ಬೆಂಗಳೂರು, ಆ. 31– ಕನ್ನಡವೆಂದರೆ ಜನ ಮುಖವನ್ನು ಸೊಟ್ಟಗೆ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ ಆರಂಭವಾಗಿ ‘ಅಪ್ರಬುದ್ಧ ಕರ್ನಾಟಕವನ್ನು ಪ್ರಬುದ್ಧ ಕರ್ನಾಟಕ’ವನ್ನಾಗಿ ಮಾಡುವುದರಲ್ಲಿ ನೆರವಾದ ನುಡಿಯ ಸೌಂದರ್ಯಕ್ಕೆ ಅಂದವಾದ ಚೌಕಟ್ಟನ್ನು ಹಾಕಿದ್ದ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಸುವರ್ಣ ಮಹೋತ್ಸವದ ಉದ್ಘಾಟನೆ ಇಂದು ನಡೆಯಿತು.