ನವದೆಹಲಿ, ಜ. 20 (ಪಿಟಿಐ)– ಹೆಸರಾಂತ ನಾಟಕಕಾರ, ನಿರ್ದೇಶಕ ಹಾಗೂ ನಟ ಗಿರೀಶ್ ಕಾರ್ನಾಡ್ ಅವರನ್ನು 1998ರ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕಕ್ಕೆ ಇದು ಏಳನೆಯ ಜ್ಞಾನಪೀಠ ಪ್ರಶಸ್ತಿ. ಇದರೊಂದಿಗೆ ಭಾರತೀಯ ಸಾಹಿತ್ಯ ಲೋಕದಲ್ಲಿ ಕರ್ನಾಟಕ ಹೆಮ್ಮೆಯ ಸ್ಥಾನ ಪಡೆಯಿತು.
ಇದುವರೆಗೆ ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯಯ್ಂಗಾರ್, ಶಿವರಾಮ ಕಾರಂತ, ವಿ.ಕೃ. ಗೋಕಾಕ್ ಹಾಗೂ ಯು.ಆರ್. ಅನಂತಮೂರ್ತಿ ಅವರು ಈ ಪ್ರತಿಷ್ಠಿತ ಪುಸ್ಕಾರಕ್ಕೆ ಪಾತ್ರರಾಗಿದ್ದಾರೆ.