ತುಮಕೂರಿನಲ್ಲಿ ಘರ್ಷಣೆ: ಕಲ್ಲೆಸೆತ, ಚಪ್ಪರಕ್ಕೆ ಬೆಂಕಿ, ಐದು ಮಂದಿಗೆ ಗಾಯ
ತುಮಕೂರು, ಮಾರ್ಚ್ 5– ಇಂದು ಇಲ್ಲಿಯ ಮತದಾನ ಕೇಂದ್ರವೊಂದರ ಬಳಿ ಜನ ಸಂಘ ಮತ್ತು ಆಡಳಿತ ಕಾಂಗ್ರೆಸ್ ಬೆಂಬಲಿಗರ ನಡುವೆ ತೀವ್ರ ಘರ್ಷಣೆಯಾಗಿ ಕಲ್ಲು ತೂರಾಟದಲ್ಲಿ ಕನಿಷ್ಠ 5 ಮಂದಿ ಗಾಯಗೊಂಡಿದ್ದಾರೆ.
ಬೆಳಿಗ್ಗೆ 11 ಗಂಟೆ ವೇಳೆಗೆ ಲೋಕೋಪಯೋಗಿ ಇಲಾಖೆ ಕಚೇರಿಗಳ ಬಳಿ ದೊಡ್ಡ ಗುಂಪೊಂದು ಬಿ.ಎಚ್.ರಸ್ತೆಯಲ್ಲಿ ಹುಲ್ಲಿನ ಮೇಲ್ಚಾವಣಿಯಲ್ಲಿದ್ದ ಹೋಟೆಲೊಂದಕ್ಕೆ ಬೆಂಕಿ ಹಚ್ಚಿತು.
ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಮಂದಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆಂದು ತಿಳಿದು ಬಂದಿದೆ.