<p><strong>ಹೊಸ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟದಲ್ಲಿ ಅಧಿಕ ಬೆಂಬಲ</strong></p>.<p><strong>ನವದೆಹಲಿ, ಫೆ. 11: </strong>ಬ್ಯಾಂಕ್ ರಾಷ್ಟ್ರೀಕರಣ ಶಾಸನವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿರುವುದರಿಂದ ಉದ್ಭವಿಸಿರುವ ಪರಿಸ್ಥಿತಿ ಕುರಿತು ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಸಂಪುಟದ ಹಿರಿಯ ಸದಸ್ಯರ ಜೊತೆ ಇಂದು ಸಂಜೆ 2 ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು.</p>.<p>ರಾಷ್ಟ್ರೀಕರಿಸಲಾಗಿದ್ದ ಹದಿನಾಲ್ಕು ಪ್ರಮುಖ ಬ್ಯಾಂಕುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಪರಿಶೀಲಿಸಲಾಯಿತು.</p>.<p>ವಿದೇಶಿ ಬ್ಯಾಂಕುಗಳನ್ನಾಗಲೀ ಹಳೆಯ ಶಾಸನದಲ್ಲಿ ಸೂಚಿತವಾದ ಹದಿನಾಲ್ಕಲ್ಲದೆ ಬೇರಾವ ಭಾರತೀಯ ಬ್ಯಾಂಕನ್ನಾಗಲೀ ರಾಷ್ಟ್ರೀಕರಿಸುವುದು ಅಸಂಭವವೆಂದು ಹೇಳಲಾಗಿದೆ.</p>.<p><strong>ಕೋರ್ಟ್ ತೀರ್ಪಿನ ವಿರುದ್ಧ ರಾಜಕೀಯ ಆಟ ಬೇಡ: ಮುರಾರಜಿ</strong></p>.<p><strong>ನವದೆಹಲಿ, ಫೆ. 11: </strong>ಬ್ಯಾಂಕ್ ರಾಷ್ಟ್ರೀಕರಣ ರದ್ದು ತೀರ್ಪನ್ನು ಕೇಂದ್ರ ಸರ್ಕಾರವು ವೈಯಕ್ತಿಕ ಮುಖಭಂಗ ಅಥವಾ ಪ್ರಗತಿಪರ ವಿಧೇಯಕವನ್ನು ತಡೆಗಟ್ಟುವ ಯತ್ನ ಎಂದು ಪರಿಗಣಿಸ<br />ಬಾರದೆಂದು ಪಾರ್ಲಿಮೆಂಟಿನಲ್ಲಿ ಕಾಂಗ್ರೆಸ್ ವಿರೋಧಿ ಪಕ್ಷದ ಅಧ್ಯಕ್ಷ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ಸಲಹೆ ನೀಡಿದರು.</p>.<p>ಮತ್ತೊಂದು ಬಾರಿ ತರಾತುರಿ ಕ್ರಮದ ವಿರುದ್ಧ ಎಚ್ಚರಿಕೆ ನೀಡಿದ ಮುರಾರಜಿ ಅವರು ‘ಕೋರ್ಟ್ ತೀರ್ಪಿನ ವಿರುದ್ಧ ಯಾವುದೇ ರೀತಿಯ ರಾಜಕೀಯ ನಾಟಕವಾಡುವುದು ಒಳ್ಳೆಯದೇನೂ ಅಲ್ಲ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟದಲ್ಲಿ ಅಧಿಕ ಬೆಂಬಲ</strong></p>.<p><strong>ನವದೆಹಲಿ, ಫೆ. 11: </strong>ಬ್ಯಾಂಕ್ ರಾಷ್ಟ್ರೀಕರಣ ಶಾಸನವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿರುವುದರಿಂದ ಉದ್ಭವಿಸಿರುವ ಪರಿಸ್ಥಿತಿ ಕುರಿತು ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಸಂಪುಟದ ಹಿರಿಯ ಸದಸ್ಯರ ಜೊತೆ ಇಂದು ಸಂಜೆ 2 ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು.</p>.<p>ರಾಷ್ಟ್ರೀಕರಿಸಲಾಗಿದ್ದ ಹದಿನಾಲ್ಕು ಪ್ರಮುಖ ಬ್ಯಾಂಕುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಪರಿಶೀಲಿಸಲಾಯಿತು.</p>.<p>ವಿದೇಶಿ ಬ್ಯಾಂಕುಗಳನ್ನಾಗಲೀ ಹಳೆಯ ಶಾಸನದಲ್ಲಿ ಸೂಚಿತವಾದ ಹದಿನಾಲ್ಕಲ್ಲದೆ ಬೇರಾವ ಭಾರತೀಯ ಬ್ಯಾಂಕನ್ನಾಗಲೀ ರಾಷ್ಟ್ರೀಕರಿಸುವುದು ಅಸಂಭವವೆಂದು ಹೇಳಲಾಗಿದೆ.</p>.<p><strong>ಕೋರ್ಟ್ ತೀರ್ಪಿನ ವಿರುದ್ಧ ರಾಜಕೀಯ ಆಟ ಬೇಡ: ಮುರಾರಜಿ</strong></p>.<p><strong>ನವದೆಹಲಿ, ಫೆ. 11: </strong>ಬ್ಯಾಂಕ್ ರಾಷ್ಟ್ರೀಕರಣ ರದ್ದು ತೀರ್ಪನ್ನು ಕೇಂದ್ರ ಸರ್ಕಾರವು ವೈಯಕ್ತಿಕ ಮುಖಭಂಗ ಅಥವಾ ಪ್ರಗತಿಪರ ವಿಧೇಯಕವನ್ನು ತಡೆಗಟ್ಟುವ ಯತ್ನ ಎಂದು ಪರಿಗಣಿಸ<br />ಬಾರದೆಂದು ಪಾರ್ಲಿಮೆಂಟಿನಲ್ಲಿ ಕಾಂಗ್ರೆಸ್ ವಿರೋಧಿ ಪಕ್ಷದ ಅಧ್ಯಕ್ಷ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ಸಲಹೆ ನೀಡಿದರು.</p>.<p>ಮತ್ತೊಂದು ಬಾರಿ ತರಾತುರಿ ಕ್ರಮದ ವಿರುದ್ಧ ಎಚ್ಚರಿಕೆ ನೀಡಿದ ಮುರಾರಜಿ ಅವರು ‘ಕೋರ್ಟ್ ತೀರ್ಪಿನ ವಿರುದ್ಧ ಯಾವುದೇ ರೀತಿಯ ರಾಜಕೀಯ ನಾಟಕವಾಡುವುದು ಒಳ್ಳೆಯದೇನೂ ಅಲ್ಲ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>