ನವದೆಹಲಿ, ಆ. 19– ರಾಷ್ಟ್ರಪತಿ ಚುನಾವಣೆ ಸಂಬಂಧದಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿದುದಕ್ಕಾಗಿ ವಿವರಣೆ ಕೇಳಿ ಪ್ರಧಾನಿ ಇಂದಿರಾ ಗಾಂಧಿ ಮತ್ತಿತರ ಕೆಲವು ಪ್ರದೇಶ ಕಾಂಗ್ರೆಸ್ ನಾಯಕರು ಮತ್ತು ಕೇಂದ್ರ ಸಚಿವರಿಗೆ ನೀಡಿದ್ದ ‘ಷೋಕಾಸ್ ನೋಟಿಸ್’ಗಳನ್ನು ವಾಪಸು ಪಡೆಯಲು ಕಾಂಗ್ರೆಸ್ ಅಧ್ಯಕ್ಷರು ನಿರಾಕರಿಸಿದ್ದಾರೆ.