<p><strong>ಸಾಧನೆ ತೋರಲು ಸಮಯ ಬೇಕಿತ್ತು: ಗುಜ್ರಾಲ್<br />ನವದೆಹಲಿ, ಜ. 30 (ಪಿಟಿಐ)– </strong>ಸಾರ್ವಜನಿಕ ಜೀವನದಲ್ಲಿ ನೂತನ ಸಂಹಿತೆ ಅಳವಡಿಸಿ ಹುದ್ದೆಗೆ ಗೌರವ ತರುವ ತಮ್ಮ ಕಾರ್ಯಕ್ರಮ ಗಳನ್ನು ಪೂರ್ಣಗೊಳಿಸಲು ಇನ್ನೂ ಸ್ವಲ್ಪ ಸಮಯ ಬೇಕಿತ್ತು ಎಂದು ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಹೇಳಿದ್ದಾರೆ.</p>.<p>ಮುಂಬೈನಲ್ಲಿ 1946ರ ಜುಲೈ 6ರಂದು ನಡೆದ ಕಾಂಗ್ರೆಸ್ ಅಧಿವೇಶನದ ವೇಳೆ ಅಸೋಸಿಯೇಟೆಡ್ ಪ್ರೆಸ್ನ (ಎಪಿ) ಛಾಯಾಗ್ರಾಹಕ ಮ್ಯಾಕ್ಸ್ ಡೆಸ್ಟರ್ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಗಾಂಧಿ– ನೆಹರೂ ಅವರ ಭಾವಚಿತ್ರವನ್ನು ಇಂದು ಸ್ವೀಕರಿಸಿದ ಬಳಿಕ ಗುಜ್ರಾಲ್ ಅವರು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು.</p>.<p>ಸಂಯುಕ್ತ ರಂಗವು ಕೇಂದ್ರದಲ್ಲಿ ಯಶಸ್ವಿ ಯಾಗಿ ಸಮ್ಮಿಶ್ರ ಸರ್ಕಾರವನ್ನು ನಿರ್ವಹಿಸಿದೆ ಎಂದ ಅವರು, ಪಾಲುದಾರ ಪಕ್ಷಗಳ ಕಚ್ಚಾಟದಿಂದ ಈ ಸರ್ಕಾರ ಉರುಳಿದ್ದಲ್ಲ ಎಂದು ನೆನಪಿಸಿದರು.</p>.<p><strong>ಭ್ರಷ್ಟಾಚಾರರಹಿತ ಸ್ವಚ್ಛ ಆಡಳಿತ, ಎಲ್ಲರಿಗೂ ಪಡಿತರ, ಶಾಲೆ ಸೌಲಭ್ಯ<br />ನವದೆಹಲಿ, ಜ. 30– </strong>ಉತ್ತಮ ಆಡಳಿತ, ಸಾಮಾಜಿಕ– ಆರ್ಥಿಕ ರಂಗದ ಸರ್ವವ್ಯಾಪಿ ಅಭಿವೃದ್ಧಿ, ಪ್ರತೀ ಕುಟುಂಬಕ್ಕೂ ಆಹಾರ ಧಾನ್ಯ, ಪ್ರತಿಯೊಬ್ಬ ಭಾರತೀಯನೂ ಆರೋಗ್ಯವಂತ ಮತ್ತು ಅಕ್ಷರಸ್ಥನಾಗುವ ಮತ್ತು ಪ್ರತಿಯೊಂದು ಮಗುವೂ ಶಾಲೆಗೆ ಸೇರುವ ವ್ಯವಸ್ಥೆ.</p>.<p>–ಇದು ಸಂಯುಕ್ತ ರಂಗದ ಆಶಯ. ಲೋಕಸಭೆ ಚುನಾವಣೆಗಾಗಿ ಸಂಯುಕ್ತ ರಂಗವು ಈ ಕನಿಷ್ಠ ಕಾರ್ಯಕ್ರಮಗಳು ಮತ್ತು ಜಂಟಿ ನೀತಿ ಘೋಷಣೆಯನ್ನು ಇಂದು ಜನತೆಯ ಮುಂದಿಟ್ಟಿತು.</p>.<p>ಸಂಯುಕ್ತ ರಂಗದ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಂಗದ ಜಂಟಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಧನೆ ತೋರಲು ಸಮಯ ಬೇಕಿತ್ತು: ಗುಜ್ರಾಲ್<br />ನವದೆಹಲಿ, ಜ. 30 (ಪಿಟಿಐ)– </strong>ಸಾರ್ವಜನಿಕ ಜೀವನದಲ್ಲಿ ನೂತನ ಸಂಹಿತೆ ಅಳವಡಿಸಿ ಹುದ್ದೆಗೆ ಗೌರವ ತರುವ ತಮ್ಮ ಕಾರ್ಯಕ್ರಮ ಗಳನ್ನು ಪೂರ್ಣಗೊಳಿಸಲು ಇನ್ನೂ ಸ್ವಲ್ಪ ಸಮಯ ಬೇಕಿತ್ತು ಎಂದು ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಹೇಳಿದ್ದಾರೆ.</p>.<p>ಮುಂಬೈನಲ್ಲಿ 1946ರ ಜುಲೈ 6ರಂದು ನಡೆದ ಕಾಂಗ್ರೆಸ್ ಅಧಿವೇಶನದ ವೇಳೆ ಅಸೋಸಿಯೇಟೆಡ್ ಪ್ರೆಸ್ನ (ಎಪಿ) ಛಾಯಾಗ್ರಾಹಕ ಮ್ಯಾಕ್ಸ್ ಡೆಸ್ಟರ್ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಗಾಂಧಿ– ನೆಹರೂ ಅವರ ಭಾವಚಿತ್ರವನ್ನು ಇಂದು ಸ್ವೀಕರಿಸಿದ ಬಳಿಕ ಗುಜ್ರಾಲ್ ಅವರು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು.</p>.<p>ಸಂಯುಕ್ತ ರಂಗವು ಕೇಂದ್ರದಲ್ಲಿ ಯಶಸ್ವಿ ಯಾಗಿ ಸಮ್ಮಿಶ್ರ ಸರ್ಕಾರವನ್ನು ನಿರ್ವಹಿಸಿದೆ ಎಂದ ಅವರು, ಪಾಲುದಾರ ಪಕ್ಷಗಳ ಕಚ್ಚಾಟದಿಂದ ಈ ಸರ್ಕಾರ ಉರುಳಿದ್ದಲ್ಲ ಎಂದು ನೆನಪಿಸಿದರು.</p>.<p><strong>ಭ್ರಷ್ಟಾಚಾರರಹಿತ ಸ್ವಚ್ಛ ಆಡಳಿತ, ಎಲ್ಲರಿಗೂ ಪಡಿತರ, ಶಾಲೆ ಸೌಲಭ್ಯ<br />ನವದೆಹಲಿ, ಜ. 30– </strong>ಉತ್ತಮ ಆಡಳಿತ, ಸಾಮಾಜಿಕ– ಆರ್ಥಿಕ ರಂಗದ ಸರ್ವವ್ಯಾಪಿ ಅಭಿವೃದ್ಧಿ, ಪ್ರತೀ ಕುಟುಂಬಕ್ಕೂ ಆಹಾರ ಧಾನ್ಯ, ಪ್ರತಿಯೊಬ್ಬ ಭಾರತೀಯನೂ ಆರೋಗ್ಯವಂತ ಮತ್ತು ಅಕ್ಷರಸ್ಥನಾಗುವ ಮತ್ತು ಪ್ರತಿಯೊಂದು ಮಗುವೂ ಶಾಲೆಗೆ ಸೇರುವ ವ್ಯವಸ್ಥೆ.</p>.<p>–ಇದು ಸಂಯುಕ್ತ ರಂಗದ ಆಶಯ. ಲೋಕಸಭೆ ಚುನಾವಣೆಗಾಗಿ ಸಂಯುಕ್ತ ರಂಗವು ಈ ಕನಿಷ್ಠ ಕಾರ್ಯಕ್ರಮಗಳು ಮತ್ತು ಜಂಟಿ ನೀತಿ ಘೋಷಣೆಯನ್ನು ಇಂದು ಜನತೆಯ ಮುಂದಿಟ್ಟಿತು.</p>.<p>ಸಂಯುಕ್ತ ರಂಗದ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಂಗದ ಜಂಟಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>