<p>ಹಾಸ್ಯದ ಹೆಸರಿನ ಕಾರ್ಯಕ್ರಮವೊಂದರಲ್ಲಿ ರಾಮಾಯಣ ಮತ್ತು ಮಹಾಭಾರತದ ಪಾತ್ರಗಳು ಮತ್ತು ದೇವತೆಗಳನ್ನು ವಿಡಂಬನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯೊಂದನ್ನು ಹೈಕೋರ್ಟ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದೆ. ‘ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳಬಹುದೆ? ಹಾಸ್ಯದ ಹೆಸರಲ್ಲಿ ಏನು ಬೇಕಾದರೂ ನಡೆಯಬಹುದೆ?’ ಎಂದು ಪ್ರಶ್ನಿಸಿದೆ.</p>.<p>ಹಾಸ್ಯದ ಹೆಸರಿನಲ್ಲಿ ಅಪಹಾಸ್ಯದಂತಾಗಿರುವ ರೀಲ್ಸ್ಗಳು ಯುವಜನರನ್ನು ಹೆಚ್ಚು ಸೆಳೆಯುತ್ತಿವೆ. ಅಂಥವನ್ನೇ ಮತ್ತೆ ಮತ್ತೆ ನೋಡುತ್ತ ಯುವಕ–ಯುವತಿಯರು ಅಮೂಲ್ಯವಾದ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಗುರು–ಹಿರಿಯರನ್ನು ಗೇಲಿ ಮಾಡುವುದು, ಶಿಕ್ಷಕರನ್ನು ಹೀಗಳೆಯುವುದು, ನಾಡಿನ ಕಲೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗೌರವಿಸುವವರನ್ನು ಅಪಹಾಸ್ಯಕ್ಕೆ ಈಡು ಮಾಡುವಂಥ ಅಸಂಬದ್ಧ ಹಾಸ್ಯಕ್ಕೆ ಒತ್ತು ನೀಡಿದ ರೀಲ್ಸ್ಗಳೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಣಸಿಗುತ್ತವೆ.</p>.<p>ದುರದೃಷ್ಟವಶಾತ್, ಅಂಥ ರೀಲ್ಸ್ ಸಿದ್ಧಪಡಿಸುವವರಿಗೆ ಹೆಸರು ಮತ್ತು ಹಣವೂ ದೊರೆಯುತ್ತಿದೆ. ಸಾಮಾಜಿಕ ಜಾಲತಾಣ ಅದಕ್ಕೆ ಸೂಕ್ತ ವೇದಿಕೆ ಒದಗಿಸುತ್ತಿದೆ. ಸ್ಟಾರ್ ನಟರು ಸಿನಿಮಾಗಳಲ್ಲಿ ಸಿಗರೇಟು, ಮದ್ಯದ ಬಾಟಲಿಗಳೊಂದಿಗೆ ರಾರಾಜಿಸುತ್ತಿರುವುದೂ ಯುವಜನ ದಾರಿತಪ್ಪಲು ಪ್ರೇರೇಪಿಸುತ್ತಿದೆ.</p>.<p>ಕಿರುತೆರೆ ಶೋಗಳಲ್ಲಿ ಪೌರಾಣಿಕ, ಐತಿಹಾಸಿಕ ಪಾತ್ರಗಳ ವಿಡಂಬನೆ ಒಂದೆಡೆಯಾದರೆ, ದ್ವಂದ್ವಾರ್ಥದ ಪದಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿರುವುದು ಅತಿಯಾಗಿದೆ. ದ್ವಂದ್ವಾರ್ಥದ ಪದಗಳ ಬಳಕೆ ಅನೇಕ ವರ್ಷಗಳ ಹಿಂದೆಯೇ ಕನ್ನಡ ಚಲನಚಿತ್ರಗಳಲ್ಲಿ ಶುರುವಾಗಿದೆ. ಎಂಬತ್ತು ತೊಂಬತ್ತರ ದಶಕದಲ್ಲಿ ಕಾಶೀನಾಥ್, ಜಗ್ಗೇಶ್ ಮತ್ತಿತರರು ಪ್ರಧಾನವಾಗಿ ನಟಿಸಿದ ಚಿತ್ರಗಳಲ್ಲಿ ಇಂಥ ಪದಗಳ ಬಳಕೆ ಆಗಿದ್ದರಿಂದ ಆರಂಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ದ್ವಂದ್ವಾರ್ಥ ಪದ ಬಳಕೆಯು ಎಲ್ಲೆ ಮೀರಿದೆ. ಅಸಾಂವಿಧಾನಿಕ ಪದಗಳನ್ನು ಎಗ್ಗಿಲ್ಲದೇ ಬಳಸುವ, ಕುಟುಂಬ ಸಮೇತ ಕುಳಿತು ನೋಡಲು ಅಸಹ್ಯ ಎನ್ನಿಸುವಂಥ ಸನ್ನಿವೇಶಗಳನ್ನು ಸೃಷ್ಟಿಸಿ, ಅವಾಚ್ಯ ಪದಗಳನ್ನು ಬಳಸಲಾಗುತ್ತಿದೆ. ಉತ್ತರ ಕರ್ನಾಟಕದ ಆಡುಭಾಷೆಯ ಶೈಲಿಯನ್ನು ಇದಕ್ಕೆ ಪ್ರಧಾನವಾಗಿ ಬಳಸಿ,‘ಇಡೀ ಉತ್ತರ ಕರ್ನಾಟಕ ಭಾಗದ ಜನರ ಅಭಿರುಚಿಯೇ ಸರಿಯಿಲ್ಲ, ಅಭಿರುಚಿಹೀನರು’ ಎಂಬ ಭಾವನೆ ಮೂಡುವಂತೆ ಮಾಡಲಾಗುತ್ತಿದೆ.</p>.<p>ಮದ್ಯಪಾನವನ್ನು ವೈಭವೀಕರಿಸುವ, ‘ಕುಡಿಯದವರು ಏನೇನೂ ಗೊತ್ತಿರದ ದಡ್ಡರು’ ಎಂದು ಬಿಂಬಿಸುವ ರೀಲ್ಸ್ಗಳೂ ರೂಪುಗೊಳ್ಳುತ್ತಿವೆ. ‘ಕುಡಿತದಿಂದ ಅನೇಕ ಲಾಭಗಳಿವೆ. ಧೈರ್ಯವನ್ನು ಕುಡಿತದಿಂದಲೇ ತಂದುಕೊಳ್ಳಬಹುದು’ ಎಂಬಂಥ ಅಸಂಬದ್ಧ ಸಲಹೆಗಳನ್ನು ರೀಲ್ಸ್ಗಳಲ್ಲಿ ಮಾತ್ರವಲ್ಲದೆ, ಕಿರುತೆರೆಯ ಕಾಮಿಡಿ ಕಾರ್ಯಕ್ರಮಗಳ ಮೂಲಕವೂ ಹರಿಬಿಡಲಾಗುತ್ತಿದೆ.</p>.<p>ಆ ಕ್ಷಣದ ಮನರಂಜನೆಗೂ, ಒಮ್ಮೆ ನಕ್ಕು ಸುಮ್ಮನಾಗಬಹುದಾದ ಕಾರ್ಯಕ್ರಮ ಮತ್ತು ರೀಲ್ಸ್ಗಳು ಉಂಟುಮಾಡಬಹುದಾದ ದುಷ್ಪರಿಣಾಮಗಳು ಎಂಥವು ಎಂಬ ಅರಿವು, ಅವುಗಳನ್ನು ಸಿದ್ಧಪಡಿಸುವವರಿಗೆ ಇಲ್ಲವೆಂದೇ ಕಾಣುತ್ತದೆ. ಸಾಮಾಜಿಕ ಜವಾಬ್ದಾರಿಯ ಕೊರತೆಯೂ ಅಂಥವರಲ್ಲಿ ಎದ್ದುಕಾಣುತ್ತಿದೆ. ಹೆಸರು, ಹಣ ಗಳಿಸುವ ಏಕೈಕ ಉದ್ದೇಶದೊಂದಿಗೆ ಸಿದ್ಧಗೊಂಡು, ಪ್ರಸಾರ ಆಗುತ್ತಿರುವ ಇಂಥ ಕಾರ್ಯಕ್ರಮಗಳು ಮತ್ತು ರೀಲ್ಸ್ಗಳು ಕೆಟ್ಟ ಅಭಿರುಚಿಯನ್ನು ಹುಟ್ಟುಹಾಕುತ್ತಿವೆ.</p>.<p>ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಮಾದಕ ದ್ರವ್ಯಗಳ ವ್ಯಸನವೂ ಒಂದು ಕಾರಣವಾಗುತ್ತಿರುವುದು ಸರ್ವವಿದಿತ. ಹಿಂದೆಂದೂ ಕಂಡು, ಕೇಳರಿಯದ ಅಪರಾಧಗಳಲ್ಲಿ ಯುವಜನರು ಭಾಗಿಯಾಗುತ್ತಿರುವುದು ಕಳವಳದ ಸಂಗತಿ.</p>.<p>‘ಕುಡಿಯಲು ಹಣ ಕೊಡಲಿಲ್ಲ’ ಎಂಬ ಕಾರಣಕ್ಕೆ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಮದ್ಯದ ಅಮಲಿನಲ್ಲಿದ್ದ ಎಂದು ವರದಿಯಾಗಿದೆ. ಗಾಂಜಾ ಮತ್ತಿತರ ಮಾದಕ ವಸ್ತುವಿನ ಚಟ ಅಂಟಿಸಿಕೊಂಡಿದ್ದ ಯುವಕನೊಬ್ಬ ಹಣ ನೀಡದ ತಂದೆಯನ್ನೇ ಕೊಲೆ ಮಾಡಿದ ಘಟನೆಯೂ ಉತ್ತರ ಭಾರತದಲ್ಲಿ ಕೆಲವು ತಿಂಗಳುಗಳ ಹಿಂದೆ ನಡೆದಿದೆ. ಯುವಜನರು ಸೇರಿದಂತೆ ವಯಸ್ಸಾದವರ ನಡುವೆ ನಡೆಯುವ ಸಣ್ಣಪುಟ್ಟ ಮನಸ್ತಾಪಗಳು, ಹೊಡೆದಾಟಗಳಿಗೆ ಮದ್ಯವೇ ಕಾರಣ. ಆದರೆ, ‘ಸರ್ವ ರೋಗಕ್ಕೆ ಸಾರಾಯಿ ಮದ್ದು’ ಎಂಬಂಥ ತಲೆಬುಡ ಇಲ್ಲದ ಸಲಹೆಗಳನ್ನು ರೀಲ್ಸ್ ಮೂಲಕ ನೀಡುತ್ತಿರು<br />ವವರ ಸಂಖ್ಯೆ ಹೆಚ್ಚುತ್ತಿದೆ.</p>.<p>ಯುವಜನರನ್ನು ಸುಲಭಕ್ಕೆ ಸೆಳೆಯುವ ತಂತ್ರಗಾರಿಕೆಯಲ್ಲಿ ಗಿಮಿಕ್ಗಳಿಗೆ ಮೊದಲ ಸ್ಥಾನ. ನಂತರದ ಸ್ಥಾನವು ಹೆಂಡತಿಯನ್ನು ಹೀಗಳೆಯುವಂಥ ರೀಲ್ಸ್ಗಳಿಗೆ ಸಲ್ಲುತ್ತದೆ. ಹಾಸ್ಯದ ಹೆಸರಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಂತೂ ಅಕ್ರಮ ಸಂಬಂಧವನ್ನು ಎಗ್ಗಿಲ್ಲದೆ ಪೋಷಿಸಲಾಗುತ್ತಿದೆ. ಪಕ್ಕದ ಮನೆಯಾಕೆಯ ಮೇಲೆ ಕಣ್ಣು ಹಾಕುವಂಥ ಸಂಭಾಷಣೆಯನ್ನು ಅಲ್ಲಿನ ಕಪೋಲಕಲ್ಪಿತ ಪಾತ್ರಗಳು ಯಾವುದೇ ಸಂಕೋಚ ಇಲ್ಲದೆಯೇ ಬಳಸುತ್ತವೆ. ಕಾರ್ಯಕ್ರಮಗಳ ನಿರ್ಣಾಯಕರ ಸ್ಥಾನದಲ್ಲಿರುವ ಅನೇಕ ಸೆಲೆಬ್ರಿಟಿ ಮಹಿಳೆಯರು ಅಂಥವನ್ನು ವಿರೋಧಿಸದೆ, ಬಿದ್ದುಬಿದ್ದು ನಗುವುದು ಕಾರ್ಯಕ್ರಮ ವೀಕ್ಷಿಸುವ ಮಹಿಳಾ ಪ್ರೇಕ್ಷಕರಲ್ಲಿ ಇರುಸುಮುರುಸು ತರುತ್ತದೆ.</p>.<p>ಬಹುತೇಕ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದವರು ಮದ್ಯದ ಅಮಲಿನಲ್ಲಿದ್ದು, ಅಮಾನವೀಯವಾಗಿ ಹಲ್ಲೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಪರಾಧಕ್ಕೆ ಕುಮ್ಮಕ್ಕು ನೀಡುವ ಮದ್ಯ ಮತ್ತಿತರ ಮಾದಕ ವಸ್ತುಗಳನ್ನು ಸೇವಿಸುವಂತೆ ಪ್ರೇರೇಪಿಸುವ ಯಾವುದೇ ರೀಲ್ಸ್ಗಳನ್ನು ನಿರ್ಬಂಧಿಸುವಲ್ಲಿ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗುವುದು ಸದ್ಯದ ಅವಶ್ಯಕತೆಗಳಲ್ಲಿ ಒಂದಾಗಿದೆ ಮತ್ತು ತುರ್ತೂ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸ್ಯದ ಹೆಸರಿನ ಕಾರ್ಯಕ್ರಮವೊಂದರಲ್ಲಿ ರಾಮಾಯಣ ಮತ್ತು ಮಹಾಭಾರತದ ಪಾತ್ರಗಳು ಮತ್ತು ದೇವತೆಗಳನ್ನು ವಿಡಂಬನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯೊಂದನ್ನು ಹೈಕೋರ್ಟ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದೆ. ‘ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳಬಹುದೆ? ಹಾಸ್ಯದ ಹೆಸರಲ್ಲಿ ಏನು ಬೇಕಾದರೂ ನಡೆಯಬಹುದೆ?’ ಎಂದು ಪ್ರಶ್ನಿಸಿದೆ.</p>.<p>ಹಾಸ್ಯದ ಹೆಸರಿನಲ್ಲಿ ಅಪಹಾಸ್ಯದಂತಾಗಿರುವ ರೀಲ್ಸ್ಗಳು ಯುವಜನರನ್ನು ಹೆಚ್ಚು ಸೆಳೆಯುತ್ತಿವೆ. ಅಂಥವನ್ನೇ ಮತ್ತೆ ಮತ್ತೆ ನೋಡುತ್ತ ಯುವಕ–ಯುವತಿಯರು ಅಮೂಲ್ಯವಾದ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಗುರು–ಹಿರಿಯರನ್ನು ಗೇಲಿ ಮಾಡುವುದು, ಶಿಕ್ಷಕರನ್ನು ಹೀಗಳೆಯುವುದು, ನಾಡಿನ ಕಲೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗೌರವಿಸುವವರನ್ನು ಅಪಹಾಸ್ಯಕ್ಕೆ ಈಡು ಮಾಡುವಂಥ ಅಸಂಬದ್ಧ ಹಾಸ್ಯಕ್ಕೆ ಒತ್ತು ನೀಡಿದ ರೀಲ್ಸ್ಗಳೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಣಸಿಗುತ್ತವೆ.</p>.<p>ದುರದೃಷ್ಟವಶಾತ್, ಅಂಥ ರೀಲ್ಸ್ ಸಿದ್ಧಪಡಿಸುವವರಿಗೆ ಹೆಸರು ಮತ್ತು ಹಣವೂ ದೊರೆಯುತ್ತಿದೆ. ಸಾಮಾಜಿಕ ಜಾಲತಾಣ ಅದಕ್ಕೆ ಸೂಕ್ತ ವೇದಿಕೆ ಒದಗಿಸುತ್ತಿದೆ. ಸ್ಟಾರ್ ನಟರು ಸಿನಿಮಾಗಳಲ್ಲಿ ಸಿಗರೇಟು, ಮದ್ಯದ ಬಾಟಲಿಗಳೊಂದಿಗೆ ರಾರಾಜಿಸುತ್ತಿರುವುದೂ ಯುವಜನ ದಾರಿತಪ್ಪಲು ಪ್ರೇರೇಪಿಸುತ್ತಿದೆ.</p>.<p>ಕಿರುತೆರೆ ಶೋಗಳಲ್ಲಿ ಪೌರಾಣಿಕ, ಐತಿಹಾಸಿಕ ಪಾತ್ರಗಳ ವಿಡಂಬನೆ ಒಂದೆಡೆಯಾದರೆ, ದ್ವಂದ್ವಾರ್ಥದ ಪದಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿರುವುದು ಅತಿಯಾಗಿದೆ. ದ್ವಂದ್ವಾರ್ಥದ ಪದಗಳ ಬಳಕೆ ಅನೇಕ ವರ್ಷಗಳ ಹಿಂದೆಯೇ ಕನ್ನಡ ಚಲನಚಿತ್ರಗಳಲ್ಲಿ ಶುರುವಾಗಿದೆ. ಎಂಬತ್ತು ತೊಂಬತ್ತರ ದಶಕದಲ್ಲಿ ಕಾಶೀನಾಥ್, ಜಗ್ಗೇಶ್ ಮತ್ತಿತರರು ಪ್ರಧಾನವಾಗಿ ನಟಿಸಿದ ಚಿತ್ರಗಳಲ್ಲಿ ಇಂಥ ಪದಗಳ ಬಳಕೆ ಆಗಿದ್ದರಿಂದ ಆರಂಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ದ್ವಂದ್ವಾರ್ಥ ಪದ ಬಳಕೆಯು ಎಲ್ಲೆ ಮೀರಿದೆ. ಅಸಾಂವಿಧಾನಿಕ ಪದಗಳನ್ನು ಎಗ್ಗಿಲ್ಲದೇ ಬಳಸುವ, ಕುಟುಂಬ ಸಮೇತ ಕುಳಿತು ನೋಡಲು ಅಸಹ್ಯ ಎನ್ನಿಸುವಂಥ ಸನ್ನಿವೇಶಗಳನ್ನು ಸೃಷ್ಟಿಸಿ, ಅವಾಚ್ಯ ಪದಗಳನ್ನು ಬಳಸಲಾಗುತ್ತಿದೆ. ಉತ್ತರ ಕರ್ನಾಟಕದ ಆಡುಭಾಷೆಯ ಶೈಲಿಯನ್ನು ಇದಕ್ಕೆ ಪ್ರಧಾನವಾಗಿ ಬಳಸಿ,‘ಇಡೀ ಉತ್ತರ ಕರ್ನಾಟಕ ಭಾಗದ ಜನರ ಅಭಿರುಚಿಯೇ ಸರಿಯಿಲ್ಲ, ಅಭಿರುಚಿಹೀನರು’ ಎಂಬ ಭಾವನೆ ಮೂಡುವಂತೆ ಮಾಡಲಾಗುತ್ತಿದೆ.</p>.<p>ಮದ್ಯಪಾನವನ್ನು ವೈಭವೀಕರಿಸುವ, ‘ಕುಡಿಯದವರು ಏನೇನೂ ಗೊತ್ತಿರದ ದಡ್ಡರು’ ಎಂದು ಬಿಂಬಿಸುವ ರೀಲ್ಸ್ಗಳೂ ರೂಪುಗೊಳ್ಳುತ್ತಿವೆ. ‘ಕುಡಿತದಿಂದ ಅನೇಕ ಲಾಭಗಳಿವೆ. ಧೈರ್ಯವನ್ನು ಕುಡಿತದಿಂದಲೇ ತಂದುಕೊಳ್ಳಬಹುದು’ ಎಂಬಂಥ ಅಸಂಬದ್ಧ ಸಲಹೆಗಳನ್ನು ರೀಲ್ಸ್ಗಳಲ್ಲಿ ಮಾತ್ರವಲ್ಲದೆ, ಕಿರುತೆರೆಯ ಕಾಮಿಡಿ ಕಾರ್ಯಕ್ರಮಗಳ ಮೂಲಕವೂ ಹರಿಬಿಡಲಾಗುತ್ತಿದೆ.</p>.<p>ಆ ಕ್ಷಣದ ಮನರಂಜನೆಗೂ, ಒಮ್ಮೆ ನಕ್ಕು ಸುಮ್ಮನಾಗಬಹುದಾದ ಕಾರ್ಯಕ್ರಮ ಮತ್ತು ರೀಲ್ಸ್ಗಳು ಉಂಟುಮಾಡಬಹುದಾದ ದುಷ್ಪರಿಣಾಮಗಳು ಎಂಥವು ಎಂಬ ಅರಿವು, ಅವುಗಳನ್ನು ಸಿದ್ಧಪಡಿಸುವವರಿಗೆ ಇಲ್ಲವೆಂದೇ ಕಾಣುತ್ತದೆ. ಸಾಮಾಜಿಕ ಜವಾಬ್ದಾರಿಯ ಕೊರತೆಯೂ ಅಂಥವರಲ್ಲಿ ಎದ್ದುಕಾಣುತ್ತಿದೆ. ಹೆಸರು, ಹಣ ಗಳಿಸುವ ಏಕೈಕ ಉದ್ದೇಶದೊಂದಿಗೆ ಸಿದ್ಧಗೊಂಡು, ಪ್ರಸಾರ ಆಗುತ್ತಿರುವ ಇಂಥ ಕಾರ್ಯಕ್ರಮಗಳು ಮತ್ತು ರೀಲ್ಸ್ಗಳು ಕೆಟ್ಟ ಅಭಿರುಚಿಯನ್ನು ಹುಟ್ಟುಹಾಕುತ್ತಿವೆ.</p>.<p>ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಮಾದಕ ದ್ರವ್ಯಗಳ ವ್ಯಸನವೂ ಒಂದು ಕಾರಣವಾಗುತ್ತಿರುವುದು ಸರ್ವವಿದಿತ. ಹಿಂದೆಂದೂ ಕಂಡು, ಕೇಳರಿಯದ ಅಪರಾಧಗಳಲ್ಲಿ ಯುವಜನರು ಭಾಗಿಯಾಗುತ್ತಿರುವುದು ಕಳವಳದ ಸಂಗತಿ.</p>.<p>‘ಕುಡಿಯಲು ಹಣ ಕೊಡಲಿಲ್ಲ’ ಎಂಬ ಕಾರಣಕ್ಕೆ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಮದ್ಯದ ಅಮಲಿನಲ್ಲಿದ್ದ ಎಂದು ವರದಿಯಾಗಿದೆ. ಗಾಂಜಾ ಮತ್ತಿತರ ಮಾದಕ ವಸ್ತುವಿನ ಚಟ ಅಂಟಿಸಿಕೊಂಡಿದ್ದ ಯುವಕನೊಬ್ಬ ಹಣ ನೀಡದ ತಂದೆಯನ್ನೇ ಕೊಲೆ ಮಾಡಿದ ಘಟನೆಯೂ ಉತ್ತರ ಭಾರತದಲ್ಲಿ ಕೆಲವು ತಿಂಗಳುಗಳ ಹಿಂದೆ ನಡೆದಿದೆ. ಯುವಜನರು ಸೇರಿದಂತೆ ವಯಸ್ಸಾದವರ ನಡುವೆ ನಡೆಯುವ ಸಣ್ಣಪುಟ್ಟ ಮನಸ್ತಾಪಗಳು, ಹೊಡೆದಾಟಗಳಿಗೆ ಮದ್ಯವೇ ಕಾರಣ. ಆದರೆ, ‘ಸರ್ವ ರೋಗಕ್ಕೆ ಸಾರಾಯಿ ಮದ್ದು’ ಎಂಬಂಥ ತಲೆಬುಡ ಇಲ್ಲದ ಸಲಹೆಗಳನ್ನು ರೀಲ್ಸ್ ಮೂಲಕ ನೀಡುತ್ತಿರು<br />ವವರ ಸಂಖ್ಯೆ ಹೆಚ್ಚುತ್ತಿದೆ.</p>.<p>ಯುವಜನರನ್ನು ಸುಲಭಕ್ಕೆ ಸೆಳೆಯುವ ತಂತ್ರಗಾರಿಕೆಯಲ್ಲಿ ಗಿಮಿಕ್ಗಳಿಗೆ ಮೊದಲ ಸ್ಥಾನ. ನಂತರದ ಸ್ಥಾನವು ಹೆಂಡತಿಯನ್ನು ಹೀಗಳೆಯುವಂಥ ರೀಲ್ಸ್ಗಳಿಗೆ ಸಲ್ಲುತ್ತದೆ. ಹಾಸ್ಯದ ಹೆಸರಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಂತೂ ಅಕ್ರಮ ಸಂಬಂಧವನ್ನು ಎಗ್ಗಿಲ್ಲದೆ ಪೋಷಿಸಲಾಗುತ್ತಿದೆ. ಪಕ್ಕದ ಮನೆಯಾಕೆಯ ಮೇಲೆ ಕಣ್ಣು ಹಾಕುವಂಥ ಸಂಭಾಷಣೆಯನ್ನು ಅಲ್ಲಿನ ಕಪೋಲಕಲ್ಪಿತ ಪಾತ್ರಗಳು ಯಾವುದೇ ಸಂಕೋಚ ಇಲ್ಲದೆಯೇ ಬಳಸುತ್ತವೆ. ಕಾರ್ಯಕ್ರಮಗಳ ನಿರ್ಣಾಯಕರ ಸ್ಥಾನದಲ್ಲಿರುವ ಅನೇಕ ಸೆಲೆಬ್ರಿಟಿ ಮಹಿಳೆಯರು ಅಂಥವನ್ನು ವಿರೋಧಿಸದೆ, ಬಿದ್ದುಬಿದ್ದು ನಗುವುದು ಕಾರ್ಯಕ್ರಮ ವೀಕ್ಷಿಸುವ ಮಹಿಳಾ ಪ್ರೇಕ್ಷಕರಲ್ಲಿ ಇರುಸುಮುರುಸು ತರುತ್ತದೆ.</p>.<p>ಬಹುತೇಕ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದವರು ಮದ್ಯದ ಅಮಲಿನಲ್ಲಿದ್ದು, ಅಮಾನವೀಯವಾಗಿ ಹಲ್ಲೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಪರಾಧಕ್ಕೆ ಕುಮ್ಮಕ್ಕು ನೀಡುವ ಮದ್ಯ ಮತ್ತಿತರ ಮಾದಕ ವಸ್ತುಗಳನ್ನು ಸೇವಿಸುವಂತೆ ಪ್ರೇರೇಪಿಸುವ ಯಾವುದೇ ರೀಲ್ಸ್ಗಳನ್ನು ನಿರ್ಬಂಧಿಸುವಲ್ಲಿ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗುವುದು ಸದ್ಯದ ಅವಶ್ಯಕತೆಗಳಲ್ಲಿ ಒಂದಾಗಿದೆ ಮತ್ತು ತುರ್ತೂ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>