ರಾಜಸ್ಥಾನದ ಚಿತ್ತೋರ್ಗಡದಲ್ಲಿ ಟೂರ್ನಿ ನಡೆಯಿತು. ಇದು ಎರಡನೇ ಸಲ ನಾವು ಚಾಂಪಿಯನ್ ಆಗಿದ್ದೇವೆ. 2015ರಲ್ಲಿ ಮೊದಲ ಬಾರಿ ನಮ್ಮ ರಾಜ್ಯ ತಂಡ ಜಯಿಸಿತ್ತು. ಈ ಸಲ ನಮ್ಮ ತಂಡದಲ್ಲಿ ಹೊಸ ಆಟಗಾರರ ಜೊತೆಗೆ ಅನುಭವಿಗಳೂ ಇದ್ದರು. ಉದಯೋನ್ಮುಖರಾದ ಸಂಪ್ರೀತ್, ಸುನಿಲ್ ಮತ್ತು ಅನೂಷ್ ಚೆನ್ನಾಗಿ ಆಡಿದರು. ಅನುಭವಿಗಳಾದ ಕಾರ್ತಿಕ್, ರವಿ, ರೈಸನ್, ಹರಿಪ್ರಸಾದ್, ನಯನ್, ಗಣೇಶ್ ಮತ್ತು ನಕುಲ್ ಅವರ ಆಟವೂ ಉಪಯುಕ್ತವಾಗಿತ್ತು. ಫೈನಲ್ನಲ್ಲಿ ತಮಿಳುನಾಡು ತಂಡದ ವಿರುದ್ಧ ನಮ್ಮೆಲ್ಲರ ಸಂಘಟಿತ ಹೋರಾಟಕ್ಕೆ ಜಯ ಸಂದಿತು.