ರೈತನ ಬಗ್ಗೆ ಬಾಯಿಮಾತಿನ ಅನುಕಂಪ ಬೇಡ: ಅಗತ್ಯಗಳಿಗೆ ಗಮನ ನೀಡಿ
ಬೆಂಗಳೂರು, ಮಾರ್ಚ್ 10– ರೈತನ ಬಗ್ಗೆ ಬಾಯಿಮಾತಿನ ಅನುಕಂಪ ತೋರದೆ ಅವನ ಅಗತ್ಯಗಳಿಗೆ ಮನಗೊಡಬೇಕೆಂದೂ ಬೆಳೆದ ಧಾನ್ಯದ ಧಾರಣಿವಾಸಿ ಸ್ಥಿಮಿತವಾಗಲು ಯತ್ನ ಅಗತ್ಯವೆಂದೂ ಇಂದು ವಿಧಾನಸಭೆಯಲ್ಲಿ ಕೃಷಿ, ಮೀನುಗಾರಿಕೆ, ಅರಣ್ಯ ಮತ್ತು ಪಶು ಸಂಗೋಪನಾ ಶಾಖೆ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅನೇಕ ಸದಸ್ಯರು ಒತ್ತಾಯ ಮಾಡಿದರು.