<p><strong>ಬ್ಯಾಂಕ್ ರಾಷ್ಟ್ರೀಕರಣ: ಕಾರ್ಯಕಾರಿ ಸಭೆಯಲ್ಲಿ ಉಗ್ರ ವಾದವಿವಾದ</strong></p>.<p><strong>ಬೆಂಗಳೂರು, ಜುಲೈ 10–</strong> ಸುಮಾರು 3 ಗಂಟೆಗಳ ಕಾಲ ಬಿರುಸಿನ ಚರ್ಚೆ ನಡೆದ ನಂತರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಕರಡು ನಿರ್ಣಯವನ್ನು ರೂಪಿಸುವ ಕಾರ್ಯವನ್ನು ಗೃಹ ಸಚಿವ ಶ್ರೀ ಚವ್ಹಾಣರಿಗೆ ವಹಿಸಿತು.</p>.<p>ಸಭೆ ಇಂದು ರಾತ್ರಿ 12.15ರವರೆಗೆ ಜರುಗಿತು.</p>.<p>ಭಾರಿ ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡಬೇಕೆಂಬ ಪ್ರಧಾನಿ ಅವರ ವಾದ ಹಾಗೂ ಬ್ಯಾಂಕುಗಳ ಮೇಲಿನ ಸಾಮಾಜಿಕ ಹತೋಟಿಯ ನೀತಿಯ ಕಾರ್ಯಾಚರಣೆಯ ಬಗ್ಗೆ ಅವರ ನಿರ್ದಿಷ್ಟ ಟೀಕೆಯ ಬಗ್ಗೆ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಮತ್ತು ಎಸ್.ಕೆ. ಪಾಟೀಲ್ ಅವರು ಪ್ರತಿಭಟಿಸಿದರು.</p>.<p>ಬ್ಯಾಂಕುಗಳ ಮೇಲೆ ಸಾಮಾಜಿಕ ಹತೋಟಿ ಕೇವಲ ಕಳೆದ ಫೆಬ್ರುವರಿಯಲ್ಲಿ ಮಾತ್ರ ಜಾರಿಗೆ ಬಂದಿತೆಂದೂ, ಈ ನೀತಿಯ ಬಗ್ಗೆ ಅಂತಿಮ ತೀರ್ಪು ಕೊಡುವ ಮುನ್ನ ಕನಿಷ್ಠ ಎರಡು ವರ್ಷಗಳ ಕಾಲ ಅದನ್ನು ಪ್ರಯೋಗಿಸಿ ನೋಡಬೇಕೆಂಬುದು ಕಾಂಗ್ರೆಸ್ಸಿನ ಅಂಗೀಕೃತ ನೀತಿಯೆಂದು ಇವರಿಬ್ಬರು ವಾದ ಮಾಡಿದರು.</p>.<p><strong>ಇಂದಿರಾಜಿಗೆ ಸುಸ್ವಾಗತ</strong></p>.<p><strong>ಬೆಂಗಳೂರು, ಜುಲೈ 10–</strong> ಇಂದು ಬೆಳಿಗ್ಗೆ ನಗರಕ್ಕಾಗಮಿಸಿದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ನಗರದ ನಾಗರಿಕರು ಹಾರ್ದಿಕ ಸುಸ್ವಾಗತವನ್ನು ಕೋರಿದರು.</p>.<p>ವಿಮಾನ ನಿಲ್ದಾಣದಿಂದ ಪ್ರಧಾನಿ ಅವರು ತಂಗಲಿರುವ ರಾಜಭವನದ ಮಾರ್ಗದುದ್ದಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದು ಶ್ರೀಮತಿ ಗಾಂಧಿ ಅವರಿಗೆ ಕೈಬೀಸಿ ಕರತಾಡನ ಮಾಡಿ ಸ್ವಾಗತಿಸಿದರು.</p>.<p>ನಿನ್ನೆ ನಗರಕ್ಕೆ ಆಗಮಿಸಬೇಕಾಗಿದ್ದ ಶ್ರೀಮತಿ ಗಾಂಧಿ ಅವರು ಅನಾರೋಗ್ಯದ ಕಾರಣ ಬಾರದೆ ಇಂದು ನಗರಕ್ಕಾಗಮಿಸಿದರು.</p>.<p><strong>ಕಾರ್ಮಿಕರಿಗೆ ಲಾಭದಲ್ಲಿ ಪಾಲು, ಭೂಸುಧಾರಣೆ ಅನುಷ್ಠಾನಕ್ಕೆ ಕರೆ</strong></p>.<p><strong>ಬೆಂಗಳೂರು, ಜುಲೈ 10–</strong> ಕೆಲಸಗಾರರಿಗೆ, ಕೈಗಾರಿಕಾ ಲಾಭಗಳಲ್ಲಿ ಪಾಲು ಕೊಡಲು ಮತ್ತು ಏಕಸ್ವಾಮ್ಯ ಸಂಸ್ಥೆಗಳ ಪ್ರಭಾವವನ್ನು ನಿಗ್ರಹಿಸಲು ಕೈಗಾರಿಕಾ ಲೈಸೆನ್ಸ್ ನೀಡಿಕೆ ನೀತಿಯಲ್ಲಿ ತೀವ್ರ ಬದಲಾವಣೆ ಮಾಡುವ ಬಗ್ಗೆಪರಿಶೀಲಿಸಬೇಕೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.</p>.<p>ಭಾರಿ ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ಸರ್ಕಾರಿ ಸಾಲಪತ್ರಗಳಲ್ಲಿ ಬ್ಯಾಂಕ್ ಹಣ ಹೂಡಿಕೆಗೆ ಸಂಬಂಧಿಸಿದ ಶಾಸನಬದ್ಧ ಮಿತಿಯನ್ನು ಹೆಚ್ಚಿಸುವ ವಿಷಯವನ್ನೂ ಸಹ ಪರಿಶೀಲಿಸಬೇಕೆಂದು ಅವರು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ಯಾಂಕ್ ರಾಷ್ಟ್ರೀಕರಣ: ಕಾರ್ಯಕಾರಿ ಸಭೆಯಲ್ಲಿ ಉಗ್ರ ವಾದವಿವಾದ</strong></p>.<p><strong>ಬೆಂಗಳೂರು, ಜುಲೈ 10–</strong> ಸುಮಾರು 3 ಗಂಟೆಗಳ ಕಾಲ ಬಿರುಸಿನ ಚರ್ಚೆ ನಡೆದ ನಂತರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಕರಡು ನಿರ್ಣಯವನ್ನು ರೂಪಿಸುವ ಕಾರ್ಯವನ್ನು ಗೃಹ ಸಚಿವ ಶ್ರೀ ಚವ್ಹಾಣರಿಗೆ ವಹಿಸಿತು.</p>.<p>ಸಭೆ ಇಂದು ರಾತ್ರಿ 12.15ರವರೆಗೆ ಜರುಗಿತು.</p>.<p>ಭಾರಿ ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡಬೇಕೆಂಬ ಪ್ರಧಾನಿ ಅವರ ವಾದ ಹಾಗೂ ಬ್ಯಾಂಕುಗಳ ಮೇಲಿನ ಸಾಮಾಜಿಕ ಹತೋಟಿಯ ನೀತಿಯ ಕಾರ್ಯಾಚರಣೆಯ ಬಗ್ಗೆ ಅವರ ನಿರ್ದಿಷ್ಟ ಟೀಕೆಯ ಬಗ್ಗೆ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಮತ್ತು ಎಸ್.ಕೆ. ಪಾಟೀಲ್ ಅವರು ಪ್ರತಿಭಟಿಸಿದರು.</p>.<p>ಬ್ಯಾಂಕುಗಳ ಮೇಲೆ ಸಾಮಾಜಿಕ ಹತೋಟಿ ಕೇವಲ ಕಳೆದ ಫೆಬ್ರುವರಿಯಲ್ಲಿ ಮಾತ್ರ ಜಾರಿಗೆ ಬಂದಿತೆಂದೂ, ಈ ನೀತಿಯ ಬಗ್ಗೆ ಅಂತಿಮ ತೀರ್ಪು ಕೊಡುವ ಮುನ್ನ ಕನಿಷ್ಠ ಎರಡು ವರ್ಷಗಳ ಕಾಲ ಅದನ್ನು ಪ್ರಯೋಗಿಸಿ ನೋಡಬೇಕೆಂಬುದು ಕಾಂಗ್ರೆಸ್ಸಿನ ಅಂಗೀಕೃತ ನೀತಿಯೆಂದು ಇವರಿಬ್ಬರು ವಾದ ಮಾಡಿದರು.</p>.<p><strong>ಇಂದಿರಾಜಿಗೆ ಸುಸ್ವಾಗತ</strong></p>.<p><strong>ಬೆಂಗಳೂರು, ಜುಲೈ 10–</strong> ಇಂದು ಬೆಳಿಗ್ಗೆ ನಗರಕ್ಕಾಗಮಿಸಿದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ನಗರದ ನಾಗರಿಕರು ಹಾರ್ದಿಕ ಸುಸ್ವಾಗತವನ್ನು ಕೋರಿದರು.</p>.<p>ವಿಮಾನ ನಿಲ್ದಾಣದಿಂದ ಪ್ರಧಾನಿ ಅವರು ತಂಗಲಿರುವ ರಾಜಭವನದ ಮಾರ್ಗದುದ್ದಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದು ಶ್ರೀಮತಿ ಗಾಂಧಿ ಅವರಿಗೆ ಕೈಬೀಸಿ ಕರತಾಡನ ಮಾಡಿ ಸ್ವಾಗತಿಸಿದರು.</p>.<p>ನಿನ್ನೆ ನಗರಕ್ಕೆ ಆಗಮಿಸಬೇಕಾಗಿದ್ದ ಶ್ರೀಮತಿ ಗಾಂಧಿ ಅವರು ಅನಾರೋಗ್ಯದ ಕಾರಣ ಬಾರದೆ ಇಂದು ನಗರಕ್ಕಾಗಮಿಸಿದರು.</p>.<p><strong>ಕಾರ್ಮಿಕರಿಗೆ ಲಾಭದಲ್ಲಿ ಪಾಲು, ಭೂಸುಧಾರಣೆ ಅನುಷ್ಠಾನಕ್ಕೆ ಕರೆ</strong></p>.<p><strong>ಬೆಂಗಳೂರು, ಜುಲೈ 10–</strong> ಕೆಲಸಗಾರರಿಗೆ, ಕೈಗಾರಿಕಾ ಲಾಭಗಳಲ್ಲಿ ಪಾಲು ಕೊಡಲು ಮತ್ತು ಏಕಸ್ವಾಮ್ಯ ಸಂಸ್ಥೆಗಳ ಪ್ರಭಾವವನ್ನು ನಿಗ್ರಹಿಸಲು ಕೈಗಾರಿಕಾ ಲೈಸೆನ್ಸ್ ನೀಡಿಕೆ ನೀತಿಯಲ್ಲಿ ತೀವ್ರ ಬದಲಾವಣೆ ಮಾಡುವ ಬಗ್ಗೆಪರಿಶೀಲಿಸಬೇಕೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.</p>.<p>ಭಾರಿ ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ಸರ್ಕಾರಿ ಸಾಲಪತ್ರಗಳಲ್ಲಿ ಬ್ಯಾಂಕ್ ಹಣ ಹೂಡಿಕೆಗೆ ಸಂಬಂಧಿಸಿದ ಶಾಸನಬದ್ಧ ಮಿತಿಯನ್ನು ಹೆಚ್ಚಿಸುವ ವಿಷಯವನ್ನೂ ಸಹ ಪರಿಶೀಲಿಸಬೇಕೆಂದು ಅವರು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>