ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಜಗತ್ತು ಬೆಸೆಯುವ ಸಾಧನ

Last Updated 15 ನವೆಂಬರ್ 2022, 20:15 IST
ಅಕ್ಷರ ಗಾತ್ರ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವು ವಾರ್ಷಿಕ ಆಚರಣೆಯಾಗಿದ್ದು, ಗ್ರಂಥಾಲಯಗಳ ಅಮೂಲ್ಯವಾದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಕಾಲ, ಭೌಗೋಳಿಕ ಅಂತರದಂತಹ ಎಲ್ಲಾ ಮಿತಿಗಳನ್ನು ಭೇದಿಸುವ ಇ- ಗ್ರಂಥಾಲಯಗಳು, ನಿಜವಾದ ಅರ್ಥದಲ್ಲಿ ಇಡೀ ಜಗತ್ತೇ ಒಂದು ಪುಟ್ಟ ಹಳ್ಳಿ ಎಂಬಂತೆ ನೇರ ಸಂಪರ್ಕಕ್ಕೆ ಅವಕಾಶ ಕಲ್ಪಿಸುತ್ತವೆ.

ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಗ್ರಂಥಾಲಯದ ಜೊತೆಗೆ ಅಂತರ್ಜಾಲ ಸೌಲಭ್ಯವನ್ನು ಒದಗಿಸುವುದು ಅತ್ಯಂತ ಜರೂರಿನ ಕರ್ತವ್ಯವಾಗಿದೆ. ಜನರಿಗೆ ಬೇಕಾದ ಮಾಹಿತಿ ಅವರವರ ಭಾಷೆಯಲ್ಲಿ ಸಿಗುವಂತೆ ಆಗಬೇಕು.

ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಅವರು ಹಾಕಿಕೊಟ್ಟ ಪಂಚ ಸೂತ್ರಗಳು ಗ್ರಂಥಾಲಯ ಸೇವೆಗೆ ಆಧಾರಸ್ತಂಭಗಳಾಗಿವೆ. ಅವುಗಳೆಂದರೆ: 1. ಗ್ರಂಥಗಳು ಉಪಯೋಗಕ್ಕಾಗಿ ಇವೆ. 2. ಪ್ರತಿಯೊಬ್ಬ ಓದುಗನಿಗೊಂದು ಗ್ರಂಥ. 3. ಪ್ರತೀ ಗ್ರಂಥಕ್ಕೊಬ್ಬ ಓದುಗ. 4. ಓದುಗನ ಸಮಯ ಉಳಿಸಿ. 5. ಗ್ರಂಥಾಲಯ ಸದಾ ಬೆಳೆವ ಶಿಶು.

ಇಂದಿನ ಗ್ರಂಥಪಾಲಕ ಬರೀ ಗ್ರಂಥರಕ್ಷಕನಾಗಿರದೆ ಉತ್ತಮ ಗ್ರಂಥಗಳ ಕ್ರೋಡೀಕರಣಕ್ಕಾಗಿ, ಅವುಗಳ ಉಪಯೋಗಕ್ಕಾಗಿ, ಓದುಗರ ಜ್ಞಾನದಾಹ ತಣಿಸುವುದಕ್ಕಾಗಿ ಹತ್ತು ಹಲವಾರು ಯೋಜನೆಗಳನ್ನು ಒಳಗೊಂಡ ಮಾಹಿತಿ ವಿಜ್ಞಾನಿಯಾಗಿದ್ದಾನೆ.
–ಡಾ. ಎಂ.ಕೃಷ್ಣಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT