<p><strong>ವೇತನ ಮಂಡಲಿ ಶಿಫಾರಸು ಬರುವ ತನಕ ಕೈಗಾರಿಕೆಗಳಲ್ಲಿ ವೇತನ ಸ್ತಂಭನಕ್ಕೆ ಸಲಹೆ<br /> ನವದೆಹಲಿ, ಏ. 19– </strong>ಕೈಗಾರಿಕೆಗಳ ವೇತನ ಮಂಡಲಿಯ ಶಿಫಾರಸುಗಳ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಕೈಗಾರಿಕೆಯಲ್ಲಿ ವೇತನ ಸ್ಥಗಿತಗೊಳಿಸಬೇಕೆಂಬ ಮಹತ್ವದ ವಿಷಯವನ್ನು ಈ ವಾರಾಂತ್ಯದಲ್ಲಿ ಇಲ್ಲಿ ಸೇರಲಿರುವ ತ್ರಿಪಕ್ಷೀಯ ಕಾರ್ಮಿಕ ಸಮ್ಮೇಳನ ಪರಿಶೀಲಿಸುವುದು.</p>.<p><strong>ಶಾಸಕರಿಗೇ ‘ಕಾಂಗ್ರೆಸ್ಸು’<br /> ಮುಂಬೈ, ಏ. 19–</strong> ಮಹಾರಾಷ್ಟ್ರ ಸರಕಾರದ ವಿಧಾನಮಂಡಲದ ಕಚೇರಿಯು ಕೆಲವು ಮಂದಿ ಸದಸ್ಯರಿಗೆ ಅವರಿಗೆ ಕೊಡಬೇಕಾದ ಹಣದ ಬಗ್ಗೆ ನೀಡಿದ ಕೆಲವು ಚೆಕ್ಕುಗಳನ್ನು, ಸರಕಾರದ ಲೆಕ್ಕದಲ್ಲಿ ಹಣವಿಲ್ಲದ ಕಾರಣ, ರಿಜರ್ವ್ ಬ್ಯಾಂಕ್ ತಿರಸ್ಕರಿಸಿತು.</p>.<p>ಕಾಂಗ್ರೆಸ್ ಪಕ್ಷದ ವಿಧಾನಸಭಾ ಸದಸ್ಯ ಶ್ರೀ ಪಿ.ಎಚ್. ವೋರಾ ಅವರಿಗೆ ಈ ತಿಂಗಳು 13 ರಂದು ನೀಡಿದ್ದ 200 ರೂಪಾಯಿಗಳ ಮೌಲ್ಯದ ಚೆಕ್ಕೂ ತಿರಸ್ಕೃತವಾದವುಗಳಲ್ಲೊಂದು.</p>.<p><strong>ಗೊಬ್ಬರ ಹಾಗೂ ತೈಲ ಕುರಿತ ಸರ್ಕಾರದ ನೀತಿ ಬಗ್ಗೆ ಉಗ್ರ ಟೀಕೆ<br /> ನವದೆಹಲಿ, ಏ. 19– </strong>ರಾಸಾಯನಿಕ ಗೊಬ್ಬರ ಉತ್ಪಾದನಾ ಗುರಿಯನ್ನು ಪೂರ್ಣ ಮಾಡುವುದರಲ್ಲಿ ಸರಕಾರ ವಿಫಲವಾಗಿದೆ ಎಂದು ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಟೀಕಿಸಿದರು.</p>.<p><strong>ಸರ್ಕಾರಿ ಉದ್ಯಮಗಳಲ್ಲಿ ಕಾರ್ಮಿಕ ಮಂಡಲಿ ರಚಿಸಲು ಸೂಚನೆ<br /> ನವದೆಹಲಿ, ಏ. 19–</strong> ಕಾರ್ಮಿಕ ಸಂಘಗಳನ್ನು ಬದಿಗೊತ್ತಿ, ಕಾರ್ಮಿಕರಿಂದಲೇ ಚುನಾಯಿತ ಕಾರ್ಮಿಕ ಮಂಡಲಿಯೊಂದನ್ನು ರಚಿಸಬೇಕೆಂಬ ಸೂಚನೆಯನ್ನು ಕೇಂದ್ರ ಕಾರ್ಮಿಕ ಸಚಿವ ಶ್ರೀ ಜೆ.ಎಲ್. ಹಾಥಿ ಅವರು ಸರ್ಕಾರಿ ಕ್ಷೇತ್ರದ ಉದ್ಯಮಗಳ ಪದಾಧಿಕಾರಿಗಳ ಸಮ್ಮೇಳನದಲ್ಲಿ ಇಂದು ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೇತನ ಮಂಡಲಿ ಶಿಫಾರಸು ಬರುವ ತನಕ ಕೈಗಾರಿಕೆಗಳಲ್ಲಿ ವೇತನ ಸ್ತಂಭನಕ್ಕೆ ಸಲಹೆ<br /> ನವದೆಹಲಿ, ಏ. 19– </strong>ಕೈಗಾರಿಕೆಗಳ ವೇತನ ಮಂಡಲಿಯ ಶಿಫಾರಸುಗಳ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಕೈಗಾರಿಕೆಯಲ್ಲಿ ವೇತನ ಸ್ಥಗಿತಗೊಳಿಸಬೇಕೆಂಬ ಮಹತ್ವದ ವಿಷಯವನ್ನು ಈ ವಾರಾಂತ್ಯದಲ್ಲಿ ಇಲ್ಲಿ ಸೇರಲಿರುವ ತ್ರಿಪಕ್ಷೀಯ ಕಾರ್ಮಿಕ ಸಮ್ಮೇಳನ ಪರಿಶೀಲಿಸುವುದು.</p>.<p><strong>ಶಾಸಕರಿಗೇ ‘ಕಾಂಗ್ರೆಸ್ಸು’<br /> ಮುಂಬೈ, ಏ. 19–</strong> ಮಹಾರಾಷ್ಟ್ರ ಸರಕಾರದ ವಿಧಾನಮಂಡಲದ ಕಚೇರಿಯು ಕೆಲವು ಮಂದಿ ಸದಸ್ಯರಿಗೆ ಅವರಿಗೆ ಕೊಡಬೇಕಾದ ಹಣದ ಬಗ್ಗೆ ನೀಡಿದ ಕೆಲವು ಚೆಕ್ಕುಗಳನ್ನು, ಸರಕಾರದ ಲೆಕ್ಕದಲ್ಲಿ ಹಣವಿಲ್ಲದ ಕಾರಣ, ರಿಜರ್ವ್ ಬ್ಯಾಂಕ್ ತಿರಸ್ಕರಿಸಿತು.</p>.<p>ಕಾಂಗ್ರೆಸ್ ಪಕ್ಷದ ವಿಧಾನಸಭಾ ಸದಸ್ಯ ಶ್ರೀ ಪಿ.ಎಚ್. ವೋರಾ ಅವರಿಗೆ ಈ ತಿಂಗಳು 13 ರಂದು ನೀಡಿದ್ದ 200 ರೂಪಾಯಿಗಳ ಮೌಲ್ಯದ ಚೆಕ್ಕೂ ತಿರಸ್ಕೃತವಾದವುಗಳಲ್ಲೊಂದು.</p>.<p><strong>ಗೊಬ್ಬರ ಹಾಗೂ ತೈಲ ಕುರಿತ ಸರ್ಕಾರದ ನೀತಿ ಬಗ್ಗೆ ಉಗ್ರ ಟೀಕೆ<br /> ನವದೆಹಲಿ, ಏ. 19– </strong>ರಾಸಾಯನಿಕ ಗೊಬ್ಬರ ಉತ್ಪಾದನಾ ಗುರಿಯನ್ನು ಪೂರ್ಣ ಮಾಡುವುದರಲ್ಲಿ ಸರಕಾರ ವಿಫಲವಾಗಿದೆ ಎಂದು ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಟೀಕಿಸಿದರು.</p>.<p><strong>ಸರ್ಕಾರಿ ಉದ್ಯಮಗಳಲ್ಲಿ ಕಾರ್ಮಿಕ ಮಂಡಲಿ ರಚಿಸಲು ಸೂಚನೆ<br /> ನವದೆಹಲಿ, ಏ. 19–</strong> ಕಾರ್ಮಿಕ ಸಂಘಗಳನ್ನು ಬದಿಗೊತ್ತಿ, ಕಾರ್ಮಿಕರಿಂದಲೇ ಚುನಾಯಿತ ಕಾರ್ಮಿಕ ಮಂಡಲಿಯೊಂದನ್ನು ರಚಿಸಬೇಕೆಂಬ ಸೂಚನೆಯನ್ನು ಕೇಂದ್ರ ಕಾರ್ಮಿಕ ಸಚಿವ ಶ್ರೀ ಜೆ.ಎಲ್. ಹಾಥಿ ಅವರು ಸರ್ಕಾರಿ ಕ್ಷೇತ್ರದ ಉದ್ಯಮಗಳ ಪದಾಧಿಕಾರಿಗಳ ಸಮ್ಮೇಳನದಲ್ಲಿ ಇಂದು ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>