<p><strong>ಬಿಹಾರದಲ್ಲಿ ಲಲ್ಲೂ ನೇತೃತ್ವದ ಸರ್ಕಾರ<br />ಪಟ್ನಾ, ಏ. 3 (ಪಿಟಿಐ)–</strong> ಬಿಹಾರ ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಲಲ್ಲೂ ಪ್ರಸಾದ್ ಯಾದವ್ ಅವರು ಇಂದು ಸರ್ವಾನುಮತದಿಂದ ಪುನರಾಯ್ಕೆಯಾದರು.</p>.<p>ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಲಲ್ಲೂ ಅವರನ್ನು ರಾಜ್ಯಪಾಲ ಎ.ಆರ್. ಕಿದ್ವಾಯಿ ಆಹ್ವಾನಿಸಿದ್ದು, ನಾಳೆ ಸಂಜೆ 4 ಗಂಟೆಗೆ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಇರುವ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಪ್ರತಿಮೆ ಎದುರು ಲಲ್ಲೂ ಸಂಪುಟ ಅಧಿಕಾರ ವಹಿಸಿಕೊಳ್ಳಲಿದೆ.</p>.<p><strong>ಜೈನ್ ಆಯೋಗದ ಮುಂದೆ ಸರ್ಕಾರ– ಕಾಂಗೈ ಘರ್ಷಣೆ<br />ನವದೆಹಲಿ, ಏ. 3 (ಯುಎನ್ಐ)– </strong>ರಾಜೀವ್ ಗಾಂಧಿ ಕಗ್ಗೊಲೆ ಸಂಚಿನ ವಿಚಾರಣೆ ನಡೆಸಿರುವ ಜೈನ್ ಆಯೋಗದ ಮುಂದೆ ಕೇಂದ್ರ ಸರ್ಕಾರ ಮತ್ತು ಎಐಸಿಸಿ ವಕೀಲರ ನಡುವೆ ಬಿಸಿ ವಾಗ್ವಾದ ಏರ್ಪಟ್ಟಿತು.</p>.<p>ಎಐಸಿಸಿ ವಕೀಲರು ಕೇಳಿರುವ ಕೆಲ ಕಡತಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಅವು ಪ್ರಧಾನಿ ಕಚೇರಿಯಲ್ಲಿ ಪತ್ತೆಯಾಗಿಲ್ಲ. ಹುಡುಕಾಟ ನಡೆದಿದೆ ಎಂದು ಸರ್ಕಾರಿ ವಕೀಲ ಬಿ. ದತ್ತಾ ಅವರು ಆಯೋಗಕ್ಕೆ ತಿಳಿಸಿದ್ದಕ್ಕೆ ಎಐಸಿಸಿ ವಕೀಲ ತೀವ್ರವಾಗಿ ಆಕ್ಷೇಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಹಾರದಲ್ಲಿ ಲಲ್ಲೂ ನೇತೃತ್ವದ ಸರ್ಕಾರ<br />ಪಟ್ನಾ, ಏ. 3 (ಪಿಟಿಐ)–</strong> ಬಿಹಾರ ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಲಲ್ಲೂ ಪ್ರಸಾದ್ ಯಾದವ್ ಅವರು ಇಂದು ಸರ್ವಾನುಮತದಿಂದ ಪುನರಾಯ್ಕೆಯಾದರು.</p>.<p>ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಲಲ್ಲೂ ಅವರನ್ನು ರಾಜ್ಯಪಾಲ ಎ.ಆರ್. ಕಿದ್ವಾಯಿ ಆಹ್ವಾನಿಸಿದ್ದು, ನಾಳೆ ಸಂಜೆ 4 ಗಂಟೆಗೆ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಇರುವ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಪ್ರತಿಮೆ ಎದುರು ಲಲ್ಲೂ ಸಂಪುಟ ಅಧಿಕಾರ ವಹಿಸಿಕೊಳ್ಳಲಿದೆ.</p>.<p><strong>ಜೈನ್ ಆಯೋಗದ ಮುಂದೆ ಸರ್ಕಾರ– ಕಾಂಗೈ ಘರ್ಷಣೆ<br />ನವದೆಹಲಿ, ಏ. 3 (ಯುಎನ್ಐ)– </strong>ರಾಜೀವ್ ಗಾಂಧಿ ಕಗ್ಗೊಲೆ ಸಂಚಿನ ವಿಚಾರಣೆ ನಡೆಸಿರುವ ಜೈನ್ ಆಯೋಗದ ಮುಂದೆ ಕೇಂದ್ರ ಸರ್ಕಾರ ಮತ್ತು ಎಐಸಿಸಿ ವಕೀಲರ ನಡುವೆ ಬಿಸಿ ವಾಗ್ವಾದ ಏರ್ಪಟ್ಟಿತು.</p>.<p>ಎಐಸಿಸಿ ವಕೀಲರು ಕೇಳಿರುವ ಕೆಲ ಕಡತಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಅವು ಪ್ರಧಾನಿ ಕಚೇರಿಯಲ್ಲಿ ಪತ್ತೆಯಾಗಿಲ್ಲ. ಹುಡುಕಾಟ ನಡೆದಿದೆ ಎಂದು ಸರ್ಕಾರಿ ವಕೀಲ ಬಿ. ದತ್ತಾ ಅವರು ಆಯೋಗಕ್ಕೆ ತಿಳಿಸಿದ್ದಕ್ಕೆ ಎಐಸಿಸಿ ವಕೀಲ ತೀವ್ರವಾಗಿ ಆಕ್ಷೇಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>