<p><strong>ವ್ಯಾವಹಾರಿಕ ನಿರ್ಧಾರಕ್ಕೆ ಬ್ಯಾಂಕುಗಳ ಪಾಲಕರಿಗೆ ಸ್ವಾತಂತ್ರ್ಯ: ಇಂದಿರಾ</strong></p>.<p><strong>ನವದೆಹಲಿ, ಸೆ. 30–</strong> ಪೂರ್ಣ ದಕ್ಷತೆಯಿಂದ ಕಾರ್ಯನಿರ್ವಹಿಸಲು ಹಾಗೂ ವ್ಯಾವಹಾರಿಕ ತೀರ್ಮಾನಗಳನ್ನು ಕೈಗೊಳ್ಳಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ.</p>.<p>ರಾಜಕೀಯ ಕಾರಣಗಳಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಭರವಸೆ ನೀಡುವುದರಲ್ಲಿ ತಾವು ಹಿಂಜರಿಯುವುದಿಲ್ಲವೆಂದು ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ನುಡಿದರು.</p>.<p><strong>ನೆಲಸಮ ಯಂತ್ರಗಳ ಆಮದು ನಿಷೇಧಕ್ಕೆ ಬಿ.ಇ.ಎಂ.ಎಲ್. ಸಲಹೆ</strong></p>.<p><strong>ಬೆಂಗಳೂರು, ಸೆ. 30–</strong> ನೆಲಸಮ ಯಂತ್ರ ಮಾಡುವಂತಹ ಎಲ್ಲ ಪ್ರಮಾಣದ ಯಂತ್ರಗಳನ್ನೂ ತಯಾರಿಸುವ (ಬುಲ್ಡೋಜರ್ಗಳು) ಶಕ್ತಿ ಇಂದು ಭಾರತ್ ಅರ್ತ್ ಮೂವರ್ಸ್ ಸಂಸ್ಥೆಗೆ ಬಂದಿರುವುದರಿಂದ ಈ ಯಂತ್ರಗಳ ಆಮದನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಭಾರತ್ ಅರ್ತ್ ಮೂವರ್ಸ್ ಸಂಸ್ಥೆ ಆಡಳಿತ ಮಂಡಲಿಯ ಅಧ್ಯಕ್ಷ ಮೇ.ಜ. ಹರ್ಕಿರಾತ್ ಸಿಂಗ್ರವರು ಇಂದು ಇಲ್ಲಿ ತಿಳಿಸಿದರು.</p>.<p><strong>ಇಂದಿಗೂ ಶಿಕ್ಷಣದಲ್ಲಿ ಹೆಣ್ಣೇ ಹಿಂದು</strong></p>.<p><strong>ನವದೆಹಲಿ, ಸೆ. 30–</strong> ಶಿಕ್ಷಣ ಪಡೆಯುವುದರಲ್ಲಿ ಇಂದಿಗೂ ಹೆಣ್ಣು ಮಕ್ಕಳು ಗಂಡು ಹುಡುಗರಿಗಿಂತ ಬಹಳ ಹಿಂದುಳಿದಿದ್ದಾರೆ.</p>.<p>ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳುವವರ ಪೈಕಿ ಗಂಡು ಹುಡುಗರ ಸಂಖ್ಯೆ 100 ಇದ್ದರೆ ಹೆಣ್ಣುಮಕ್ಕಳ ಸಂಖ್ಯೆ ಕೇವಲ 14.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವ್ಯಾವಹಾರಿಕ ನಿರ್ಧಾರಕ್ಕೆ ಬ್ಯಾಂಕುಗಳ ಪಾಲಕರಿಗೆ ಸ್ವಾತಂತ್ರ್ಯ: ಇಂದಿರಾ</strong></p>.<p><strong>ನವದೆಹಲಿ, ಸೆ. 30–</strong> ಪೂರ್ಣ ದಕ್ಷತೆಯಿಂದ ಕಾರ್ಯನಿರ್ವಹಿಸಲು ಹಾಗೂ ವ್ಯಾವಹಾರಿಕ ತೀರ್ಮಾನಗಳನ್ನು ಕೈಗೊಳ್ಳಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ.</p>.<p>ರಾಜಕೀಯ ಕಾರಣಗಳಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಭರವಸೆ ನೀಡುವುದರಲ್ಲಿ ತಾವು ಹಿಂಜರಿಯುವುದಿಲ್ಲವೆಂದು ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ನುಡಿದರು.</p>.<p><strong>ನೆಲಸಮ ಯಂತ್ರಗಳ ಆಮದು ನಿಷೇಧಕ್ಕೆ ಬಿ.ಇ.ಎಂ.ಎಲ್. ಸಲಹೆ</strong></p>.<p><strong>ಬೆಂಗಳೂರು, ಸೆ. 30–</strong> ನೆಲಸಮ ಯಂತ್ರ ಮಾಡುವಂತಹ ಎಲ್ಲ ಪ್ರಮಾಣದ ಯಂತ್ರಗಳನ್ನೂ ತಯಾರಿಸುವ (ಬುಲ್ಡೋಜರ್ಗಳು) ಶಕ್ತಿ ಇಂದು ಭಾರತ್ ಅರ್ತ್ ಮೂವರ್ಸ್ ಸಂಸ್ಥೆಗೆ ಬಂದಿರುವುದರಿಂದ ಈ ಯಂತ್ರಗಳ ಆಮದನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಭಾರತ್ ಅರ್ತ್ ಮೂವರ್ಸ್ ಸಂಸ್ಥೆ ಆಡಳಿತ ಮಂಡಲಿಯ ಅಧ್ಯಕ್ಷ ಮೇ.ಜ. ಹರ್ಕಿರಾತ್ ಸಿಂಗ್ರವರು ಇಂದು ಇಲ್ಲಿ ತಿಳಿಸಿದರು.</p>.<p><strong>ಇಂದಿಗೂ ಶಿಕ್ಷಣದಲ್ಲಿ ಹೆಣ್ಣೇ ಹಿಂದು</strong></p>.<p><strong>ನವದೆಹಲಿ, ಸೆ. 30–</strong> ಶಿಕ್ಷಣ ಪಡೆಯುವುದರಲ್ಲಿ ಇಂದಿಗೂ ಹೆಣ್ಣು ಮಕ್ಕಳು ಗಂಡು ಹುಡುಗರಿಗಿಂತ ಬಹಳ ಹಿಂದುಳಿದಿದ್ದಾರೆ.</p>.<p>ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳುವವರ ಪೈಕಿ ಗಂಡು ಹುಡುಗರ ಸಂಖ್ಯೆ 100 ಇದ್ದರೆ ಹೆಣ್ಣುಮಕ್ಕಳ ಸಂಖ್ಯೆ ಕೇವಲ 14.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>