್ಪಿಸಿದುದಾಗಿಯೂ ಆ ಮನವಿಯಲ್ಲಿದ್ದ ಆಪಾದನೆಗಳು ತೀವ್ರತರವಾಗಿದ್ದವೆಂದೂ ತಿಳಿಸಿದರು.