<p><strong>ಬೆಳಗಾವಿಯಲ್ಲಿ ಮರಾಠಿಗರ ಹಿಂಸಾಚಾರ: ಆದರೂ ಎಸ್ಸೆನ್ ಮತ್ತಿತರ ನಾಯಕರಿಗೆ ಭವ್ಯ ಸ್ವಾಗತ</strong></p>.<p><strong>ಬೆಳಗಾವಿ, ಫೆ. 14: </strong>ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ ಅವರ ವಿರುದ್ಧ ಇಂದು ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಕಪ್ಪುಧ್ವಜ ಪ್ರದರ್ಶನ ಹಿಂಸಾರೂಪ ತಳೆದಾಗ, ಕಲ್ಲೆಸೆತ ಮತ್ತು ಪೊಲೀಸರ ಲಾಠಿ ಪ್ರಹಾರದಿಂದ ಕೆಲವರು ಗಾಯಗೊಂಡರು.</p>.<p>ಈಚಿನ ದಶಕಗಳಲ್ಲಿ ಈ ಊರು ಕಂಡರಿಯದಂತಹ ಎರಡು ಮೈಲಿ ಉದ್ದದ ಭಾರಿ ಮೆರವಣಿಗೆ ಖಡೇಬಜಾರ ಮತ್ತು ರಾಮದೇವಗಲ್ಲಿ ಸಂಧಿಸುವ ಚೌಕದ ಮೂಲಕ ಹಾದು ಹೋಗುತ್ತಿದ್ದಾಗ, ಮೆರವಣಿಗೆಯ ಮೇಲೆ ಕಲ್ಲಿನ ಸುರಿಮಳೆಯಾಗಿ ಪ್ರದರ್ಶನಕಾರರನ್ನು ಚದುರಿಸಲು ಪೊಲೀಸರು ಹಲವು ಬಾರಿ ಲಾಠಿ ಪ್ರಹಾರ ಮಾಡಿದರು.</p>.<p>ಸಾರ್ವಜನಿಕರಲ್ಲಿ ನಾಲ್ಕು ಮಂದಿ, ಪೊಲೀಸರ ಪೈಕಿ 18 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.</p>.<p><strong>ಬಡತನವೇ ಭಾಗ್ಯ!</strong></p>.<p><strong>ಹರಿಹರ, ಫೆ. 14: </strong>ಆಡಳಿತ ಕಾಂಗ್ರೆಸ್ ಅಧ್ಯಕ್ಷ ಜಗಜೀವನರಾಂ ಅವರು ಇಂಗ್ಲಿಷ್ನಲ್ಲಿ ಪ್ರಥಮ ವಾಕ್ಯ ಮುಗಿಸಿ ಎಚ್. ಸಿದ್ಧವೀರಪ್ಪ ಅವರು ಅದರ ಕನ್ನಡ ಅನುವಾದ ಮುಗಿಸುತ್ತಿದ್ದಂತೆಯೇ ‘ಹಿಂದಿ ಹಿಂದಿ’ ಎಂಬ ಕೂಗುಗಳು ಕಿಕ್ಕಿರಿದ ಶೋಭಾ ಚಲನಚಿತ್ರ ಮಂದಿರದಲ್ಲಿ ಕೇಳಿಬಂದವು.</p>.<p>ಜಗಜೀವನರಾಂ ಅವರು ನಕ್ಕು, ಮೊದಲು ಹಿಂದಿ ಆನಂತರ ಇಂಗ್ಲಿಷ್ನಲ್ಲಿ ಭಾಷಣ ಮಾಡಿದರು.</p>.<p>ಆಗಾಗ್ಗೆ ಕರತಾಡನದ ಸ್ವಾಗತ ಪಡೆದ ರಾಂ ಅವರು ‘ನಮ್ಮದು ಬಡ ದೇಶ’ ಎಂದು ಆರಂಭಿಸಿದಾಗ ಭಾರಿ ಕರತಾಡನವಾಯಿತು.</p>.<p>‘ಬಡತನದಲ್ಲಿ ಸಂತೋಷದಿಂದ ಇರುವುದು ಒಂದು ಒಳ್ಳೆ ಗುಣ. ಇದನ್ನು ಹರಿಹರದಲ್ಲಿ ಬಹು ಪ್ರಮಾಣದಲ್ಲಿ ಕಾಣುತ್ತಿದ್ದೇನೆ’ ಎಂದು ಹೇಳಿದಾಗ ಕರತಾಡನ ಮತ್ತೂ ದೀರ್ಘವಾಗಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿಯಲ್ಲಿ ಮರಾಠಿಗರ ಹಿಂಸಾಚಾರ: ಆದರೂ ಎಸ್ಸೆನ್ ಮತ್ತಿತರ ನಾಯಕರಿಗೆ ಭವ್ಯ ಸ್ವಾಗತ</strong></p>.<p><strong>ಬೆಳಗಾವಿ, ಫೆ. 14: </strong>ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ ಅವರ ವಿರುದ್ಧ ಇಂದು ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಕಪ್ಪುಧ್ವಜ ಪ್ರದರ್ಶನ ಹಿಂಸಾರೂಪ ತಳೆದಾಗ, ಕಲ್ಲೆಸೆತ ಮತ್ತು ಪೊಲೀಸರ ಲಾಠಿ ಪ್ರಹಾರದಿಂದ ಕೆಲವರು ಗಾಯಗೊಂಡರು.</p>.<p>ಈಚಿನ ದಶಕಗಳಲ್ಲಿ ಈ ಊರು ಕಂಡರಿಯದಂತಹ ಎರಡು ಮೈಲಿ ಉದ್ದದ ಭಾರಿ ಮೆರವಣಿಗೆ ಖಡೇಬಜಾರ ಮತ್ತು ರಾಮದೇವಗಲ್ಲಿ ಸಂಧಿಸುವ ಚೌಕದ ಮೂಲಕ ಹಾದು ಹೋಗುತ್ತಿದ್ದಾಗ, ಮೆರವಣಿಗೆಯ ಮೇಲೆ ಕಲ್ಲಿನ ಸುರಿಮಳೆಯಾಗಿ ಪ್ರದರ್ಶನಕಾರರನ್ನು ಚದುರಿಸಲು ಪೊಲೀಸರು ಹಲವು ಬಾರಿ ಲಾಠಿ ಪ್ರಹಾರ ಮಾಡಿದರು.</p>.<p>ಸಾರ್ವಜನಿಕರಲ್ಲಿ ನಾಲ್ಕು ಮಂದಿ, ಪೊಲೀಸರ ಪೈಕಿ 18 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.</p>.<p><strong>ಬಡತನವೇ ಭಾಗ್ಯ!</strong></p>.<p><strong>ಹರಿಹರ, ಫೆ. 14: </strong>ಆಡಳಿತ ಕಾಂಗ್ರೆಸ್ ಅಧ್ಯಕ್ಷ ಜಗಜೀವನರಾಂ ಅವರು ಇಂಗ್ಲಿಷ್ನಲ್ಲಿ ಪ್ರಥಮ ವಾಕ್ಯ ಮುಗಿಸಿ ಎಚ್. ಸಿದ್ಧವೀರಪ್ಪ ಅವರು ಅದರ ಕನ್ನಡ ಅನುವಾದ ಮುಗಿಸುತ್ತಿದ್ದಂತೆಯೇ ‘ಹಿಂದಿ ಹಿಂದಿ’ ಎಂಬ ಕೂಗುಗಳು ಕಿಕ್ಕಿರಿದ ಶೋಭಾ ಚಲನಚಿತ್ರ ಮಂದಿರದಲ್ಲಿ ಕೇಳಿಬಂದವು.</p>.<p>ಜಗಜೀವನರಾಂ ಅವರು ನಕ್ಕು, ಮೊದಲು ಹಿಂದಿ ಆನಂತರ ಇಂಗ್ಲಿಷ್ನಲ್ಲಿ ಭಾಷಣ ಮಾಡಿದರು.</p>.<p>ಆಗಾಗ್ಗೆ ಕರತಾಡನದ ಸ್ವಾಗತ ಪಡೆದ ರಾಂ ಅವರು ‘ನಮ್ಮದು ಬಡ ದೇಶ’ ಎಂದು ಆರಂಭಿಸಿದಾಗ ಭಾರಿ ಕರತಾಡನವಾಯಿತು.</p>.<p>‘ಬಡತನದಲ್ಲಿ ಸಂತೋಷದಿಂದ ಇರುವುದು ಒಂದು ಒಳ್ಳೆ ಗುಣ. ಇದನ್ನು ಹರಿಹರದಲ್ಲಿ ಬಹು ಪ್ರಮಾಣದಲ್ಲಿ ಕಾಣುತ್ತಿದ್ದೇನೆ’ ಎಂದು ಹೇಳಿದಾಗ ಕರತಾಡನ ಮತ್ತೂ ದೀರ್ಘವಾಗಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>