ಹುಬ್ಬಳ್ಳಿ, ಆ. 16– ಸೋಮವಾರ ಗೋಲಿಬಾರ್, ಕರ್ಫ್ಯೂ ಮತ್ತು ಹಿಂಸಾಚಾರದ ಘಟನೆಗಳಿಂದ ತಲ್ಲಣಿಸಿದ್ದ ಹುಬ್ಬಳ್ಳಿಯಲ್ಲಿ ಇಂದು ಬಹುತೇಕ ಶಾಂತಿ ನೆಲೆಸಿದ್ದು, ಒಂದೆರಡು ಕಡೆ ಕಲ್ಲುತೂರಾಟ, ರಸ್ತೆ ತಡೆ ಬಿಟ್ಟರೆ ಯಾವುದೇ ಅಹಿತ ಘಟನೆ ಜರುಗಲಿಲ್ಲ. ಇಂದು ಮಧ್ಯರಾತ್ರಿವರೆಗೆ ಜಾರಿಯಲ್ಲಿರುವ ಕರ್ಫ್ಯೂವನ್ನು ವಿಸ್ತರಿಸುವ ಯೋಚನೆ ಇಲ್ಲ ಎಂದು ಡಿಜಿಪಿ ರಾಮಲಿಂಗಂ ತಿಳಿಸಿದ್ದಾರೆ.